ಅರಕಲಗೂಡು: ಪ್ರಮುಖ ರಾಜಕೀಯ ಪಕ್ಷಗಳು ದುಡ್ಡಿದ್ದವರನ್ನು ಹುಡುಕುತ್ತಿದ್ದು ಪಾರ್ಟಿ ಫಂಡ್ ಎಷ್ಟು ಕೊಡುತ್ತಾರೆ ಎಂದು ನೋಡುವ ಸ್ಥಿತಿಗೆ ಪ್ರಜಾಪ್ರುಭುತ್ವ ತಲುಪಿದ್ದು ರಾಜಕೀಯವಾಗಿ ನನ್ನನ್ನು ತುಳಿಯಲಾಗುತ್ತಿದೆ ಎಂದು ಶಾಸಕ ಎ.ಟಿ. ರಾಮಸ್ವಾಮಿ ತೀವ್ರ ಅಸಮಧಾನ ಹೊರಹಾಕಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಾಸನ ಜಿಲ್ಲೆಯಲ್ಲೇ ಪ್ರಾಮಾಣಿಕ ರಾಜ ಕಾರಣಿ ಎಂದು ಹೆಸರು ಗಳಿಸಿರುವ ನನ್ನನ್ನು ರಾಜಕೀಯವಾಗಿ ಮೂಲೆಗುಂಪು ಮಾಡುವ ಹುನ್ನಾರ ನಡೆಯುತ್ತಿದೆ. ಅಕ್ರಮ ವಾಗಿ ಲೂಟಿ ಮಾಡಿದವರಿಗೆ ಮಣೆ ಹಾಕುತ್ತಿರುವ ಪ್ರಮುಖ ರಾಜಕೀಯ ಪಕ್ಷಗಳು ಯಾರು ಎಷ್ಟು ಖರ್ಚು ಮಾಡುತ್ತಾರೆ ಎನ್ನುವ ಸ್ಥಿತಿಗೆ ಬಂದಿದೆ ಎಂದು ವಿಷಾದಿಸಿದರು.
ಸಮಾಜ, ರಾಜಕೀಯ ಕೆಟ್ಟು ಹೋಗಿದೆ, ಪ್ರಜಾಪ್ರುಭುತ್ವ ಹಾಳಾಗಿದೆ ಎಂದು ಮಾತಿನಲ್ಲಿ ಹೇಳಿದರೆ ಪ್ರಯೋಜನ ಆಗುವು ದಿಲ್ಲ. ನಮ್ಮ ಕೊಡುಗೆ ಏನು ಎಂಬುದನ್ನು ಯೋಚಿಸಬೇಕು ಪ್ರಜಾಪ್ರಭುತ್ವದ ಮಾಲೀಕರು ಜನರು. ಅದು ಡುಡ್ಡಿನ ಪ್ರಭುತ್ವ ಇಲ್ಲವೇ ಜಾತಿಯ ಪ್ರುಭುತ್ವ, ಧರ್ಮದ ಪ್ರಭುತ್ವ ಆಗಬಾರದು.
ಜಾತ್ಯಾತೀತ, ಧರ್ಮನಿರಪೇಕ್ಷಿತ ರಾಷ್ಟ್ರ ಆಗಬೇಕು. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು. ಆ ದಿಕ್ಕಿನಲ್ಲಿ ಎಲ್ಲರೂ ಸಹಕಾರ ನೀಡಿದರೆ ಮಾತ್ರ ಸಾಧ್ಯ. ಅದೆಲ್ಲೆ ದೊಡ್ಡ ವಿಷಯಗಳು ದೊಡ್ಡದಾಗಿ ಚರ್ಚೆ ಆಗಬೇಕು, ಕೆಲವು ನಿಮಗೆ ಅರ್ಥ ಆಗುತ್ತದೆ, ಇನ್ನು ಕೆಲವರಿಗೆ ಅರ್ಥವಾಗುವುದಿಲ್ಲ. ಮೇಲೇಯೇ ಕೆಟ್ಟುಬಿಟ್ಟಿದೆ, ಇದನ್ನು ಒಬ್ಬರು ಇಬ್ಬರು ಸುಧಾರಣೆ ಮಾಡಲು ಸಾಧ್ಯವಾಗದು. ಜನಸಮೂಹ ಏಳಬೇಕು, ಯುವಕರು ಎಚ್ಚರವಾಗಬೇಕು, ಒಳ್ಳೆಯದು ಕೆಟ್ಟದು ಯಾವು ದೆಂದು ಆಲೋಚಿಸಬೇಕು, ಒಳ್ಳೆಯದಕ್ಕೆ ಪ್ರೋತ್ಸಾಹಿಸಬೇಕು. ಇಲ್ಲವಾ ದರೆ ನಾವು ನಂಬಿರುವ ಪ್ರಜಾಪ್ರಭುತ್ವದ ಮೌಲ್ಯಗಳು ಉಳಿಯದೆ ಸಾಯುತ್ತವೆ. ಇವೆಲ್ಲ ಸಾಯಲು ಬಿಡುವುದಿಲ್ಲ ಎನ್ನುವ ವಿಶ್ವಾಸ ಇನ್ನೂ ಕೂಡ ನನ್ನಲ್ಲಿ ಉಳಿದಿದೆ. ಅದನ್ನು ನಮ್ಮ ಯುವಕರು ಮುಂದಿನ ಪ್ರಜೆಗಳು ಉಳಿಸಿ ಬೆಳೆಸುವ ಕೆಲಸವನ್ನು ನೀವೆಲ್ಲಾ ಸೇರಿ ಮಾಡಬೇಕು. ಸಂವಿಧಾನ, ಪ್ರಜಾಪ್ರಭುತ್ವ ಉಳಿಸಿದರೆ ಅದು ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದರು.