News Karnataka Kannada
Thursday, May 02 2024
ಹಾಸನ

ಸಕಲೇಶಪುರ: ಮನೆ ಮೇಲೆ ಕಾಡಾನೆ ದಾಳಿ- ಹಾನಿ

Wild elephant attacks house, damages window, portico damaged
Photo Credit : News Kannada

ಸಕಲೇಶಪುರ: ನಿನ್ನೆ ರಾತ್ರಿ ಹಾನುಬಾಳುನಲ್ಲಿ ಕಾಡಾನೆಯೊಂದು ಮನೆ ಹಾಗೂ ತೋಟಗಳಿಗೆ ದಾಳಿ ಮಾಡಿ ಹಾನಿ ಮಾಡಿದ ಘಟನೆ ನಡೆದಿದೆ.
ರಾತ್ರಿ ೧೦.೩೦ ರ ಸುಮಾರಿಗೆ ಕ್ಯಾಮನಹಳ್ಳಿ ಮುರಳಿ ಎಂಬವರ ಮನೆ ಅಂಗಳಕ್ಕೆ ಬಂದ ಆನೆ ಅವರ ಮನೆಗೆ ಗುದ್ದಿದೆ. ಆನೆ ಗುದ್ದಿದ ರಭಸಕ್ಕೆ ಅವರ ಆರ್‌ಸಿಸಿ ಮನೆಯ ಸಿಟೌಟ್‌ನ ಹೆಂಚುಗಳು ಪುಡಿ ಪುಡಿಯಾಗಿದೆ. ಮನೆ ಕಿಟಕಿ ಮುರಿದು ಬಿದ್ದಿದೆ. ಮನೆಯೊಳಗಿದ್ದ ಆ ಮನೆಯ ನಿವಾಸಿಗಳು ಜೀವ ಭಯದಿಂದ ಘಟನೆಗಳನ್ನು ನೋಡುತ್ತಾ ಕಾಲ ಕಳೆದಿದ್ದಾರೆ. ಮನೆಯ ಕಿಟಿಕಿ ಬಳಿ ಇಟ್ಟಿದ್ದ ಭತ್ತ ಪಡೆಯಲು ಆನೆ ಇ ದಾಳಿ ಮಾಡಿದೆ ಎಂದು ತಿಳಿದು ಬಂದಿದೆ.

ನಂತರ ಸ್ಥಳಕ್ಕೆ ಶಾಸಕರಾದ ಸಿಮೆಂಟ್ ಮಂಜು ಭೇಟಿ ನೀಡಿಅಲ್ಲಿನ ಪರಿಸ್ಥಿತಿಯನ್ನು ಅವಲೋಕನ ಮಾಡಿದ ಅವರು ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು