ಕೊಡಗು : ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗಬೇಕೆಂದು ಒತ್ತಾಯಿಸಿ ಬೆಂಗಳೂರಿನ ವಿದ್ಯಾರ್ಥಿ ಕಿರಣ್ ನಡೆಸುತ್ತಿರುವ ಸೈಕಲ್ ಜಾಥಾ ಅಭಿಯಾನಕ್ಕೆ ಕೊಡುಗು ಯುವಸೇನೆ ಬೆಂಬಲ ವ್ಯಕ್ತಪಡಿಸಿದೆ.
ಕರ್ನಾಟಕ ರಾಜ್ಯದ 23 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಕೊಡಗು ಜಿಲ್ಲೆಗೆ ಆಗಮಿಸಿದ ಕಿರಣ್ ಅವರನ್ನು ಮಡಿಕೇರಿಯಲ್ಲಿ ಭೇಟಿಯಾದ ಯುವಸೇನೆ ಪ್ರಮುಖರು ಅಭಿಯಾನದ ಕುರಿತು ಚರ್ಚಿಸಿದರು.
ಕೊಡಗು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ನಂತರ ಮಾತನಾಡಿದ ಕಿರಣ್, ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ಅಭಿಯಾನವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.
ಯುವ ಸೇನೆಯ ಪ್ರಮುಖರಾದ ಕುಲದೀಪ್ ಪೂಣಚ್ಚ, ಸಚಿನ್ ಮಂದಣ್ಣ, ಜಯಣ್ಣ, ಸೋನಾಲ್ ಪೂಜಾರಿ, ಲತಾ ಬೋಪಯ್ಯ, ಶಿಲ್ಪಾ ಕಿರಣ್, ವೇಣು ಪೊನ್ನೇಟಿ, ಚಾರಿಮಂಡ ಮನು ದೇವಯ್ಯ, ಇದಾಯತುಲ್ಲಾ ಮತ್ತಿತರರು ಹಾಜರಿದ್ದರು.