ಬೇಲೂರು: ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ಅಂಕಿಹಳ್ಳಿ ಗ್ರಾಮದಲ್ಲಿ ಮರದ ದಿಮ್ಮಿ ಮೈಮೇಲೆ ಬಿದ್ದ ಪರಿಣಾಮ ಅವಿವಾಹಿತ ಯುವಕ ಮೃತಪಟ್ಟ ದುರ್ಘಟನೆ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ.
ಮೃತ ಮಂಜುನಾಥ್ (೨೭) ಮೂಲತಃ ಅರೇಹಳ್ಳಿ ಹೋಬಳಿ ಯ ನಾರ್ವೆ ಗ್ರಾಮ ಪಂಚಾ ಯಿತಿ ವ್ಯಾಪ್ತಿಯ ಉದುಮನ ಹಳ್ಳಿ ಗ್ರಾಮದವರಾಗಿದ್ದು ಪ್ರತಿ ದಿನದಂತೆ ಇಂದು ಸಹ ಬೆಳಗ್ಗೆ ಟಿಂಬರ್ ಕೆಲಸಕ್ಕೆ ತೆರಳಿದ್ದರು. ಮರದ ದಿಮ್ಮಿಯನ್ನು ಟ್ರಾಕ್ಟರ್ ಗೆ ತುಂಬಿಸುತ್ತಿದ್ದಾಗ ದಿಮ್ಮಿ ಜಾರಿ ಮಂಜುನಾಥ್ ರವರ ಮೈಮೇಲೆ ಅಚಾನಕ್ಕಾಗಿ ಬಿದ್ದು ವ್ಯಕ್ತಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಮೃತರಿಗೆ ಇಬ್ಬರು ಅಕ್ಕಂದಿರು, ತಮ್ಮ ಹಾಗೂ ತಂದೆ ತಾಯಿಗಳು ಇದ್ದು ಬಡ ಕುಟುಂಬವು ದುಡಿಯುವ ಮಗನನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿದೆ ಈ ಪ್ರಕರಣ ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.