ಉಳ್ಳಾಲ: ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ಸೈನ್ಸ್ ರಿಸರ್ಚ್ (ಐ.ಸಿ.ಎಸ್.ಎಸ್.ಆರ್) ಯಿಂದ ಕೊಡಲ್ಪಡುವ 2022-23 ನೇ ಸಾಲಿನ ಪೋಸ್ಟ್ ಡಾಕ್ಟೋರಲ್ ಫೆಲೋಶಿಪ್ (ಪಿ.ಡಿ.ಎಫ್) ಗೆ ಮಂಗಳೂರು ವಿಶ್ವವಿದ್ಯಾಲಯ ಸಮಾಜಕಾರ್ಯ ವಿಭಾಗದ ಉಪನ್ಯಾಸಕ ಡಾ. ಹರೀಶ್ ಕಲಾಯಿ ಇವರು ಸಮಾಜ ಕಾರ್ಯ ವಿಭಾಗದಲ್ಲಿ ಕರ್ನಾಟಕದಿಂದ ಆಯ್ಕೆಯಾಗಿರುತ್ತಾರೆ.
ಅವರು ʼಸೈಕೋ ಸೋಶಿಯಲ್ ಪ್ರಾಬ್ಲೆಮ್ಸ್ ಆಫ್ ಸಿಂಗಲ್ ಮದರ್ಸ್ ಕಂಪ್ಯಾರಿಸನ್ ಆಫ್ ಇನ್ಸ್ಟಿಟ್ಯೂಷನಲೈಸ್ಡ್ ಅಂಡ್ ನಾನ್ ಇನ್ಸ್ಟಿಟ್ಯೂಷನಲೈಸ್ಡ್ ಕಂಡೀಷನ್ ವಿಥ್ ರೆಫರೆನ್ಸ್ ಟು ಕರ್ನಾಟಕ ಸ್ಟೇಟ್ʼ ಎಂಬ ಪ್ರಬಂಧವನ್ನು ಮಂಡಿಸಲಿದ್ದಾರೆ.
ಇವರು ಕಲಾಯಿ ಬೊಮ್ಮಣ್ಣಗೌಡ ಮತ್ತು ದೇವಕಿ ಇವರ ಪುತ್ರ.