ಮಾಕುಟ್ಟ: ಗಡಿ ಭಾಗದಲ್ಲಿ 30ಕ್ಕೂ ಹೆಚ್ಚು ಕೆಂಪು ಕಲ್ಲು ಹೊತ್ತ ಲಾರಿಗಳು ಸಾಲಾಗಿ ರಸ್ತೆ ಬದಿಯಲ್ಲಿ ನಿಂತಿರುವ ದೃಶ್ಯ ಕಂಡು ಬಂದಿದೆ.
ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದಂಡ ವಿಧಿಸಬೇಕಾಗುತ್ತದೆ. ಯಾವುದೇ ಪರವಾನಿಗೆ ಇಲ್ಲದ ಲಾರಿಗಳು ಇದುವರೆಗೆ ಎಲ್ಲಾ ರೀತಿಯ ಅಡ್ಜಸ್ಟ್ಮೆಂಟ್ ನಲ್ಲಿ ಜಿಲ್ಲೆಗೆ ಪ್ರವೇಶಿಸುತ್ತಿದ್ದು ಇದೀಗ ಈ ಅಕ್ರಮ ದಂದೆಗೆ ಕಡಿವಾಣ ಹಾಕಲಾಗಿದೆ.
ಅಲ್ಲಿನ ಲಾರಿ ಮಾಲೀಕರ ಸಂಘದವರು, ಕೆಂಪು ಕಲ್ಲಿನ್ನು ಸರಬರಾಜು ಮಾಡುವ ಅಲ್ಲನ್ ವಿಜು ಹಾಗೂ ಇದುವರೆಗೆ ಜಿಲ್ಲೆಯಲ್ಲಿ ದಂದೆ ನಡೆಸುತ್ತಿದ್ದ ಗುಂಪಿಗೆ ಕೂಡಿಲೇ ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ತಮ್ಮ ನಷ್ಟವನ್ನು ಬರೆಸಿಕೊಡುವಂತೆಯೂ ಹಾಗೂ ಇದುವರೆಗೆ ನಾವು ಮುಂಗಡವಾಗಿ ನೀಡಿದ ಡೀಲ್ ಹಣವನ್ನು ವಾಪಸ್ ಕೊಡುವಂತೆ ಒತ್ತಾಯ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ ಅಕ್ರಮ ದಂದೆಗೆ ಮೊದಲ ಹಂತದಲ್ಲಿ ಬ್ರೇಕ್ ಬಿದ್ದಂತಾಗಿದೆ.