ಮಡಿಕೇರಿ: ಕಾಡೆಮ್ಮೆ ದಾಳಿಗೆ ಮಹಿಳೆ ಗಾಯಗೊಂಡಿರುವ ಘಟನೆ ಶನಿವಾರಸಂತೆ ಸಮೀಪದ ಮಾಲಂಬಿಯಲ್ಲಿ ಶುಕ್ರವಾರ ನಡೆದಿದೆ.
ಮುಳ್ಳೂರು ಗ್ರಾಮದ ಶೀಲಾವತಿ ಎಂಬವರೇ ಗಾಯಗೊಂಡವರಾಗಿದ್ದು, ಆಕೆಯನ್ನು ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ಸಾಗಿಸಲಾಗಿದೆ.
ಶುಕ್ರವಾರ ಮುಂಜಾನೆ ಕೆಲಸಕ್ಕೆಂದು ಮುಳ್ಳೂರು ಗ್ರಾಮದಿಂದ ಜೊತೆಗಾರರೊಂದಿಗೆ ಮಾಲಂಬಿ ಎಸ್ಟೇಟ್’ಗೆ ತೆರಳುತ್ತಿದ್ದಾಗ ಮೂರು ಕಾಡೆಮ್ಮೆಗಳು ಎದುರಾಗಿದ್ದು, ಈ ಪೈಕಿ ಒಂದು ಕಾಡೆಮ್ಮೆ ಶೀಲಾವತಿ ಅವರಿಗೆ ತಿವಿದು ಗಾಯಗೊಳಿಸಿದೆ. ಜೊತೆಯಲ್ಲಿದ್ದವರು ಕಿರುಚಿಕೊಂಡಾಗ ಕಾಡೆಮ್ಮೆ ತೋಟದೊಳಗೆ ತೆರಳಿರುವುದಾಗಿ ಹೇಳಲಾಗಿದೆ.