ಮಡಿಕೇರಿ: ನಗರದ ಬೂತ್ ನಂ 217 ವ್ಯಾಪ್ತಿಯಲ್ಲಿ ಜೂನಿಯರ್ ಕಾಲೇಜ್ ರಸ್ತೆಯಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮತಯಾಚಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ,ಮಾಜಿ ಶಾಸಕಿ ವೀಣಾ ಅಚ್ಚಯ್ಯ,ಹೆಚ್.ಎಂ.
ನಂದ ಕುಮಾರ್ ಸುರಯ್ಯ ಅಬ್ರಾರ್ ,ಮುನೀರ್ ಅಹಮದ್,ಸೂರಜ್ ಹೊಸೂರ್,ಅಬ್ದುಲ್ ರಜಾಕ್ ,ಮಂಡಿರ ಸದಾ ಮುದ್ದಪ್ಪ,ಪುಷ್ಪ ಪೂಣಚ್ಚ ಸೇರಿದಂತೆ ಕಾಂಗ್ರೆಸ್ ಮುಖಂಡರು ಪಾಲ್ಗೊಂಡಿದ್ದರು.
ಮಡಿಕೇರಿ ನಗರ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಹಾಗೂ ಬೂತ್ ಅಧ್ಯಕ್ಷ ತೆನ್ನಿರ ಮೈನಾ ನೇತೃತ್ವದಲ್ಲಿ ಮತಯಾಚನೆ ನಡೆಸಲಾಯಿತು.