ಮಂಗಳೂರು: ಮಂಗಳೂರಿನ ಕಡಲ್ಕೊರೆತ ಪ್ರದೇಶಕ್ಕೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿದರು. ಉಚ್ಚಿಲ ಬಟ್ಟಪಾಡಿ ಕಡಲ್ಕೊರೆತ ಪ್ರದೇಶದಲ್ಲಿ ಕಡಲ್ಕೊರೆತ ತೀವ್ರವಾಗಿದ್ದು, ಉಳ್ಳಾಲ ಶಾಸಕ, ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಸಾಥ್ ಉಸ್ತುವಾರಿ ಸಚಿವರಿಗೆ ಸಾಥ್ ನೀಡಿದರು.
ಖಾದರ್ ಮನವಿ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿದ ಸಚಿವರು. ಕಡಲ್ಕೊರೆತ ಸಂತ್ರಸ್ತರ ಸಮಸ್ಯೆ ಆಲಿಸಿದರು. ಈ ವೇಳೆ ಶಾಶ್ವತ ಪರಿಹಾರ ಒದಗಿಸುವಂತೆ ಸ್ಥಳೀಯರ ಆಗ್ರಹ ವ್ಯಕ್ತಪಡಿಸಿದರು. ಅಲ್ಲದೆ ಕಡಲ್ಕೊರೆತದಿಂದ ರಾತ್ರಿ ಕಳೆಯಲು ಭಯವಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ಸಭಾಧ್ಯಕ್ಷ ಯು.ಟಿ.ಖಾದರ್ ಕೂಡ ಸಮಸ್ಯೆ ಕುರಿತು ವಿವರಿಸಿದರು. ತಕ್ಷಣ ಸ್ಥಳೀಯ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಡಿಸಿಗೆ ಸಚಿವರು ಸೂಚಿಸಿದರು. ಮುಂದಿನ ವರ್ಷ ಸಭೆ ನಡೆಸಿ ಶಾಶ್ವತ ಯೋಜನೆ ರೂಪಿಸುವ ಭರವಸೆಯನ್ನು ಕೂಡ ನೀಡಿದರು.