News Karnataka Kannada
Saturday, May 11 2024
ಮಡಿಕೇರಿ

ಕೊಡಗು: ಹೋಂ ಸ್ಟೇ ಗಳಿಗೆ ಬರುವ ಅತಿಥಿಗಳ ಬಗ್ಗೆ ಗಂಭೀರವಾಗಿ ಗಮನ ನೀಡಿ- ರಾಬಿನ್

Kodagu: Pay serious attention to guests coming to homestays: Robin
Photo Credit : By Author

ಕೊಡಗು: ದಕ್ಷಿಣ ಕೊಡಗಿನ ಹೋಂ ಸ್ಟೇ ಒಂದರಲ್ಲಿ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶಾರಿಕ್ ತಂಗಿದ್ದ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಕೊಡಗಿನ ಹೋಂ ಸ್ಟೇ ಗಳು ಉಗ್ರರಿಗೆ ಆಶಯ ತಾಣವಾಗದಿರಲಿ ಎಂದು ಎಚ್ಚರಿಸಿದ ರಾಬಿನ್.

ಕೊಡಗು ಜಿಲ್ಲಾ ಆಡಳಿತ ಕೂಡ ಹೋಂ ಸ್ಟೇ ಗಳ ವಿಚಾರದಲ್ಲಿ ತೀವ್ರ ನಿಗಾ ವಹಿಸುವಂತೆ ಒತ್ತಾಯ. ತಮ್ಮ ಸ್ಟೇ ಗಳಿಗೆ ಬರುವ ಜನರ ಸಂಪೂರ್ಣ ಮಾಹಿತಿ ಕೇಳಿಕೊಂಡ ನಂತರವೇ ಕೊಠಡಿಗಳನ್ನು ಕೊಡುವಂತೆ ರಾಬಿನ್ ಸೂಚನೆ ನೀಡಿದ್ದಾರೆ.

ದೇಶದ ಭದ್ರತೆ ಮುಖ್ಯ ಎಂಬುದನ್ನು ಹೋಂ ಸ್ಟೇ ಮಾಲೀಕರು ಅರಿತುಕೊಳ್ಳಬೇಕು. ಕೊಡಗಿನ ಆತಿತ್ಯ ಸೇವೆ ದುರುಪಯೋಗ ಆಗಬಾರದು. ದೇಶದ ರಕ್ಷಣೆಗೆ ನಮ್ಮಿಂದ ಸಾಧ್ಯವಾದಷ್ಟು ಕೊಡುಗೆ ನೀಡಬೇಕೆ ಹೊರತು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಕೊಡಗು ಆಶ್ರಯ ತಾಣ ಆಗಬಾರದು ಎಂದು ರಾಬಿನ್ ಅಭಿಪ್ರಾಯ.

ಮಡಿಕೇರಿ ಯಲ್ಲಿ ಇದೇ ಗುರುವಾರ ಜಿಲ್ಲಾ ಬಿಜೆಪಿಯ ಸುಸಜ್ಜಿತ ಭವನಕ್ಕೆ ಭೂಮಿ ಪೂಜೆ. ಎಂಟು ಎಕ್ರೆ ಜಾಗದಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಪ್ರಕಾಶ್ ನಡ್ಡಾ ಅವರಿಂದ ವರ್ಚುವಲ್ ಮೂಲಕ ಭವನಕ್ಕೆ ಭೂಮಿ ಪೂಜೆ. ಜಿಲ್ಲಾ ಉಸ್ತುವಾರಿ ಸಚಿವರು ಸಂಸದರು ಶಾಸಕರು ಸೇರಿದಂತೆ ಬಿಜೆಪಿಯ ಪ್ರಮುಖರು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಮಾಹಿತಿ.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರಾದ ಬಿ.ಬಿ.ಭಾರತೀಶ್ , ಮಹೇಶ್ ಜೈನಿ, ಬಿ ಕೆ ಅರುಣ್ ಕುಮಾರ್, ಶಜಿಲ್ ಕೃಷ್ಣ ಮತ್ತು ಸತೀಶ್ ಇದ್ದರು.
TV1 NEWS UPDATE

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು