News Karnataka Kannada
Wednesday, May 01 2024
ಹಾಸನ

ಕೆರೆ ಅಭಿವೃದ್ಧಿ ಹೆಸರಿನಲ್ಲಿ 100 ಕೋಟಿ ರೂ. ಕೊಳ್ಳೆಹೊಡೆದ ಶಾಸಕ, ಕೈ ಮುಖಂಡರ ಆರೋಪ

MLA Preetham Gowda vs H.K. Mahesh's allegations
Photo Credit : News Kannada

ಹಾಸನ: ಕೆರೆ ಹಾಗೂ ಪಾರ್ಕ್ ಅಭಿವೃದ್ಧಿ ಹೆಸರಲ್ಲಿ ಶಾಸಕ ಪ್ರೀತಂ ಜೆ ಗೌಡ ಸುಮಾರು ೧೦೦ ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಎಚ್.ಕೆ ಮಹೇಶ್ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮಾಜಿ ಸಚಿ ವರಾದ ರೇವಣ್ಣ ಅವರು ಚನ್ನಪಟ್ಟಣ ಕೆರೆ ಅಂಗಳದಲ್ಲಿ ಪಾರ್ಕ್ ಹಾಗೂ ಇತರೆ ಅಭಿವೃದ್ಧಿ ಗಾಗಿ ೧೪೪ ಕೋಟಿ ಹಣ ಬಿಡುಗಡೆ ಮಾಡಿಸಿದ್ದರು , ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಶಾಸಕ ಪ್ರೀತಮ್ ಜೆ ಗೌಡ ಅವರು ೧೪೪ ಕೋಟಿ ಹಣವನ್ನು ನಗರದ ವಿವಿಧ ಕೆರೆ ಹಾಗೂ ಪಾರ್ಕ್ ಅಭಿವೃದ್ಧಿಗೆ ವರ್ಗಾಯಿಸಿದರು .

ಇದರಲ್ಲಿ ನಗರದ ಮಹರಾಜ ಪಾರ್ಕ್ ಗೆ ೧೪.೩೬ ಕೋಟಿ ಹಣವನ್ನು ವ್ಯಯ ಮಾಡಿದ್ದಾರೆ ಎಂದು ದಾಖಲೆ ಕೊಡುತ್ತಾರೆ. ಆದರೆ ವಾಸ್ತವವಾಗಿ ಪಾರ್ಕ್ ಗೆ ಭೇಟಿ ನೀಡಿ ನೋಡಿದರೆ ನಿಜ ಬಣ್ಣ ಬಯಲಾಗಲಿದೆ ಎಂದರು.

ಇನ್ನೂ ಉಳಿದ ಪಾರ್ಕ್ ಗಳಿಗೆ ಕ್ರಮವಾಗಿ ತಲಾ ೪ರಿಂದ ೯ ಕೋಟಿ ಖರ್ಚು ಮಾದಲಾಗಿದೆ ಎಂದು ಲೆಕ್ಕ ತೋರಿಸಿದ್ದಾರೆ. ಆದರೆ ಇಷ್ಟು ಕಾಮಗಾರಿಗಳಿಗೆ ಸರ್ಕಾರ ಆದೇಶದಂತೆ ಎಷ್ಟು ಹಣ ಖರ್ಚಾಗಿದೆ, ಏನೇನೂ ಅಭಿವೃದ್ಧಿ ಮಾಡಲಾಗಿದೆ ಎಂಬ ಮಾಹಿತಿಯ ಫಲಕವನ್ನು ಎಲ್ಲಿಯು ಅಳವಡಿಸಿಲ್ಲ ಎಂದು ಆರೋಪ ಮಾಡಿದರು.

ಈಗಾಗಲೇ ಚುನಾವಣೆ ಹಿನ್ನೆಲೆ ಯಲ್ಲಿ ಮತದಾರರಿಗೆ ಆಮೀಷವಾಗಿ ಕೆಲ ನಕಲಿ ವಸ್ತುಗಳನ್ನ ನೀಡಿ ಶಾಸಕರು ತನ್ನತ್ತ ಸೆಳೆಯಲು ನೋಡಿದರು. ಆದರೆ ಜನರು ಬುದ್ದಿವಂತರಿದ್ದಾರೆ. ನೀವು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು, ನಕಲಿ ಆಮಿಷಗಳನ್ನು ಜನರು ಕಣ್ಣಾರೆ ನೋಡುತ್ತಿದ್ದಾರೆ. ರಾಜ್ಯದ ನಂ. ೧ ಭ್ರಷ್ಟಾಚಾರ ಆರೋಪದಲ್ಲಿರುವ ನೀವು ಒಂದಲ್ಲ ಒಂದು ದಿನ ಜೈಲಿಗೆ ಹೋಗುವ ಸಂಧರ್ಭ ಬಂದೆ ಬರುತ್ತದೆ. ಶಾಸಕ ಪ್ರೀತಮ್ ಗೌಡ ಈ ಬಾರಿ ಸೋಲುವುದು ಖಚಿತ ಎಂದು ಭವಿಷ್ಯ ನುಡಿದರು.

ನಗರದಲ್ಲಿ ನಡೆದಿರುವ ರಸ್ತೆ ಕಾಮಗಾರಿಯೂ ಸಹ ಕಳಪೆಯಿಂದ ಕೂಡಿದ್ದು ಈ ಬಗ್ಗೆಯೂ ಅಗತ್ಯ ಮಾಹಿತಿ ಫಲಕದ ಮೂಲಕ ಪ್ರದರ್ಶನ ಮಾಡಲಿ ಈಗಾಗಲೇ ನಗರದಲ್ಲಿ ನಡೆದಿರುವ ಬಹುತೇಕ ಕಾಮಗಾರಿಗಳ ಸಂಬಂಧ ಜಿಲ್ಲಾ ಪಂಚಾಯಿತಿ, ಸಣ್ಣ ನೀರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆ, ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಇತರ ಇಲಾಖೆ ಅಧಿಕಾರಿಗಳಿಗೆ ಪತ್ರ ಮುಖೇನ ಹಾಗೂ ದೂರವಾಣಿ ಮೂಲಕ ಎಚ್ಚರಿಕೆ ನೀಡಲಾಗಿದ್ದು ಕಾಮಗಾರಿ ಸಂಬಂಧ ಮುಂದೆ ಯಾವುದೇ ತನಿಖೆಗೆ ಸಿದ್ದರಿರುವಂತೆ ತಿಳಿಸಿದ್ದೇನೆ. ನಡೆದಿರುವ ಅಕ್ರಮದ ಕುರಿತು ಲೋಕಾಯುಕ್ತಕ್ಕೂ ದೂರ ನೀಡಲಿದ್ದೇನೆ ಎಂದು ಮಹೇಶ್ ತಿಳಿಸಿದರು.

ಐದು ವರ್ಷದಲ್ಲಿ ಶಾಸಕರ ಅನುದಾನವನ್ನು ಯಾವ ಅಭಿವೃದ್ಧಿಗೆ ಬಳಕೆ ಮಾಡಲಾಗಿದೆ ಎಂಬುದನ್ನು ಜನತೆಯ ಮುಂದೆ ತಿಳಿಸಲಿ ಎಂದು ನಾನು ಶಾಸಕರಿಗೆ ಮನವಿ ಮಾಡುತ್ತೇನೆ. ಅಭಿವೃದ್ಧಿ ಮಾಡಿದ್ದೇವೆ ಎಂಬುದನ್ನು ನೀವು ಜನರಿಗೆ ತಿಳಿಸುವ ಕೆಲಸ ಮಾಡಿ ಎಂದು ಹೇಳಿದರು.

ಹಾಸನ ಕ್ಷೇತ್ರದಲ್ಲಿ ನಮ್ಮ ಪಕ್ಷ ದಿಂದ ಯಾರಿಗೆ ಟಿಕೆಟ್ ನೀಡಿದರು ನಾವು ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಜೆಡಿಎಸ್ ಸೇರಿದಂತೆ ಇತರೆ ಪಕ್ಷದವರೂ ಸಹ ನನ್ನ ಜೊತೆ ವಿಶ್ವಾಸದಿಂದಿದ್ದಾರೆ ಅಷ್ಟೆ ಚುನಾವಣೆ ಯೇ ಬೇರೆ ವಿಶ್ವಾಸವೆ ಬೇರೆ ಎಂದರು.
ಕಾಂಗ್ರೆಸ್ ಪಕ್ಷದ ವಿನೋದ್ ಹೆಮಂತ್ ಕುಮಾರ್, ಪ್ರಕಾಶ್ ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು