News Karnataka Kannada
Saturday, May 04 2024
ಮಡಿಕೇರಿ

ವಲಸಿಗ ಕಾರ್ಮಿಕರಿಂದ ತೋಟ ಮಾಲಕರ ಮೇಲೆ ಹಲ್ಲೆ: ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಶಾಸಕ ಬೋಪಯ್ಯ

Bopayya
Photo Credit :

ಕೊಡಗು: ಅಸ್ಸಾಂನವರೆಂದು ಹೇಳಿಕೊಂಡಿರುವ ತೋಟ ಕಾರ್ಮಿಕರು, ತೋಟದ ಮಾಲಕರ ಮೇಲೆ ಹಲ್ಲೆ ನಡೆಸಿರುವ ಘಟನೆ ಶನಿವಾರ ದಕ್ಷಿಣ ಕೊಡಗಿನ ಟಿ.ಶೆಟ್ಟಿಗೇರಿಯಲ್ಲಿ ನಡೆದಿದೆ. ಕಡಿಮೆ ವೇತನ ನೀಡಲಾಗುತ್ತಿದೆ ಎಂಬ ಕಾರಣಕ್ಕೆ ತೋಟ ಮಾಲಕರ ಮೇಲೆ ಈ ಹಲ್ಲೆ ನಡೆದಿರುವುದಾಗಿ ಹೇಳಲಾಗಿದ್ದು, ಘಟನೆಯ ಬಳಿಕ ಹಲ್ಲೆಕೋರರು ನಾಪತ್ತೆಯಾಗಿದ್ದಾರೆನ್ನಲಾಗಿದೆ.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಅವರು, ಶೀಘ್ರವೇ ಗೃಹ ಸಚಿವರನ್ನು ಭೇಟಿಯಾಗಿ ವಲಸಿಗರ ಮೂಲದ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸುವುದಾಗಿ ಹೇಳಿದ್ದಾರೆ.

ಯಾವುದೇ ಸ್ಥಳೀಯ ಕಾರ್ಮಿಕರಿಂದ ಈವರೆಗೂ ಮಾಲಕರ, ಮಾಲಕರ ಮನೆಯ, ಮಾಲಕರ ಕುಟುಂಬಸ್ಥರ ಮೇಲಾಗಲೀ ದಾಳಿ ನಡೆದ ಉದಾಹರಣೆಗಳಿಲ್ಲ. ಆದರೆ ಟಿ.ಶೆಟ್ಟಿಗೇರಿಯಲ್ಲಿ ನಡೆದಿರುವ ಘಟನೆಯಿಂದ ಅಸ್ಸಾಮಿಗರ ಹೆಸರಿನಲ್ಲಿರುವ ವಲಸಿಗರಿಂದ ಮಾಲಕರು ಸೇರಿದಂತೆ ಕೊಡಗಿನವರಿಗೆ ಭದ್ರತೆಯ ವಿಷಯದಲ್ಲಿ ಭವಿಷ್ಯದಲ್ಲಿ ಅಪಾಯವಿರುವಂತೆ ಭಾಸವಾಗುತ್ತಿದೆ ಎಂದು ಬೋಪಯ್ಯ ಕಳವಳ ವ್ಯಕ್ತಪಡಿಸಿದ್ದಾರೆ.

ಕಡಿಮೆ ವೇತನ ನೀಡಲಾಗುತ್ತಿದೆ ಎಂಬ ನೆಪದಲ್ಲಿ ಮಾಲಕರ ಮನೆಯ ಮೇಲೆಯೇ ದಾಳಿ ನಡೆಸಿ ಎಲ್ಲಾ ವಲಸಿಗರು ನಾಪತ್ತೆಯಾಗಿದ್ದಾರೆ. ಕಡಿಮೆ ವೇತನದ ಕಾರಣಕ್ಕೆ ತೋಟದಲ್ಲಿ ವಲಸಿಗರನ್ನು ಸೇರಿಸಿಕೊಂಡಲ್ಲಿ ಇಂತಹ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಕೊಡಗಿನ ನಿವಾಸಿಗಳಾದ ನಮಗೆ ಹಾಗೂ ಎಲ್ಲಾ ತೋಟದ ಮಾಲಕರಿಗೂ ಈ ಘಟನೆ ಒಂದು ಪಾಠವೂ ಹೌದು ಎಂದು ಅವರು ಹೇಳಿದ್ದಾರೆ.

ಆದ ಕಾರಣ ಸಂಬಂಧಪಟ್ಟ ಇಲಾಖೆಯ ಸಹಕಾರದೊಂದಿಗೆ ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ಸೂಕ್ತ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿರುವ ಅವರು, ಹಾಗೆಯೇ ಓಲೈಕೆ ರಾಜಕಾರಣ ಮಾಡುವವರು ಮೂಲ ನಿವಾಸಿಗಳ, ಹಾಗೂ ದೇಶದ ಭದ್ರತೆಯ ಬಗ್ಗೆ ಗಮನವಹಿಸಿ ವಲಸಿಗರ ವಿಚಾರದಲ್ಲಿ ರಾಜಕೀಯ ಬೆರೆಸಬಾರದು ಎಂದೂ ಸಲಹೆ ಮಾಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು