News Karnataka Kannada
Saturday, May 04 2024
ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ: ಅವಳಿ ನಗರಕ್ಕೆ 2 ಶವ ಸಾಗಾಟ ವಾಹನಗಳ ಹಸ್ತಾಂತರ

Two dead bodies handed over to twin cities
Photo Credit : News Kannada

ಹುಬ್ಬಳ್ಳಿ: ಇಂದು ಅಮೇರಿಕಾದ ಅನಿವಾಸಿ ಭಾರತೀಯರಾದ  ರವಿ ಭೋಪಳಾಪು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ  ನೇತೃತ್ವದಲ್ಲಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಧಾರವಾಡ ಕೇಂದ್ರ ಕಚೇರಿಯ ಆವರಣದಲ್ಲಿ, ಸುಸಜ್ಜಿತ ವ್ಯವಸ್ಥೆಯುಳ್ಳ 2 ಶವ ಸಾಗಾಟ ವಾಹನಗಳನ್ನು ಪಾಲಿಕೆಗೆ ಹಸ್ತಾಂತರಗೊಳಿಸಿದರು.

ಅವಳಿನಗರದಲ್ಲಿ ಈ ಹಿಂದೆ ಪಾಲಿಕೆಯ ವತಿಯಿಂದ ಯಾವುದೇ ತರಹದ ಶವ ವಾಹನಗಳು ಲಭ್ಯವಿರದೆ ಇರಲಿಲ್ಲ., ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರ ಸತತ ಪ್ರಯತ್ನ, ಹಾಗೂ ಕೋರಿಕೆಯ ಮೇರೆಗೆ  ರವಿ ಭೋಪಳಾಪುರ  ಅವಳಿನಗರದ ನಾಗರಿಕರಿಗೆ ಅನುಕೂಲವಾಗುವ ದೃಷ್ಟಿಯಲ್ಲಿ, ನೂತನ ವ್ಯವಸ್ಥಿತ ಶವ ಸಾಗಾಟ ವಾಹನಗಳನ್ನು ದೇಣಿಗೆಯಾಗಿ ನೀಡಿದ್ದು,  ಅತ್ಯಂತ ಕಡಿಮೆ ದರದಲ್ಲಿ ಜನಸಾಮಾನ್ಯರಿಗೆ ಸೇವೆ ಒದಗಿಸಲು ಸಜ್ಜಾಗಿವೆ.

ಈ ಸಂದರ್ಭದಲ್ಲಿ ರವಿ ಭೋಪಳಾಪುರ ರವರ ಸ್ನೇಹಿತರಾದ ಶ್ರೀ ಸಂತೋಷ ಶೆಟ್ಟಿ, ಎಸ್.ಡಿ.ಎಂ ಮಹಾವಿದ್ಯಾಲಯದ ಪ್ರಾಂಶುಪಾಲರಾದ  ಗೋಪಿನಾಥ ರವರು, ಹಾಗೂಜಗದೀಶ ಹಿರೇಮಠ ರವರು, ಪಾಲಿಕೆಯ ಉಪಮಹಾಪೌರರಾದ  ಉಮಾ ಮುಕುಂದ ರವರು, ಪಾಲಿಕೆಯ ಸರ್ವ ಸದಸ್ಯರು, ಪಾಲಿಕೆಯ ಅಧಿಕಾರಿಗಳು ಹಾಗೂ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು