ಸಕಲೇಶಪುರ: ನಿನ್ನೆ ರಾತ್ರಿ ಹಾನುಬಾಳುನಲ್ಲಿ ಕಾಡಾನೆಯೊಂದು ಮನೆ ಹಾಗೂ ತೋಟಗಳಿಗೆ ದಾಳಿ ಮಾಡಿ ಹಾನಿ ಮಾಡಿದ ಘಟನೆ ನಡೆದಿದೆ.
ರಾತ್ರಿ ೧೦.೩೦ ರ ಸುಮಾರಿಗೆ ಕ್ಯಾಮನಹಳ್ಳಿ ಮುರಳಿ ಎಂಬವರ ಮನೆ ಅಂಗಳಕ್ಕೆ ಬಂದ ಆನೆ ಅವರ ಮನೆಗೆ ಗುದ್ದಿದೆ. ಆನೆ ಗುದ್ದಿದ ರಭಸಕ್ಕೆ ಅವರ ಆರ್ಸಿಸಿ ಮನೆಯ ಸಿಟೌಟ್ನ ಹೆಂಚುಗಳು ಪುಡಿ ಪುಡಿಯಾಗಿದೆ. ಮನೆ ಕಿಟಕಿ ಮುರಿದು ಬಿದ್ದಿದೆ. ಮನೆಯೊಳಗಿದ್ದ ಆ ಮನೆಯ ನಿವಾಸಿಗಳು ಜೀವ ಭಯದಿಂದ ಘಟನೆಗಳನ್ನು ನೋಡುತ್ತಾ ಕಾಲ ಕಳೆದಿದ್ದಾರೆ. ಮನೆಯ ಕಿಟಿಕಿ ಬಳಿ ಇಟ್ಟಿದ್ದ ಭತ್ತ ಪಡೆಯಲು ಆನೆ ಇ ದಾಳಿ ಮಾಡಿದೆ ಎಂದು ತಿಳಿದು ಬಂದಿದೆ.
ನಂತರ ಸ್ಥಳಕ್ಕೆ ಶಾಸಕರಾದ ಸಿಮೆಂಟ್ ಮಂಜು ಭೇಟಿ ನೀಡಿಅಲ್ಲಿನ ಪರಿಸ್ಥಿತಿಯನ್ನು ಅವಲೋಕನ ಮಾಡಿದ ಅವರು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.