News Karnataka Kannada
Friday, May 03 2024
ಮಡಿಕೇರಿ

ಕೊಡಗಿನಲ್ಲಿ ಟಿಂಬರ್ ಲಾರಿಗಳಿಗೆ ಹೇರಿರುವ ನಿರ್ಬಂಧವನ್ನು ಹಿಂಪಡೆಯುವಂತೆ ಒತ್ತಾಯ

Demand for lifting of ban on timber lorries in Kodagu
Photo Credit : News Kannada

ಮಡಿಕೇರಿ: ಕೊಡಗಿನಲ್ಲಿ ಟಿಂಬರ್ ಲಾರಿಗೆ ಹೇರಿರುವ ನಿರ್ಬಂಧವನ್ನು ಕೂಡಲೇ ಹಿಂಪಡೆಯು ವಂತೆ ವಿಧಾನ ಪರಿಷತಿನ ಮಾಜಿ ಸದಸ್ಯರಾದ ಸಿ.ಎಸ್ ಅರುಣ್ ಮಾಚಯ್ಯನವರು ಒತ್ತಾಯಿಸಿದ್ದಾರೆ.

ಪೊಲೀಸ್, ಅರಣ್ಯ,ಸಾರಿಗೆ ಹಾಗೂ ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳು ಸೇರಿಕೊಂಡು ಪ್ರತಿ ವರ್ಷ ಇದೊಂದು ಹಣ ಮಾಡುವ ವ್ಯವಸ್ಥೆಗೆ ನಿರ್ಬಂಧದ ಮೂಲಕ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಮಾಕುಟ್ಟ,ಕುಟ್ಟ ಸಂಪಾಜೆ ಮೂಲಕ 30 ರಿಂದ 50 ಟನ್ ತೂಕದ ಕಂಟೇನರ್ ಗಳು, ಲಾರಿಗಳು ಪ್ರತಿನಿತ್ಯ ಓಡಾಡುತ್ತಿದ್ದು ಇವುಗಳಿಗೆ ಇಲ್ಲದ ನಿರ್ಬಂಧ ಕೇವಲ ಟಿಂಬರ್ ಲಾರಿಗಳಿಗೆ ಮಾತ್ರ ಯಾಕೆ ಎಂದು ಪ್ರಶ್ನಿಸಿರುವ ಅರುಣ್ ಅವರು ಇದರಿಂದ ರೈತರ ಜೇಬಿಗೆ ಹೆಚ್ಚಿನ ಹೊರೆ ಬೀಳುತ್ತಿದೆ. ಇದೀಗ ಗೇಟ್ ಗಳಲ್ಲಿ ಹಣಕೊಟ್ಟು ಲಾರಿಗಳು ಓಡಾಡುತ್ತಿವೆ.

ಅಲ್ಲಿ ಇಲಾಖೆಗಳ ಸಿಬ್ಬಂದಿಗಳಿಗೆ ನೀಡುವ ಹಣ ಅದು ರೈತರಿಂದ ವ್ಯಾಪಾರಿಗಳು ಪಡೆಯಲಾಗುತ್ತಿದೆ. ಇದು ತಾಂತ್ರಿಕತೆ ಇಲ್ಲದೆ ಇರುವ ನಿರ್ಬಂಧ ಎಂದು ಹೇಳಿರುವ ಅರುಣ್ ಮಾಚಯ್ಯನವರು ತಾನು ಹೇಳಿದ್ದರಲ್ಲಿ ಸತ್ಯಾಂಶವಿಲ್ಲದೆ ಇದ್ದರೆ ಸಾಬೀತುಪಡಿಸಲಿ ಎಂದು ಸಂಬಂಧಿಸಿದವರಿಗೆ ಸವಾಲು ಎಸೆದಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಐದು ಕಂಟೇನರ್ ಗಳಲ್ಲಿ ದನಗಳನ್ನು ಗೋಣಿಕೊಪ್ಪಲು ಮಾರ್ಗವಾಗಿ ಸಾಗಿಸ್ತಿದ್ದರು ಇದೀಗ ನೂತನ ಶಾಸಕರುಗಳು ಕಟ್ಟುನಿಟ್ಟಿನ ಕ್ರಮ ಜರುಗಿಸಿ ದನ ಸಾಗಟ ಕೆಂಪುಕಲ್ಲು,ಮರಳು ದಂದೆಗೆ ಕಡಿವಾಣ ಹಾಕಿದ್ದಾರೆ. ರೈತರು ಬೆಳೆದ ಸಿಲ್ವರ್ ಮರ ಮಾರಾಟಕ್ಕೆ ತೊಂದರೆ ಆಗುತ್ತಿದ್ದು ಕೂಡಲೇ ಇಬ್ಬರು ಶಾಸಕರು ನಿರ್ಬಂಧವನ್ನು ಹಿಂಪಡೆಯಲು ಆದೇಶ ಹೊರಡಿಸಬೇಕು ಎಂದು ಅರುಣ್ ಮಾಚಯ್ಯನವರು ಹೇಳಿದ್ದಾರೆ.

ಕೊಡಗಿನ ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಶಾಸಕರುಗಳು ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಈ ಸಂದರ್ಭ ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು