News Karnataka Kannada
Thursday, May 09 2024
ಹಾಸನ

ಹಾಸನ: ಕಾಂಗ್ರೆಸ್‌ನ ಪ್ರಜಾಧ್ವನಿ ಬಸ್‌ಯಾತ್ರೆ ದೊಂಬರಾಟ- ಸಿ.ಟಿ ರವಿ ವ್ಯಂಗ್ಯ

Hassan: Congress' Prajadhvani bus yatra a sham, says C T Ravi
Photo Credit : News Kannada

ಹಾಸನ: ಬಿಜೆಪಿ ಪಕ್ಷವನ್ನು ಭ್ರಷ್ಟಾಚಾರದ ರಾಜಧಾನಿ ಎಂದು ಕರೆದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯ ದರ್ಶಿ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಮಾಧ್ಯಮ ದೊಂದಿಗೆ ಮಾತನಾಡಿದ ಅವರು , ಭೂತದ ಬಾಯಲ್ಲಿ ಭಗವದ್ಗೀತೆ ಅಂತ ಹೇಳುವ ಮಾತು ಡಿ.ಕೆ. ಶಿವಕುಮಾರ್ ಅವರಿಗೆ ಅನ್ವಯ ಆಗುತ್ತದೆ. ಈಗಾಗಲೇ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಹಲವು ಮೊಕದ್ದಮೆಗಳು ಅವರ ಮೇಲಿದೆ. ದೆಹಲಿಗೆ ಹೋಗಿ ತಿಹಾರ್ ಜೈಲ ನ್ನು ನೋಡಿಕೊಂಡು ಬಂದಿರುವ ಇವರು ಜಾಮೀನಿನ ಮೇಲೆ ಹೊರಗಿದ್ದಾರೆ. ಇಂತಹ ಸಂದರ್ಭದಲ್ಲಿ ಅವರು ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದು, ಆರೋಪ ಮಾಡುವಾಗ ಸತ್ಯಾ ಸತ್ಯತೆ ಏನೆಂಬುದನ್ನು ಗಮನಿಸ ಬೇಕು ಎಂದು ತಿರುಗೇಟು ನೀಡಿದರು.

ಸ್ಯಾಂಟ್ರೋ ರವಿ ಜೊತೆ ಬಿಜೆಪಿ ಸಚಿವರ ನಂಟಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಯಾರನ್ನು ರಕ್ಷಣೆ ಮಾಡುವುದಿಲ್ಲ. ಈಗಾಗಲೇ ತನಿಖೆ ನಡೆಯುತ್ತಿದ್ದು, ಬಂಧನಕ್ಕೆ ಹುಡುಕಾಟದಲ್ಲಿದ್ದಾರೆ ಎಂದರು.

ಜೆಡಿಎಸ್ ಪಕ್ಷವು ಬಿಜೆಪಿಯ ಬಿ ಟೀಂ ಎಂಬ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವನಾರಾ ಯಣ್ ಹೇಳಿಕೆಗೆ ಉತ್ತರಿಸಿದ ಅವರು, ಜೆಡಿಎಸ್ ಬಿಜೆಪಿಯ ಬಿ ಟೀಂ ಅಂತಾ ಸಿದ್ದರಾಮಯ್ಯ ಹೇಳಿದ್ರು. ಆಮೇಲೆ ಜೆಡಿಎಸ್ ಜೊತೆ ಸೇರಿ ಸರ್ಕಾರ ಮಾಡಿದ್ರು. ಯಾರದ್ದು ಯಾವ ಟೀಂ ಅನ್ನೋದು ಸ್ಪಷ್ಟವಾಗುತ್ತದೆ. ೨೦೧೯ರ ಎಂಪಿ ಚುನಾವಣೆಯಲ್ಲಿ ಮೋದಿಯವರಿಗೆ ಒಂದು ಸೀಟು ಗೆಲ್ಲಕೆ ಬಿಡಲ್ಲ ಅಂತ ಹೇಳಿ ಒಟ್ಟಿಗೆ ನಿಂತವರು ಯಾರು? ಅವರಿಗೆ ಮರೆತು ಹೋಗಿದ್ರೆ ಚಾಮರಾಜ ನಗರದ್ದು ನನ್ನ ಹತ್ರ ಫೋಟೋ ಇದೆ ಬೇಕಾದ್ರೆ ಕಳುಹಿಸಿಕೊಡ್ತಿನಿ ಎಂದು ತಿಳಿಸಿದರು.

