ಕೊಡಗು: ಧರಣಿ ನಿರತ ಕಬ್ಬು ಬೆಳೆಗಾರರ ಮೇಲೆ ನಡೆದ ಪೋಲಿಸ್ ದೌರ್ಜನ್ಯವನ್ನು ಕರ್ನಾಟಕ ರಾಜ್ಯ ರೈತ ಸಂಘ ಕೊಡಗು ಜಿಲ್ಲಾ ಘಟಕ ತೀವ್ರವಾಗಿ ಖಂಡಿಸಿದೆ.
ಕಳೆದ 52 ದಿನಗಳಿಂದ ಮಂಡ್ಯ ಜಿಲ್ಲೆಯ ರೈತರು ತಾವು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡುವಂತೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಮಂಡ್ಯ ಜಿಲ್ಲೆಯ ಪೋಲಿಸರು ಧರಣಿ ನಿರತ ರೈತರ ಶಾಮಿಯಾನವನ್ನು ಎಳೆದು ಧ್ವಂಸ ನಡೆಸಿದ್ದರು.
ನಂತರ ಹೋರಾಟದ ಲ್ಲಿದ್ದ ರೈತರನ್ನು ಪೋಲಿಸರು ಬಂಧಿಸಿ, ವಶಕ್ಕೆ ಪಡೆದಿದ್ದರು. ಇದನ್ನು ಕೊಡಗು ಜಿಲ್ಲಾ ರೈತ ತೀವ್ರ ವಾಗಿ ಖಂಡಿಸಿದೆ,ಅಲ್ಲದೇ ದೌರ್ಜನ್ಯ ಎಸಗಿದ ಪೋಲಿಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಅಮಾನತ್ತು ಮಾಡುವಂತೆ ಜಿಲ್ಲಾದ್ಯಕ್ಷರಾದ ಕಾಡ್ಯಮಾಡ ಮನು ಸೋಮಯ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.