ಹಾಸನ: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು 1ತಿಂಗಳೆ ಕಳೆದಿದೆ. ರಾಜ್ಯಸರ್ಕಾರದ ಸಾರಥಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜ್ಯದ ಜನತೆಗೆ ನೀಡಿದ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಹರಸಾಹಸ ಪಡುತ್ತಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಸರಿಸುಮಾರು 9 ವರ್ಷಗಳೆ ಕಳೆದಿವೆ. ಎ. ಮಂಜು ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಜಿಲ್ಲಾ ಪಂಚಾಯಿತ್ನಲ್ಲಿ ಕಾಂಗ್ರೆಸ್ ಪಕ್ಷ 16 ಸ್ಥಾನಗಳನ್ನು ಗೆದ್ದು ಬೀಗಿತ್ತು ಸರಿಯಷ್ಟೆ. ಇಲ್ಲಿಂದ ಕಾಂಗ್ರೆಸ್ ಪಕ್ಷಕ್ಕೆ ಬೂಸ್ಟರ್ ಡೋಸ್ ಕೊಡುವ ನಾಯಕರು ಜಿಲ್ಲೆಯಲ್ಲಿ ಬರಲೇಇಲ್ಲ ಇಷ್ಟಕ್ಕೆ ಸಾಕುಬಿಡಿ. ಇನ್ನೂ ಹಾಸನ ನಗರಸಭೆಯ 35 ವಾರ್ಡ್ಗಳಲ್ಲಿ ಕಾಂಗ್ರೆಸ್ ಪಕ್ಷ 2 ಸ್ಥಾನಗಳಲ್ಲಿ ಗೆಲ್ಲಲು ಶಕ್ತವಾಯಿತು ಅಷ್ಟೆ. ಅದರಲ್ಲೂ ಒಬ್ಬ ನಗರಸಭಾ ಸದಸ್ಯೆ ಕಳೆದವಾರ ಜೆ.ಡಿ.ಎಸ್. ಪಕ್ಷಕ್ಕೆ ಸೇರ್ಪಡೆಗೊಂಡು ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷಕ್ಕೆ ಅಘಾತ ನೀಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಇದರ ಪರಿಣಾಮ ಕಾಂಗ್ರೆಸ್ ಪಕ್ಷದ ನಾಯಕರು ಜಿಲ್ಲೆಯಲ್ಲಿ ನಿಗಮ ಮಂಡಳಿಗಳಲ್ಲಿ ಅಧ್ಯಕ್ಷ ಸ್ಥಾನ ಮತ್ತು ನಿರ್ದೇಶಕ ಸ್ಥಾನ ಪಡೆಯಲು ಶತಾಯಗತಾಯ ಪ್ರಯತ್ನ ಆರಂಭಿಸಿದ್ದಾರೆ. ತಮ್ಮ ರಾಜಕೀಯ ಗುರುಗಳ ಮನಗೆಲ್ಲಲು ಇನ್ನಿಲ್ಲದ ಪ್ರಯತ್ನ ಪಡುತ್ತಿದ್ದಾರೆ ಎಂಬ ವದಂತಿ ಇದೆ ಅದರಂತೆ ಒಬ್ಬ ಕಾಂಗ್ರೆಸ್ ಪಕ್ಷದ ಮುಖಂಡ ರಿಯಲ್ ಎಸ್ಟೇಟ್ ಉಧ್ಯಮಿ ಪಕ್ಷದ ಸಿದ್ದಾಂತ ಬಿಟ್ಟು ಒಂದು ಹೆಜ್ಜೆ ಮುಂದುಹೋಗಿ. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪದವಿಗೇರಲು 5ಕೋಟಿ ಹಣವನ್ನು ಕಾಂಗ್ರೆಸ್ ಪಕ್ಷಕ್ಕೆ ದೇಣಿಗೆ ನೀಡಲು ಮುಂದಾಗಿದ್ದಾರೆ ಎಂಬ ಸುದ್ದಿ ಹಾಸನ ನಗರದ ಗಲ್ಲಿ-ಗಲ್ಲಿಗಳಲ್ಲೂ ಹರಿದಾಡತೊಡಗಿದೆ.
ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪದವಿಗೆ ೫ಕೋಟಿ ಕೊಟ್ಟು ಅಧಿಕಾರ ಪಡೆಯಲು. ಆ ಇಲಾಖೆಯಲ್ಲಿ ಅಂತಹದ್ದು ಏನಿದೆ ? ಎಂಬ ಪ್ರಶ್ನೆ ಯಕ್ಷವಾಗೆ ಉಳಿದಿದೆ. 5ಕೋಟಿ ಕೊಟ್ಟು ಆ ನಾಯಕ ಅಧ್ಯಕ್ಷ ಪದವಿಗೇರಿದರೆ ಆ ಸಂಸ್ಥೆಯ ಕಥೆ ಏನು ಎಂಬುದು ಕಾಂಗ್ರೆಸ್ ಪಕ್ಷದ ರಾಜಕೀಯ ಪಂಡಿತರ ಲೆಕ್ಕಚಾರವಾಗಿದೆ. ಆತನಿಂದ ಭ್ರಷ್ಠಾಚಾರ ರಹಿತ ಆಡಳಿತ ನಿರೀಕ್ಷಿಸುವುದ ಹೇಗೆ ಸಾಧ್ಯ ಎಂಬುದು ಕಾಂಗ್ರೆಸ್ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರ ವಾದವಾಗಿದೆ. ಅಧಿಕಾರಗಳೆಲ್ಲ ಹಣಕ್ಕೆ ಮಾರುಹೋದರೆ ಪ್ರಾಮಾಣಿಕ ಕಾರ್ಯಕರ್ತ ಪಾಡೇನು ಎಂಬುದು ಪ್ರಶ್ನಾತೀತ ಚರ್ಚೆಯಾಗಿದೆ.
ಹಾಸನ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಏಳಿಗೆಗಾಗಿ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ ಪ್ರಾಮಾಣಿಕ ಕಾರ್ಯಕರ್ತರಿಗೆ ಅಧಿಕಾರ ನೀಡಬೇಕು ಎಂಬುದು ಹಾಸನ ಜಿಲ್ಲೆಯ ರಾಜಕೀಯ ಪಂಡಿತರ ವಾದವಾಗಿದೆ.