ನನ್ನ ರಕ್ತ ಕಾಂಗ್ರೆಸ್‌ನಲ್ಲೇ ಇದೇ, ನಾನು ಕಾಂಗ್ರೆಸ್‌ಗೆ ಹೋಗ್ತಿನಿ ಎಂಬ ಎಚ್.ವಿಶ್ವನಾಥ್ ಹೇಳಿಕೆ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಿ.ಟಿ. ರವಿ ಅವರು, ಕಂಡಿತ ಹೋಗ್ಲಿ ಯಾರೂ ಬೇಡ ಅನ್ನೋರು, ಯಾರು ತಡೆದಿರೋರು, ಅವರ ಇಷ್ಟು ವರ್ಷದ ರಾಜಕೀ ಯ ಅನುಭವಕ್ಕೆ ಹೇಗೆ ಬಿಜೆಪಿಗೆ ಬರಬೇಕಾದ್ರೆ ಜೆಡಿಎಸ್‌ಗೆ ರಾಜೀನಾಮೆ ಕೊಟ್ಟು ಬಂದ್ರೋ ಅದೇ ರೀತಿ ಕಾಂಗ್ರೆಸ್‌ಗೆ ಹೋಗಬೇ ಕಾದ್ರೆ ಬಿಜೆಪಿಗೆ ರಾಜೀನಾಮೆ ಕೊಟ್ಟು ಹೋಗ್ತಾರೆಂದು ಟಾಂಗ್ ನೀಡಿದರು.

ಏನೇ ಯಾತ್ರೆ ಹೊರಟರು ಕೂಡಾ ೩೬೫ ದಿನ ಓದಿದ ವಿದ್ಯಾರ್ಥಿಗೆ ಮೂರು ದಿನ ಓದುವವರು ಸರಿಸಾಟಿಯಾಗಲೂ ಸಾಧ್ಯವೇ ಇಲ್ಲ. ಬಿಜೆಪಿ ೩೬೫ದಿನ ಕೆಲಸ ಮಾಡುವ ಪಾರ್ಟಿ. ೩ದಿನ ಕಸರತ್ತು, ಸರ್ಕಸ್ ಮಾಡುವಂತಹವರು ಕಾಂಗ್ರೆಸ್‌ನವರು, ಜನತಾದಳದವರು. ಮೂರ ದಿನದ ಕಸರತ್ತುನ್ನು ಜನರು ನೋಡ್ತಾರೆ. ಸಂತೆಯೊಳಗೆ ನಡೆಯುವ ದೊಂಬರಾಟವನ್ನು ಜನರು ನೋಡ್ತಾರೆ. ನಾಲ್ಕು ಕಾಸು ಹಾಕ್ತಾರೆ. ಕೆಲವರು ಚಪ್ಪಾಳೆನು ತಟ್ಟುತ್ತಾರೆ, ಕೆಲವರು ಪಿಕ್‌ಪ್ಯಾಕೆಟ್‌ನ ವರು ಬಂದು ಪಿಕ್‌ಪ್ಯಾಕೆಟ್ ಮಾಡ್ಕಂಡು ಹೋಗ್ತಾರೆ. ಹಂಗೆ ಇದು ಮಾಡ್ತಿರ್ತರೆ ಮಾಡ್ಲಿ, ಇದು ಒಂದು ರೀತಿ ದೊಂಬರಾಟ ಮಾಡಲಿ ಎಂದು ಕಾಂಗ್ರೆಸ್‌ನ ಪ್ರಜಾಧ್ವನಿ ಬಸ್‌ಯಾತ್ರೆಯನ್ನು ದೊಂಬರಾಟ ಎಂದು ವ್ಯಂಗ್ಯವಾಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು