ಹುಬ್ಬಳ್ಳಿ: ಇಂದು ಅಮೇರಿಕಾದ ಅನಿವಾಸಿ ಭಾರತೀಯರಾದ ರವಿ ಭೋಪಳಾಪು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ನೇತೃತ್ವದಲ್ಲಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಧಾರವಾಡ ಕೇಂದ್ರ ಕಚೇರಿಯ ಆವರಣದಲ್ಲಿ, ಸುಸಜ್ಜಿತ ವ್ಯವಸ್ಥೆಯುಳ್ಳ 2 ಶವ ಸಾಗಾಟ ವಾಹನಗಳನ್ನು ಪಾಲಿಕೆಗೆ ಹಸ್ತಾಂತರಗೊಳಿಸಿದರು.
ಅವಳಿನಗರದಲ್ಲಿ ಈ ಹಿಂದೆ ಪಾಲಿಕೆಯ ವತಿಯಿಂದ ಯಾವುದೇ ತರಹದ ಶವ ವಾಹನಗಳು ಲಭ್ಯವಿರದೆ ಇರಲಿಲ್ಲ., ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರ ಸತತ ಪ್ರಯತ್ನ, ಹಾಗೂ ಕೋರಿಕೆಯ ಮೇರೆಗೆ ರವಿ ಭೋಪಳಾಪುರ ಅವಳಿನಗರದ ನಾಗರಿಕರಿಗೆ ಅನುಕೂಲವಾಗುವ ದೃಷ್ಟಿಯಲ್ಲಿ, ನೂತನ ವ್ಯವಸ್ಥಿತ ಶವ ಸಾಗಾಟ ವಾಹನಗಳನ್ನು ದೇಣಿಗೆಯಾಗಿ ನೀಡಿದ್ದು, ಅತ್ಯಂತ ಕಡಿಮೆ ದರದಲ್ಲಿ ಜನಸಾಮಾನ್ಯರಿಗೆ ಸೇವೆ ಒದಗಿಸಲು ಸಜ್ಜಾಗಿವೆ.
ಈ ಸಂದರ್ಭದಲ್ಲಿ ರವಿ ಭೋಪಳಾಪುರ ರವರ ಸ್ನೇಹಿತರಾದ ಶ್ರೀ ಸಂತೋಷ ಶೆಟ್ಟಿ, ಎಸ್.ಡಿ.ಎಂ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಗೋಪಿನಾಥ ರವರು, ಹಾಗೂಜಗದೀಶ ಹಿರೇಮಠ ರವರು, ಪಾಲಿಕೆಯ ಉಪಮಹಾಪೌರರಾದ ಉಮಾ ಮುಕುಂದ ರವರು, ಪಾಲಿಕೆಯ ಸರ್ವ ಸದಸ್ಯರು, ಪಾಲಿಕೆಯ ಅಧಿಕಾರಿಗಳು ಹಾಗೂ ಪ್ರಮುಖ ಗಣ್ಯರು ಉಪಸ್ಥಿತರಿದ್ದರು.