ಮಡಿಕೇರಿ: ಇಂದು ಬಿಜೆಪಿ ಅಭ್ಯರ್ಥಿ ಯದುವೀರ್ ಸಮ್ಮುಖದಲ್ಲಿ ಬೊಳ್ಳಜಿರ ಅಯ್ಯಪ್ಪ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕೊಡವ ಮಕ್ಕಳ ಕೂಟದ ಸ್ಥಾಪಕರು ಹಾಗೂ ಕೊಡವ ಭಾಷಾ ಪುಸ್ತಕಗಳ ಪ್ರಕಟಣೆಯಲ್ಲಿ ಹೆಸರುವಾಸಿಯಾಗಿರುವ ಬೊಳ್ಳಜಿರ ಅಯ್ಯಪ್ಪ ಅವರು ಇಂದು ಕುಶಾಲನಗರದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ವಿಧಾನ ಪರಿಷತ್ ಸದಸ್ಯ ಆಗಿದ್ದ ಸಂದರ್ಭ ವೀಣಾ ಅಚ್ಚಯ್ಯ ಅವರ ಕಚೇರಿ ಕಾರ್ಯದರ್ಶಿ ಆಗಿದ್ದರು. ಈ ಬಾರಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿ ಕೂಡ ಆಗಿದ್ದರು. ಅಧ್ಯಕ್ಷ ಸ್ಥಾನ ದೊರಕದ ಹಿನ್ನೆಲೆಯಲ್ಲಿಅಸಮಾಧಾನಗೊಂಡಿದ್ದ ಅಯ್ಯಪ್ಪ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆ ಆಗಿದ್ದಾರೆ.ಇವರ ಅನೇಕ ಗೆಳೆಯರು ಕೂಡ ಇಂದು ಬಿಜೆಪಿ ಸೇರಿದರು.