ಹಾಸನ: ಅರ್ಚಕರಿಗಾಗಿ ನಿಗದಿಪಡಸಿರುವ ೬.೫ ಕುಂಟೆ ಜಾಗದ ಸಂಪೂರ್ಣ ಹಣವನ್ನು ನಾನೇ ಭರಿಸಿ, ಅರ್ಚಕರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಶಾಸಕ ಪ್ರೀತಂ ಜೆ.ಗೌಡ ಹೇಳಿದರು.
ನಗರದ ಶ್ರೀ ಆದಿಚುಂಚನ ಗಿರಿ ಸಮುದಾಯಭವನದಲ್ಲಿ ಹಾಸನ ಜಿಲ್ಲಾ ಧಾರ್ಮಿಕ ದತ್ತಿ ಅರ್ಚಕರ ಅಭಿವೃದ್ಧಿ ಒಕ್ಕೂಟದ (ರಿ) ವತಿಯಿಂದ ನಡೆದ ಜಿಲ್ಲಾ ಮುಜರಾಯಿ ದೇವಾಲಯಗಳ ಅರ್ಚಕರ ಬೃಹತ್ ಸಮಾವೇಶ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಕೆಲವು ದಿನಗಳ ಹಿಂದೆ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ನಡೆದ ಸಭೆಯಲ್ಲಿ ಅರ್ಚಕರಿಗಾಗಿ ೬.೫ ಕುಂಟೆ ಜಾಗ ನೀಡುವುದಾಗಿ ತಿಳಿಸಿದ್ದೆ. ಜಾಗವನ್ನು ಈಗಾಗಲೆ ನಿಗದಿಪಡಿಸಲಾಗಿದೆ. ಅದರಂತೆ ಆ ಜಾಗದ ಸಂಪೂರ್ಣ ಹಣ ವನ್ನು ಮತ್ತು ಅದರ ನೊಂದಣಿ ಗಾಗಿ ನನ್ನ ವೈಯಕ್ತಿಕ ಹಣವನ್ನು ಭರಿಸಿ ಅರ್ಚಕರ ಅಭಿವೃದ್ಧಿಗೆ ಅನುಕೂಲ ಮಾಡಿ ಕೊಡುತ್ತೇನೆ ಎಂದು ಭರವಸೆ ನೀಡಿದರು.
ಹಿಂದು ಧರ್ಮ ಉಳಿಯ ಬೇಕು ಎಂದರೆ ಧರ್ಮ ಪ್ರಚಾರಕರು ಮತ್ತು ಧರ್ಮ ವಿಚಾರಕರು ಅಗತ್ಯ. ಧರ್ಮದ ವಿರುದ್ಧ ಅನೇಕ ಭಾರಿ ಅಕ್ರಮಣ ನಡೆದರು ಸಹ ಯಾಕೆ ಇನ್ನೂ ನಮ್ಮ ಧರ್ಮ ಉಳಿದಿದೆ ಎಂದರೆ ಶ್ರದ್ಧೆ ಭಕ್ತಿ ನಂಬಿಕೆಯಿಂದ ನೆರವೇರಿಸುವ ಕಾಯರ್ಯಗಳು. ಅರ್ಚಕರು ೯೫% ಸಮಸ್ಯೆಯಲ್ಲಿದ್ದಾರೆ. ಅದನ್ನು ಬಗೆ ಹರಿಸಲು ಒಬ್ಬ ಪ್ರಮಾಣಿಕ ನಾಯಕ ಅವಶ್ಯಕತೆ ಇದೆ. ಅರ್ಚಕರು ನನಗೆ ನೀಡಿರುವ ಸಮಸ್ಯೆಗಳನ್ನು ನನ್ನ ಪತ್ರದಲ್ಲಿ ಉಲ್ಲೇಖಿಸಿ ಸಿಎಂ ಅವರಿಗೆ ವೈಯಕ್ತಿವಾಗಿ ತಲುಪಿಸಿ ಪರಿ ಹಾರ ಕಂಡುಕೊಳ್ಳು ಪ್ರಮಾಣಿಕ ಮಾಡುತ್ತೇನೆ. ಯಾರು ಧರ್ಮ ವನ್ನು ಉಳಿಸುತ್ತಾರೋ ಅವರನ್ನು ಬೆಂಬಲಿಸುವುದು ಅಗತ್ಯವಾಗಿದೆ.
ಧರ್ಮವನ್ನು ಉಳಿಸುವ ವ್ಯಕ್ತಿ ಯನ್ನು ರಾಜ ಕೀಯದ ಒರತಾಗಿ ಯು ಬೆಂಬಲಿಸಬೇಕು. ಪ್ರಸ್ತುತ ದಿನಗಳಲ್ಲಿ ಭಕ್ತಾದಿಗಳು ಬಹು ಸಂಖ್ಯಾವಾಗಿದ್ದಾರೆ. ಭಕ್ತರು ಅಲ್ಪ ಸಂಖ್ಯಾಂತರು ಆಗುವ ಮೊದಲೆ ನಾವು ಧರ್ಮ, ದೇಶ, ರಾಷ್ಟೀಯತೆಯನ್ನು ಕಾಪಾಡುವ ನಾಯಕರನ್ನು ನರೇಂದ್ರ ಮೋದಿಯವರನ್ನು, ಯಡಿಯೂವರಪ್ಪರನ್ನು ನಾವು ಬೆಂಬಲಿಸಬೇಕಿದೆ ಎಂದು ಹೇಳಿದರು.
ಸಮಾವೇಶದಲ್ಲಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಮಹಾ ಸ್ವಾಮೀಜಿ, ಜೋಡಿ ಮಲ್ಲಪ್ಪನ ಹಳ್ಳಿ ಪ್ರವೀಣ್ ಸರಸ್ವತಿ ಸ್ವಾಮೀಜಿ, ಜಿಲ್ಲಾ ಅರ್ಚಕರ ಒಕ್ಕೂಟದ ಅಧ್ಯಕ್ಷರಾದ ಸೋಮ ಶೇಖರಯ್ಯ, ಕಾರ್ಯಧ್ಯಕ್ಷರಾದ ಪುಟ್ಟಣ್ಣಯ್ಯ, ಪ್ರಧಾನ ಕಾರ್ಯ ದರ್ಶಿ ಧನಂಜಯ ಮೂರ್ತಿ, ಜಿಲ್ಲೆಯ ಅರ್ಚಕರು ಹಾಜರಿದ್ದರು.