ವರುಣ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಪುತ್ರ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಇಂದು ನಂಜನಗೂಡು ತಾಲೂಕಿನ ಕುಲ್ಕುಂದ ಗ್ರಾಮದಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಸಿದರು.
ಬಳಿಕ ಮಾತನಾಡಿದ ಅವರು, ಕ್ಷೇತ್ರದಲ್ಲಿ ಬಿಜೆಪಿಯವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ನೀಡಿದ ಅಭಿವೃದ್ಧಿಯ ಆಡಳಿತದ ಬಗ್ಗೆ ಜನರು ಮುಖ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ ಎಂದರು.
ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಲ್ಲ. ಪ್ರಚಾರ ಮಾಡುವ ಪ್ರಧಾನ ಮಂತ್ರಿ ಎಂದು ಕಿಡಿಕಾರಿದರು. ಪ್ರವಾಹ ಆಗಿದ್ದಾಗ ಬಂದಿರಲಿಲ್ಲ ಕೋವಿಡ್ ಸಮಯದಲ್ಲಿ ಬಂದಿಲ್ಲ ಈಗ ಚುನಾವಣಾ ಎರಡು ತಿಂಗಳು ಇರುವ ಕಾರಣ ಪ್ರಚಾರಕ್ಕೆ ಪದೇ ಪದೇ ಬರುತ್ತಿದ್ದಾರೆ. ಪ್ರಧಾನಿಗಳ ಬಂಡವಾಳ ಜನರಿಗೆ ತಿಳಿದಿದೆ ಅವರಿಗೆ ಯಾರು? ವೋಟ್ ಕೊಡುವುದಿಲ್ಲ. ಕರ್ನಾಟಕ್ಕೆ ಬರುವುದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ, ಕ್ಯಾಮರಾ ಮುಂದೆ ಪೋಸ್ ಕೊಟ್ಟು ಹೋಗಬೇಕು ಅಷ್ಟೇ.
ಪ್ರತಿ ಬಾರಿ ಒಳ ಒಪ್ಪಂದ ಮಾಡಿಕೊಳ್ಳುವುದು ಬಿಜೆಪಿ ಮತ್ತು ಜೆಡಿಎಸ್, ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿಯಲ್ಲಿ ಏನು ಮಾಡಿದ್ದಾರೆ ಎಂಬುದು ಗೊತ್ತಿದೆ ಹಾಗೆಯೇ ಎಲ್ಲಾ ಕ್ಷೇತ್ರಗಳಲ್ಲೂ ಏನು ಕೆಲಸ ಮಾಡುತ್ತಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ಬಿಜೆಪಿ ಮತ್ತು ಆರ್ ಎಸ್ ಎಸ್ ವಿರುದ್ಧ ನಿಂತಿರೋದೆ ಕಾಂಗ್ರೆಸ್ ಪಕ್ಷ ಒಳ ಒಪ್ಪಂದ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಎಚ್ ಡಿ ಕುಮಾರಸ್ವಾಮಿಗೆ ಟಾಂಗ್ ನೀಡಿದರು.