ಕುಶಾಲನಗರ: ಏಪ್ರಿಲ್ 26 ರಂದು ಜರುಗಲಿರುವ ಲೋಕಸಭಾ ಚುನಾವಣೆ ಪೂರ್ವ ತಯಾರಿಯಾಗಿ ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ಶಿರಂಗಾಲ, ಮಣಜೂರು, ತೊರೆನೂರು, ಹೆಬ್ಬಾಲೆ, ಕೂಡಿಗೆ ಮತ್ತು ಕೂಡು ಮಂಗಳೂರು ಪಂಚಾಯಿತಿ ಭಾಗಗಳಲ್ಲಿ ಡಾ. ಮಂತರ್ ಗೌಡ. ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಪಿ ಶಶಿಧರ್ ರವರ ಅಧ್ಯಕ್ಷತೆಯಲ್ಲಿ ಬಿರುಸಿನ ಮತ ಪರ್ಯಾಟನೆ ಹಾಗೂ ಚುನಾವಣಾ ಪ್ರಚಾರವನ್ನು ಕೈಗೊಳ್ಳಲಾಗಿತ್ತು.
ವಿವಿಧ ರಾಜಕೀಯ ಪಕ್ಷಗಳ ಸುಮಾರು 200 ಕ್ಕೂ ಹೆಚ್ಚಿನ ಮುಖಂಡರು ಹಾಗೂ ಕಾರ್ಯಕರ್ತರು ಈ ಸಂಧರ್ಭ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಃಗಳನ್ನು ಒಪ್ಪಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.
ಇದೇ ಸಂಧರ್ಭ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಕೆ.ಪಿ ಚಂದ್ರಕಲ, ಕೆಪಿಸಿಸಿ ಸದಸ್ಯರಾದ ಮಂಜುನಾಥ್ ಗುಂಡೂರಾವ್, ಕೆಪಿಸಿಸಿ ಸಂಯೋಜಕರಾದ ನಟೇಶ್ ಗೌಡ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರು ಆದ ಜೋಸೆಫ್ ವಿಕ್ಟರ್ ಸೋನ್ಸ್, ಡಿಸಿಸಿ ಸದಸ್ಯರಾದ ಶಾಜಿ, ಹಮೀದ್ ಕೂಡಿಗೆ ಪ್ರಮುಖರಾದ ರಾಜಶೇಖರ್ ಹೆಬ್ಬಾಲೆ, ಕೃಷ್ಣೆ ಗೌಡ ತೊರೆನೂರು, ಟಿ.ಬಿ ಜಗದೀಶ್, ವಸಂತ್, ಅರುಣ್ ರಾವ್, ಅನಂತ್, ಸಂಜೀವಯ್ಯ, ಕಿರಣ್, ಕಿಶೋರ್, ಗ್ರಾಮ ಪಂಚಾಯಿತಿ ಪ್ರತಿನಿಧಿಗಳು ಹಾಗೂ ಮುಖಂಡರು ಉಪಸ್ಥಿತರಿದ್ದರು.