News Karnataka Kannada
Thursday, May 02 2024
ಹಾಸನ

ಕೊಣನೂರು: ಪರಿಹಾರ ನೀಡಲು ಪಟ್ಟು, ಕಾಮಗಾರಿಗೆ ತಡೆ

Konanur: Work stopped, demands to provide compensation
Photo Credit : News Kannada

ಕೊಣನೂರು: ರೈತರುಗಳಿಗೆ ಬಾಕಿ ಬರಬೇಕಾದ ಪರಿಹಾರ ಹಣದ ಚೆಕ್ಕನ್ನು ಕೊಟ್ಟು ಕಾಮಗಾರಿ ನಡೆಸುವಂತೆ ಹೋಬಳಿಯ ಸಿದ್ದಾಪುರದಲ್ಲಿ ಸುವರ್ಣ ಕರ್ನಾಟಕ ರಕ್ಷಣಾ ಸೇನೆಯಿಂದ ಹೆದ್ದಾರಿ ರಸ್ತೆ ಕಾಮಗಾರಿಯನ್ನು ತಡೆದು ಆಗ್ರಹಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾ ಡಿದ ಸುವರ್ಣ ಕರ್ನಾಟಕ ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷ ಡಾ.ಎಸ್. ರಾಘವೇಂದ್ರಗೌಡ ಅರಕಲಗೂಡು ತಾಲೂಕಿನ ಕೆಶಿಪ್-೩ ಅಧಿಕಾರಿಗ ಳಿಂದ ರೈತರಿಗೆ ಸಾಕಷ್ಟು ಮೋಸ ವಾಗಿದ್ದು, ಈ ವಿಚಾರವಾಗಿ ರೈತರು ನಮಗೆ ತಿಳಿಸಿದಾಗ ಸುಮಾರು ಎರಡು ವರ್ಷಗಳಿಂದ ಹೋರಾಟ ನಡೆಸಿದ ಪ್ರತಿಫಲವಾಗಿ ಹೆಚ್ಚುವರಿ ಪರಿಹಾರದ ಹಣ ಬಂದು ಒಂದು ವರ್ಷವಾದರೂ ಅಧಿಕಾರಿಗಳ ಲೋಪ ದೋಷ ಗಳಿಂದ ರೈತರಿಗೆ ಬರಬೇಕಾಗಿದ್ದ ಹೆಚ್ಚುವರಿ ಪರಿಹಾರದ ಮೊತ್ತ ಇದುವರೆಗೂ ಬರದೆ ರೈತರು ಕಂಗಲಾಗಿದ್ದಾರೆ.

ಈ ದಿನ ಕಾಮಗಾರಿ ಯನ್ನು ನಿಲ್ಲಿಸಿ ರೈತರಿಗೆ ಹೆಚ್ಚುವರಿ ಪರಿಹಾರದ ಹಣವನ್ನು ಕೊಟ್ಟು ಕಾಮಗಾರಿ ನಡೆಸಲು ಅಧಿಕಾರಿ ಗಳಿಗೆ ಎಚ್ಚರಿಕೆ ನೀಡಿ, ಪರಿಹಾರದ ಹಣದ ವಿಚಾರದಲ್ಲಿ ಅಧಿಕಾರಿಗಳು ಮಾಡು ತ್ತಿರುವ ಲೋಪದೋಷ, ಮೆಮೋ ಗಳನ್ನು ನಿಲ್ಲಿಸಬೇಕು. ಮೋಸ ಮಾಡುತ್ತಿರುವ ಅಧಿಕಾರಿ ಗಳನ್ನು ಅಮಾನತ್ತುಗೊಳಿಸಬೇಕು ಹಾಗೂ ಪರಿಹಾರದ ಹಣವನ್ನು ಶೀಘ್ರದಲ್ಲಿ ಕೊಡಬೇಕು ಈ ಸಮ ಸ್ಯೆಯನ್ನು ಕೂಡಲೇ ಬಗೆಹರಿ ಸದಿದ್ದರೆ ಮುಂ ದಿನ ದಿನಗಳಲ್ಲಿ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಇನ್ನೊಂದು ವಾರದೊಳಗೆ ರೈತರಿಗೆ ಹೆಚ್ಚುವರಿ ಪರಿಹಾರ ಹಣದ ಚೆಕ್ಕನ್ನು ಕೊಡಿ ಸಲಾ ಗುವುದು ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸೇನೆಯ ರಾಜ್ಯಾಧ್ಯಕ್ಷ ಡಾ. ಎಸ್. ರಾಘವೇಂದ್ರಗೌಡ, ನೊಂ ದ ರೈತರುಗಳಾದ ರಾಮ ಕೃಷ್ಣೇ ಗೌಡ, ಅಣ್ಣಪ್ಪಗೌಡ, ಬಾಬ ನಗರ ಸಣ್ಣಸ್ವಾಮಿ, ರಾಮಮ್ಮ ಮತ್ತು ರಸ್ತೆ ಕಾಮಗಾರಿ ನಡೆಸುತ್ತಿರುವ ಕೆಎನ್‌ಆರ್ ಸಂಸ್ಥೆಯ ಕಿರಿಯ ಎಂಜಿನಿಯರ್ ದುಶ್ಯಂತ್, ಉಪ ಪ್ರಾಜೆಕ್ಟ್ ಮ್ಯಾನೇಜರ್ ಗಳಾದ ಮುರಳಿ, ಭಾಸ್ಕರಯ್ಯ ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು