ಹೊಳೆನರಸೀಪುರ: ಸ್ಪರ್ಧಾತ್ಮಕ ಯುಗದಲ್ಲಿ ಉನ್ನತ ಹುದ್ದೆ ಅಲಂಕರಿಸಲು ಉತ್ತಮ ವ್ಯಾಸಂಗದ ಜತೆಗೆ ಜ್ಞಾನ ಸಂಪಾದನೆಯ ಅಗತ್ಯತೆಯೂ ಇದೆ ಎಂದು ಬೆಳಗಾವಿಯ ಉಪ ವಿಬಾಗೀಯ ಆಡಳಿತಾಧಿಕಾರಿ ಕೆ.ಜೆ.ಕಾಂತರಾಜ್ ತಿಳಿಸಿದರು.
ಪಟ್ಟಣದಲ್ಲಿ ಕೆಎಸ್ಆರ್ಟಿಸಿ ಎಸ್ಸಿ, ಎಸ್ಟಿ ಸಮನ್ವಯ ಸಮಿತಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಜಯಂತೋತ್ಸವ ಆಚರಣೆ ಸಂದರ್ಭದಲ್ಲಿ ಪ್ರತಿ ಭಾನ್ವಿತ ವಿದ್ಯಾರ್ಥಿಗಳಿಗೆ ಹಾಗೂ ಸಮಾಜಿಕ ನಾನಾ ಸಾಧಕರಿಗೆ ಪುರಸ್ಕರಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾಗತೀ ಕರಣದ ಪ್ರಭಾವ ಎಲ್ಲ ಸ್ಥರದಲ್ಲೂ ಸ್ಪರ್ಧೆ ಒಡ್ಡುತ್ತಿದೆ. ವೇಗದ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧನೆ ಬಹುಮುಖ್ಯವಾಗಿ ರುತ್ತದೆ. ಈ ನಿಟ್ಟಿನಲ್ಲಿ ಯುವಕರು ಹೆಚ್ಚಿನ ಗಮನ ಹರಿಸುವ ಮೂಲಕ ಯಶ ಕಾಣಬೇಕಿದೆ ಎಂದರು.
ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಆಯ್ದ ವಿದ್ಯಾ ರ್ಥಿಗಳನ್ನು ಸನ್ಮಾನಿಸಲಾಯಿತು. ಪೊಲೀಸ್, ನಿರುದ್ಯೋಗಿ ಪ್ರತಿ ಭಾನ್ವಿತರು, ಸಾಧನೆಯ ಹಾದಿ ಯಲ್ಲಿರುವ ವಿಕಲ ಚೇತನರಿಗೆ ಸೇರಿದಂತೆ ಸಮಾಜದಲ್ಲಿನ ನಾನಾ ಸ್ಥರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಸನ್ಮಾನಿಸಲಾಯಿತು.
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹಾಸನ ವಿಭಾಗದ ನಿಯಂತ್ರ ಣಾಧಿಕಾರಿ ಅರುಣ್, ಸಮನ್ವಯ ಸಮಿತಿ ರಾಜ್ಯ ಪ್ರಧಾನ ಕಾರ್ಯ ದರ್ಶಿ ಬಿ.ಆರ್.ಕೃಷ್ಣಯ್ಯ, ಬೌದ್ಧ ಧರ್ಮ ಜಿಲ್ಲಾಧ್ಯಕ್ಷ ವೆಂಕ ಟೇಶ್ಮೂರ್ತಿ ಹಾಗೂ ಎಸ್ಸಿ ಎಸ್ಟಿ ರಾಜ್ಯ ಸಂಚಾಲಕ ಕೆಂಪ ಸಿದ್ದಯ್ಯ ಮತ್ತಿತರರು ಉಪಸ್ಥಿತರಿದ್ದರು.