ಹಾಸನ: ವಿರೋಧ ಪಕ್ಷದ ನಾಯಕ ಸಿ.ಟಿ. ರವಿ ಅವರೊಂದಿಗೆ ಎಕೆಸಿಸಿಐ ನಿರ್ದೇಶಕರು ಮತ್ತು ಹಾಸನ ಜಿಲ್ಲೆ, ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಹೆಚ್.ಎ. ಕಿರಣ್ ಹಾಗೂ ಕೈಗಾರಿಕ ಮುಖಂಡರು ಸೇರಿ ಸುಧೀರ್ಘವಾಗಿ ಚರ್ಚೆ ನಡೆಸಿದರು.
ಬಿಜೆಪಿ ಮುಖಂಡರಾದ ಸಿ.ಟಿ. ರವಿ ಅವರನ್ನು ಬೆಂಗಳೂರಿನಲ್ಲಿ ಡಾ. ಜೆ.ಆರ್. ಬಂಗೇರ, ರಾಷ್ಟ್ರೀಯ ಎಂಎಸ್ಎಂಇ ಮಂಡಳಿ ಸದಸ್ಯ, ಜಿಒಐ ಅವರೊಂದಿಗೆ ವ್ಯಾಪಾರ ಮತ್ತು ಕೈಗಾರಿಕೆಯ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಿದರು. ಕರ್ನಾಟಕದಲ್ಲಿ ಕೈಗಾರಿಕೆಗಳು ಎದುರಿಸುತ್ತಿರುವ ಪ್ರಸ್ತುತ ವಿದ್ಯುತ್ ಸಮಸ್ಯೆಯನ್ನು ಹಿಂದಿನ ಆಡಳಿತದಲ್ಲಿ ಪ್ರಾರಂಭಿಸಲಾದ ಕೆ.ಆರ್.ಇ.ಸಿ. ವರದಿಯ ಬಗ್ಗೆ ವಿವರವಾಗಿ ಚರ್ಚಿಸಲಾಯಿತು.
ಸರ್ಕಾರದ ಹಲವಾರು ಎಂ.ಎಸ್.ಎಂ.ಇ. ಯೋಜನೆಗಳು, ಭಾರತದ ದಕ್ಷಿಣ ಭಾರತದಲ್ಲಿ ಸರಿಯಾಗಿ ಬಳಕೆಯಾಗುತ್ತಿಲ್ಲ ಎಂದು ದೂರಿದರು. ಈ ಸರ್ಕಾರದ ಅನುಷ್ಠಾನ, ಭಾರತದ ಯೋಜನೆಗಳ ಬಗ್ಗೆಯೂ ಚರ್ಚಿಸಲಾಯಿತು. ಎಫ್.ಕೆ.ಸಿ.ಸಿ.ಐ. ಸಮಿತಿ ಸಂಘದ ಅಧ್ಯಕ್ಷ ರಾಜಪುರೋಹಿತ್ ಸಹ ಉಪಸ್ಥಿತರಿದ್ದರು.