News Karnataka Kannada
Thursday, May 02 2024
ಹಾಸನ

ಯಾವುದೇ ಷರತ್ತಿಲ್ಲದೆ ಬಿಜೆಪಿ ಸೇರ್ಪಡೆ, ಮೋದಿ ಅವರ ಕೈ ಬಲಪಡಿಸಲು ನಮ್ಮ ಹೋರಾಟ: ರಾಮಸ್ವಾಮಿ

Joining BJP without any conditions, our fight is to strengthen Modi's hand: Ramaswamy
Photo Credit : News Kannada

ಕೊಣನೂರು: ನರೇಂದ್ರ ಮೋದಿಯವರ ಕಾರ್ಯವೈಖರಿಯನ್ನು ಗಮನಿಸುತ್ತಿದ್ದು, ಭಾರತವನ್ನು ವಿಶ್ವಕ್ಕೆ ಮಾದರಿಯನ್ನಾಗಿಸುವ ಅವರ ಸಂಕಲ್ಪವನ್ನು ನಾನು ಮೆಚ್ಚಿದ್ದೇನೆ. ಅದಕ್ಕಾಗಿ ಯಾವುದೆ ಷರತ್ತಿಲ್ಲದೆ ಬಿಜೆಪಿ ಸೇರಿದ್ದು ಅವರ ಕೈ ಬಲಪಡಿಸಲು ನಮ್ಮ ಹೋರಾಟ ಎಂದು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ತಿಳಿಸಿದರು.

ಹೋಬಳಿಯ ಬಿಸಲಹಳ್ಳಿಯಲ್ಲಿ ನಡೆದ ಸಭೆಯನ್ನುದ್ದೇಶಿ ಮಾತನಾಡಿದ ಅವರು ಕ್ಷೇತ್ರದಲ್ಲಿ ಅಪವಿತ್ರ ಮೈತ್ರಿಯ ಮೂಲಕ ಜನರಿಗೆ ಮೋಸ ಮಾಡಲು ಹೊರಟಿರು ವವರ ವಿರುದ್ಧ ಹೋರಾಟಮಾಡಿ ಬಿಜೆಪಿ ಗೆಲ್ಲಿಸಲು ನಾಳೆ ಮಹತ್ವದ ಸಭೆಯನ್ನು ಆಯೋಜಿಸಿದ್ದೇನೆ. ನಾನು ಎನ್ನುವ ಬದಲು ನಾವು ಎಂಬ ಮನೋಭಾವನೆಯಿಂದ ಶ್ರಮವಹಿಸಿ ದುಡಿದಲ್ಲಿ ಕ್ಷೇತ್ರದಲ್ಲಿ ಬಿಜೆಪಿಯ ಬಾವುಟವನ್ನು ಹಾರಿಸಬಹುದು. ಜೊತೆಗೂಡಿ ಕೆಲಸ ಮಾಡೋಣ ಎಂದರು. ನರೇಂದ್ರ ಮೋದಿಯವರ ಕೈ ಬಲಪಡಿಸಲು ನಮ್ಮಲ್ಲಿರುವ ಚಿಕ್ಕಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಶ್ರಮಿಸೋಣ.

೨೦೦೮ ರಿಂದಲೂ ನನಗೆ ಬಿಜೆಪಿ ಆಹ್ವಾನವಿದ್ದು, ನಾನು ಚುನಾವಣೆಯಲ್ಲಿ ಸೋತಾಗ ಎಂಎಲ್ ಸಿ ಮಾಡುವುದಾಗಿ ಆಹ್ವಾನ ನೀಡಿದ್ದರು. ನಾನು ಅಧಿಕಾರಕ್ಕಾಗಿ ಓಡಿಹೋಗಲಿಲ್ಲ. ಈಗ ಅನಿವಾರ್ಯ ಪರಿಸ್ಥಿತಿ ಯಿಂದ ಬಿಜೆಪಿ ಸೇರಬೇಕಾಯಿತು, ಅವರು ಪ್ರೀತಿ ಗೌರವದಿಂದ ನನ್ನನ್ನು ಬರಮಾಡಿಕೊಂಡಿದಾರೆ. ಈ ಜೆ ಪಿ ಯ ವರಿಷ್ಠರೆ ಕರೆಮಾಡಿ ದೆಹಲಿಗೆ ಬರಮಾಡಿಕೊಂಡು ನನಗೆ ತೋರಿದ ಗೌರವ. ಸ್ವಾಗತ ನನಗೆ ಜನ್ಮದಲ್ಲೂ ಕಾಣುವ ಸಾಧ್ಯತೆಯಿಲ್ಲ. ಪ್ರೀತಿಯಿಂದ ಪಕ್ಷಕ್ಕೆ ಸೇರಿಸಿಕೊಂಡಿದ್ದು ನನಗೆ ಸಂತಸ ತಂದಿದೆ.

