News Karnataka Kannada
Friday, May 03 2024
ಹಾಸನ

ಹಾಸನ: ಭವಾನಿ ರೇವಣ್ಣಗೆ ಟಿಕೆಟ್ ಆಫರ್ ನೀಡಿದ ಸಿ.ಟಿ.ರವಿ

CT Ravi congratulates Vijayendra on being elected as BJP state president
Photo Credit : Facebook

ಹಾಸನ: ಒಂದು ವೇಳೆ ಪಕ್ಷದ ನೀತಿ ಸಿದ್ದಾಂತವನ್ನು ಒಪ್ಪಿ ಬಂದರೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರಿಗೆ ಬಿಜೆಪಿ ಟಿಕೆಟ್ ನೀಡಲಿದೆ ಎಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭವಾನಿ ರೇವಣ್ಣ ಅವರು ಬಿಜೆಪಿಯ ಸಿದ್ದಾಂತ ವನ್ನು ಒಪ್ಪಿ ಬಂದರೆ ಖಂಡಿತವಾಗಿಯೂ ಅವರಿಗೆ ಟಿಕೆಟ್ ನೀಡಲಾಗುತ್ತದೆ. ಹೊಳೆನರಸೀಪುರದಲ್ಲಿ ಅವರಿಗಿಂತ ಒಳ್ಳೆಯ ಅಭ್ಯರ್ಥಿ ಇನ್ಯಾರು ಬೇಕು ಎಂದು ಪ್ರಶ್ನಿಸಿದರು.

ಯಾರೇ ಬಂದರೂ ಖಂಡಿವಾಗಿಯೂ ಅವರ ಹಿನ್ನಲೆ ನೋಡಿ ಕೊಂಡು ಪಕ್ಷದ ವರಿಷ್ಠರು ಟಿಕೆಟ್ ತೀರ್ಮಾನಿಸುತ್ತಾರೆ. ಅದರಂತೆ ಭವಾನಿ ರೇವಣ್ಣ ಬಂದರೂ ಕೂಡ ನಾವು ಮುಕ್ತ ಸ್ವಾತಂತ್ರ್ಯ ನೀಡಲಾ ಗುವುದು ಎಂದರು. ನಾವು ಯಾರನ್ನೂ ಕೂಡ ಪಕ್ಷಕ್ಕೆ ಬರಬೇಕೆಂದು ಒತ್ತಡ ಹಾಕುವುದಿಲ್ಲ. ಬಂದವರಿಗೆ ಟಿಕೆಟ್ ಕೊಡುತ್ತೇವೆ ಎಂದು ಖಾತರಿಯನ್ನೂ ನೀಡುವುದಿಲ್ಲ. ನನ್ನಂತೆ ಅನೇಕರು ಪಕ್ಷಕ್ಕಾಗಿ ದುಡಿದಿದ್ದಾರೆ. ಸಂಘಟನೆಯಲ್ಲಿ ತೊಡಗಿಸಿಕೊಂಡವರಿಗೆ ಸಾಮಥ್ರ್ಯಕ್ಕೆ ಅನುಗುಣವಾಗಿ ಟಿಕೆಟ್ ಕೊಡಲಾಗುತ್ತದೆ ಎಂದು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು