ಹಾಸನ: ಅಮಾಯಕ ದಲಿತ ವ್ಯಕ್ತಿಯ ಮೇಲೆ ಕರ್ತವ್ಯ ನಿರತ ಪೊಲೀಸರು ಮದ್ಯಪಾನ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದಲ್ಲದೇ ಗುಂಡಗಿರಿ ವರ್ತನೆ ಮಾಡಿರುವ ಅವರ ಸೇವೆಯಿಂದ ವಜಾಗೊಳಿಸಿ ಸಂತ್ರಸ್ತರಿಗೆ ೧೦ ಲಕ್ಷ ಪರಿಹಾರ ನೀಡುವಂತೆ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಶೇಖರ್ ಎಂಬ ವ್ಯಕ್ತಿಯು ಹಾಸನ ನಗರದ ಚನ್ನಪಟ್ಟಣ ಬಡಾವಣೆಯಲ್ಲಿ ಮನೆ ಮಾಡಿಕೊಂಡಿದ್ದು, ಜನವರಿ ೫ನೇ ತಾರೀ ಖಿನಂದು ರಾತ್ರಿ ಸುಮಾರು ೧೦.೩೦ರ ಸಮಯದಲ್ಲಿ ಹಳೇಬೀಡಿನಿಂದ ಹಾಸನ ನಗರಕ್ಕೆ ಬಂದಿಳಿದು ಕಟ್ಟಿನೆಕೆರೆ ತರಕಾರಿ ಮಾರ್ಕೆಟ್ ಕಡೆಯಿಂದ ಮನೆಗೆ ಹೋಗುವಾಗ ಹಾಸನ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಎ.ಎಸ್.ಐ. ಹರೀಶ್ ಹಾಗೂ ಅವರ ತಂಡ ಶೇಖರ್ ಎಂಬ ವ್ಯಕ್ತಿಯ ಮೇಲೆ ಸುಖಾ ಸುಮ್ಮನೆ ಕಳ್ಳತನದ ಆರೋಪ ಹೊರಸಿ ಹಾಗೂ ಜಾತಿ ನಿಂದನೆಯನ್ನು ಮಾಡಿ ಏಕಾಏಕಿ ಮಾರಾಣಾಂತಿಕವಾಗಿ ಹಲ್ಲೆ ನಡೆಸಿ ಗೂಂಡಾಗಿರಿ ವರ್ತನೆಯನ್ನು ತೋರಿದ ಪರಿಣಾಮ ಅವರ ದೇಹಕ್ಕೆ ಹಾನಿಹಾಗಿ ಕೈ ಮೂಳೆ ಮುರಿದಿರುತ್ತದೆ ಎಂದರು.
ಘಟನೆ ನಡೆದು ಸುಮಾರು ೧೦ ರಿಂದ ೧೫ದಿನ ಕಳೆಯುತ್ತಾ ಬಂದರೂ ಪೊಲೀಸ್ ಇಲಾಖೆ ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಘಟನೆ ಬಗ್ಗೆ ಮಾಹಿತಿ ಇದ್ದರೂ ಕೂಡ ಮೌನವನ್ನು ವಹಿಸಿದ್ದು, ಪೊಲೀಸ್ ವರಿಷ್ಠಾಧಿಕಾರಿಗಳು ಕೂಡಲೆ ಎಚ್ಚೆತ್ತು ಹಲ್ಲೆ ನಡೆಸಿದ ಸಿಬ್ಬಂದಿಗಳ ಮೇಲೆ ಅಟ್ರಾಸಿಟಿ ಕಾಯ್ದೆಯಡಿ ಎಫ್.ಐ.ಆರ್. ಪ್ರಕರಣ ದಾಖಲಿಸಿ ಮದ್ಯಪಾನ ಮಾಡಿ ಅಮಾಯಕ ದಂತ ವ್ಯಕ್ತಿಯ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ ಪೊಲೀಸ್ ಸಿಬ್ಬಂದಿಗಳ ಮೇಲೆ ಅವರನ್ನು ಸೇವೆಯಿಂದ ವಜಾಗೊಳಿಸಿ ಹಾಗೂ ಪೊಲೀಸ್ ಇಲಾಖೆಯಿಂದ ಸಂತ್ರಸ್ತ ವ್ಯಕ್ತಿಗೆ ಹತ್ತು ಲಕ್ಷ ಪರಿಹಾರ ಕೊಡಬೇಕು ಇಲ್ಲವಾದಲ್ಲಿ ಜೈ ಭೀಮ್ ಬ್ರಿಗೇಡ್ ಸಂಘಟನೆ ಹಾಗೂ ಅನೇಕ ದಂತಪರ ಸಂಘಟನೆಗಳು ಜಿಲ್ಲಾಧಿಕಾರಿಗಳ ಕಛೇರಿಯನ್ನು ಮುತ್ತಿಗೆಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಸಿದರು.
ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಮಾನ್ಯ ಜಿಲ್ಲಾಧಿಕಾರಿಗಳು ಮನೆ ಮನೆಗೆ ಸಂವಿಧಾನ ಪ್ರತಿಯನ್ನು ಉಚಿತವಾಗಿ ಕೇಂದ್ರ ಸರ್ಕಾರ ಹಂಚುವುದು ಮತ್ತು ಹಾಸನ ಬಿ.ಎಂ. ರಸ್ತೆಯಲ್ಲಿರುವ ಅಂಬೇಡ್ಕರ್ ಪ್ರತಿಮೆ ವಿರೂಪವಾಗಿದ್ದು, ಅದನ್ನು ನವೀಕರಿಸಲು ಸಂಬಂಧಪಟ್ಟ ಇಲಾಖೆಗೆ ಸೂಚಿಸಬೇಕಾಗಿ ತಮ್ಮಲ್ಲಿ ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಜೈಭೀಮ್ ಬ್ರಿಗೇಡ್ ಸಂಘಟನಾ ಸಮಿತಿಯ ಜಿಲ್ಲಾಧ್ಯಕ್ಷರಾದ ರಾಜೇಶ್, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.