ಇಂದು ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಮತ್ತು ದೆಹಲಿಯ ನಾಯಕರೊಬ್ಬರು ಪೋನ್ ನಲ್ಲಿ ಮಾತನಾಡಿಸಿದರು ಅವರೊಂದಿಗೆ ನಾನು ಸ್ಥಾನಮಾನದ ಆಕಾಂಕ್ಷಿಯಲ್ಲ, ಪಕ್ಷದ ಬಲವರ್ಧನೆ ಮಾಡುವು ದು ನನ್ನ ಗುರಿ ಎಂದು ಅವರೊಂದಿಗೆ ನನ್ನ ಅಭಿಪ್ರಾಯವನ್ನು ತಿಳಿಸಿದ್ದೇನೆ ಎಂದರು.

ಬಿ ಜೆ ಪಿ ಮುಖಂಡ ಹೆಚ್. ಯೋಗಾರಮೇಶ್ ತಮ್ಮದೆ ದಕ್ಷತೆ, ಪ್ರಾಮಾಣಿಕತೆಯಿಂದ ರಾಜ್ಯಾದ್ಯಂತ ಹೆಸರು ಮಾ ಡಿರುವ ಎ.ಟಿ.ರಾಮಸ್ವಾಮಿ ಯವರನ್ನು ಸ್ವಾಗತಿಸಲು ನಾವು ಇಲ್ಲಿ ಬಂದಿದ್ದು, ಹಣಬಲದಿಂದ ವ್ಯವಸ್ಥೆಯನ್ನೆ ಬದಲಿಸಲು ಹೊರಟಿರುವವರ ಎದುರಿಸಿ ತಾಲ್ಲೂಕಿನಲ್ಲಿ ಬದಲಾವಣೆ ಯನ್ನು ತರಲು ನಾವು ರಾಮ ಸ್ವಾಮಿಯವರು ಜೊತೆಗೂಡಿ ಹೊರಟಿದ್ದು ಇಲ್ಲಿನ ಗೆಲುವು ರಾಜ್ಯಕ್ಕೆ ಒಂದು ಸಂದೇಶವಾಗಬೇಕಿದೆ.

ರಾಮಸ್ವಾಮಿಯವರ ಸೇರ್ಪಡೆ ರಾಜ್ಯ ಮತ್ತು ದೇಶದ ಪ್ರಮುಖ ನಾಯಕರು ಜಿ ಜೆ ಪಿ ಗೆ ಬಲ ತುಂಬಲು ಹಳೆ ಮೈಸೂರಿನಲ್ಲಿ ಬಲವರ್ಧಿಸಲು ನಿಧಿ ಸಿಕ್ಕಿದಂತಾಗಿದೆ. ಮುಂದಿನ ದಿನಗಳಲ್ಲಿ ರಾಮಸ್ವಾಮಿಯವರ ಅವರ ನೇತೃತ್ವವದಲ್ಲಿ ಬಿಜೆಪಿಗೆ ಮತ್ತಷ್ಟು ಶಕ್ತಿಬರುವುದು ಖಚಿತ. ಜೆಡಿಎಸ್ ಮತ್ತು ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಸತ್ಯ. ಇದನ್ನು ಕಾರ್ಯಕರ್ತರು ಮನಗಾಣಬೇಕು ಎಂದರು.

ಸಭೆಗೂ ಮುಂಚೆ ಯೋಗಾ ರಮೇಶ್ ರಾಮಸ್ವಮಿಯವರಿಗೆ ಶಾಲುಹೊದಿಸಿ ಗೌರವಿಸಿದರು. ಮುಖಂಡ ವಕೀಲ ರಾಜೇಶ್, ಜೋಯಪ್ಪ, ಕೊಂಗಳಲೆ ಕೇಶವಮೂರ್ತಿ, ಕೊಣನೂರು ಗಣೇಶ್ ಮೂರ್ತಿ, ಶಿವಲಿಂಗಶಾಸ್ರ್ತಿ, ಶ್ರೀನಿಧಿ, ಜನಾರ್ಧನ ಗುಪ್ತಾ, ಸುಬ್ಬರಾಯ, ಮಹಾಂತೇಶ್, ಬೇಲೂರೇಗೌಡ, ಲೋಕೇಶ್, ಕೆ ಡಿ ಪಿ ಸದಸ್ಯ ಹೊಡೆನೂರು ಗುರು ಸೇರಿದಂತೆ ವಿವಿಧ ಮುಖಂಡರು, ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು