ಹಾಸನ: ಹಾಸನ ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ ವಿಚಾರವನ್ನು ಬಗೆಹರಿಸುತ್ತೇವೆ ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ತಿಳಿಸಿದರು.
ಹಾಸನ ಜಿಲ್ಲೆ, ಹೊಳೆನರಸೀಪುರ ಪಟ್ಟಣದಲ್ಲಿ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಪಕ್ಷ ಸಂಘಟನೆಗಾಗಿ ಹಗಲು ರಾತ್ರಿ ಹೋರಾಟ ನಡೆಸುತ್ತಿದ್ದಾರೆ. ಅವರಿಗೆ ಎರಡು ಸಾರಿ ಆಪರೇ ಷನ್ ಆಗಿದ್ದು, ಆರೋಗ್ಯ ಲೆಕ್ಕಿಸದೆ ಹೋರಾಟ ಮಾಡುತ್ತಿದ್ದಾರೆ. ಅವರಿಗೆ ನೋವಾಗದ ರೀತಿ ಸಮಸ್ಯೆ ಬಗೆಹರಿಸುತ್ತೇವೆ ಎಂದರು.
ನಮ್ಮ ಕುಮಾರಣ್ಣ ನಾಯಕರು, ನಾನು ಬದುಕಿರುವವರೆಗರ ಹೊಡೆದಾಡುವ ಪ್ರಶ್ನೆಯೇ ಇಲ್ಲ. ದೇವೇಗೌಡರಿಗೆ ದೇವರು ಆರೋಗ್ಯ ಕೊಡಲಿ. ದೇವೇಗೌಡರ ಮುಂದೆ ೧೨೩ ಸೀಟ್ ಗೆದ್ದು ಕುಮಾರಣ್ಣನ್ನ ಮುಖ್ಯಮಂತ್ರಿ ಗದ್ದುಗೆಗೆ ಏರಿಸಿ ವಿಧಾನಸೌಧದಲ್ಲಿ ಜೆಡಿಎಸ್ ಬಾವುಟ ಹಾರಿಸಬೇಕು ಎಂದರು.
ಪಂಚರತ್ನ ಯೋಜನೆ ಬಗ್ಗೆ ದೇವೇಗೌಡರಿಗೆ ಕನಸಿದೆ. ಕುಮಾರಣ್ಣ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ರಾಜ್ಯದ ಮುಖ್ಯ ಮಂತ್ರಿ. ನಮ್ಮ ಜಿಲ್ಲೆಯಲ್ಲಿ ಕೆಲವು ಹಿರಿಯ ಮುಖಂಡರಿದ್ದಾರೆ ಅವ ರಿಗೆ ಯಾವ ರೀತಿ ಶಕ್ತಿ ತುಂಬ ಬೇಕು ಎಂದು ಕುಳಿತು ಮಾತನಾಡುತ್ತೇವೆ. ಹಾಸನ, ಅರಸೀಕೆರೆ ಕ್ಷೇತ್ರ ದಲ್ಲೂ ಸಭೆ ಮಾಡ್ತಿವಿ. ಅರಸೀಕೆರೆಯಲ್ಲಿ ಫೆ.೧೨ ರಂದು ಸಭೆ ಆಯೋಜಿಸಲಾಗಿದೆ. ಸಭೆಗೆ ಕುಮಾರಣ್ಣ ಸಹಿತ ಎಲ್ಲರೂ ಬರ್ತಾರೆ. ಪ್ರಹ್ಲಾದ್ ಜೋಶಿ ಹಾಗೂ ಕುಮಾರಸ್ವಾಮಿ ಹೇಳಿಕೆ ವಿಚಾರ ಗೊತ್ತಿಲ್ಲಪ್ಪ ನನಗೆ, ನಾನು ಆ ಮಟ್ಟಕ್ಕೆ ಬೆಳೆದಿಲ್ಲ ಎಂದು ತಿಳಿಸಿದರು.