News Karnataka Kannada
Monday, April 29 2024
ಮಡಿಕೇರಿ

ಮಡಿಕೇರಿ ವಕೀಲರ ಸಂಘದಿಂದ ಪ್ರತಿಭಟನೆ

Madikeri Bar Association protests
Photo Credit : By Author

ಮಡಿಕೇರಿ: ವಕೀಲರ ಸಂರಕ್ಷಣೆ ಕಾಯಿದೆ ಜಾರಿಗೆ ತರಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಮಡಿಕೇರಿಯ ವಕೀಲರು
ನ್ಯಾಯಾಲಯ ಮುಂಭಾಗ ಘೋಷಣೆ ಕೂಗಿ ಪ್ರತಿಭಟಿಸಿದರು.

ವಕೀಲರ ಸಂಘದ ಅಧ್ಯಕ್ಷರಾದ ಕೆ. ಡಿ. ದಯಾನಂದ ಮಾತನಾಡಿ, ವಕೀಲರು ನ್ಯಾಯಾಂಗದ ಗೌರವ ಮತ್ತು ಘನತೆ ಯನ್ನು ಕಾಪಾಡಿಕೊಡು ಕಕ್ಷದಾರರಿಗೆ ನ್ಯಾಯಾ ಒದಗಿಸುವ ಪವಿತ್ರ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತಾರೆ. ಕೆಲವು ಸಲ ತಮ್ಮ ಸಂಸಾರವನ್ನು ಕೂಡ ಮರೆಯುತಾರೆ. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಕೆಲಸ ಮಾಡುವಾಗ ಸಾರ್ವಜನಿಕರಿಂದಲೂ, ಪೊಲೀಸರಿಂದಲೂ ದೌರ್ಜನ್ಯ, ಬೆದರಿಕೆ, ಹಲ್ಲೆ ನಡೆಯುತಿದ್ದು, ಜನ ಸಾಮಾನ್ಯರಿಗೆ ರಕ್ಷಣೆ ಕೊಡುವ ವಕೀಲರಿಗೆ ರಕ್ಷಣೆ ಇಲ್ಲದಂತೆ ಆಗಿದೆ ಮತ್ತು ವಕೀಲರರು ಭಯದ ವಾತಾವರಣದಲ್ಲಿ ಕೆಲಸ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿರುವುದು ದುರದೃಷ್ಟಕರ ಎಂದು ಹೇಳಿದರು. ವಕೀಲರ ಸಂರಕ್ಷಣೆ ಕಾಯಿದೆ 2021 ನ್ನು ಜಾರಿಗೆ ತಂದು ವಕೀಲರು ನಿರ್ಭಯವಾಗಿ ಕೆಲಸ ಮಾಡುವಂತ ಸನ್ನಿವೇಶ ಸರ್ಕಾರ ಕಲ್ಪಿಸಬೇಕು ಎಂದು ಸರ್ಕಾರವನ್ನು ಒತ್ತಾಯ ಮಾಡಿದರು.

ಸದ್ರಿ ಕಾಯಿದೆ ಜಾರಿಗೆ ತರದಿದ್ದರೆ ಮುಂದೆ ವಕೀಲರ ಮೇಲೆ ನಿರಂತರ ದೌರ್ಜನ್ಯ ನಡೆಯುವ ಸಾಧ್ಯತೆ ಜಾಸ್ತಿ. ಹಾಗಾಗಿ ನಾವೆಲ್ಲರೂ ಹೋರಾಟ ಮಾಡುವುದು ಅನಿವಾರ್ಯ ಎಂದು ಹೇಳಿದರು. ಬೆಳಗಾವಿಯಲ್ಲಿ ನಡೆಯುವ ವಿಧಾನ ಸಭಾ ಅಧಿವೇಶನದಲ್ಲಿ ವಕೀಲರ ಸಂರಕ್ಷಣೆ ಕಾಯಿದೆಯನ್ನು ಮಂಡಿಸಬೇಕು ಮತ್ತು ಕಾನೂನನ್ನು ಜಾರಿಗೆ ತಂದು ವಕೀಲ ಸಮುದಾಯಕ್ಕೆ ನ್ಯಾಯಾ ಒದಗಿಸುವ ಕೆಲಸ ಸರ್ಕಾರ ಮಾಡಬೇಕು ಎಂದು ಮಾನ್ಯ ಮುಖ್ಯ ಮಂತ್ರಿ ಶ್ರೀ ಬಸವರಾಜು ಬೊಮ್ಮಾಯಿ ಯವರಿಗೆ ಕೊಡಗು ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರ ಅರ್ಪಿಸಿದರು.

ಈ ಸಂಧರ್ಭ ವಕೀಲರ ಸಂಘದ ಕಾರ್ಯದರ್ಶಿ ಎಂ. ಕೆ. ಅರುಣ್ ಕುಮಾರ್, ಉಪಾಧ್ಯಕ್ಷರಾದ ಕೆ. ಎಸ್. ತಮ್ಮಯ್ಯ ಹಾಗೂ ಜಂಟಿ ಕಾರ್ಯದರ್ಶಿ ಎಂ. ವಿ.ಸಂಜಯ್ ರಾಜ್, ಖಜಾಂಚಿ ಬಿ. ಸಿ. ದೇವಿಪ್ರಸಾದ್, ಪದಾಧಿಕಾರಿಗಳಾದ ಡಿ. ಕೆ. ರಾಜೇಶ್, ಪಿ. ಆರ್. ಚಂದನ್, ಡಿ. ಎನ್.ಡೊಮಿನಿಕ್, ಭಾನುಪ್ರಕಾಶ್, ತಾಹ ಯಾಸೀನ್, ಸುದಯ್ ನಾಣಯ್ಯ, ದಿವ್ಯಾ ನಂಜಪ್ಪ, ಲತಾಕುಮಾರಿ ಹಾಗೂ ವಕೀಲರ ಸಂಘದ ಸದಸ್ಯರು ಹಾಜರಿದ್ದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
TV1 NEWS UPDATE

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು