ಕುಂದಾಪುರ: ಕಳೆದ ವರ್ಷ ಕಾಣಿಸಿಕೊಂಡಿದ್ದ ತೌಕ್ತೆ ಚಂಡಮಾರುತದಿಂದ ಕಡಲಬ್ಬರ ಉಲ್ಬಣಗೊಂಡ ಪರಿಣಾಮ ಬೈಂದೂರು ತಾಲೂಕಿನ ಮರವಂತೆ ಕಡಲ ತೀರ ಪ್ರದೇಶ ಸಂಪೂರ್ಣವಾಗಿ ಹಾನಿಗೊಂಡು ಕಡಲ ತೀರ ಪ್ರದೇಶ ಕೊಚ್ಚಿಕಂಡು ಹೋಗಿದೆ.
ಆದರೆ ಕಳೆದ ಒಂದು ವರ್ಷದಿಂದ ಕಡಲ ತೀರ ಪ್ರದೇಶವನ್ನು ರಕ್ಷಿಸುವ ದೃಷ್ಟಿಯಲ್ಲಿ ಯಾವುದೇ ರೀತಿಯ ಪರಿಹಾರದ ಕ್ರಮಗಳನ್ನು ಕೈಗೊಂಡಿಲ್ಲ. ಕಡಲ ತೀರ ರಕ್ಷಣೆಗೆ ಸರಕಾರ ಕ್ರಮಗಳನ್ನು ಕೈಗೊಳ್ಳಬೇಕೆಂದು ಮೀನುಗಾರರು ಆಗ್ರಹಿಸಿದ್ದಾರೆ.