News Karnataka Kannada
Tuesday, May 07 2024
ಹಾಸನ

ಹಾಸನ: ಕೃಷಿ ಇಲಾಖೆ ಅಧಿಕಾರಿ ಎಂದು ಹೇಳಿ ರೈತರಿಗೆ ವಂಚನೆ, ಇಬ್ಬರ ಬಂಧನ

Hassan: Two arrested for duping farmers by claiming to be agriculture department official
Photo Credit : News Kannada

ಹಾಸನ: ನಾನು ಆಲೂರು ಕೃಷಿ ಇಲಾಖೆ ಅಧಿಕಾರಿ ಎಂದು ಹೇಳಿಕೊಂಡು ರೈತರಿಗೆ ಕಡಿಮೆ ಧರ, ಸಬ್ಸಿಡಿ ಧರದಲ್ಲಿ ಟಾರ್ಪಲ್ ಮತ್ತು ಪೈಪ್ ಸೇರಿದಂತೆ ಇತರೆಗಳನ್ನು ಸಬ್ಸಿಡಿ ಧರದಲ್ಲಿ ಕೊಡುವುದಾಗಿ ಹೇಳಿ ಹಣ ಪಡೆದು ವಂಚನೆ ಮಾಡಿದ ಇಬ್ಬರನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ ಘಟನೆ ನಡೆದಿದೆ.

ಹಾಸನ ತಾಲ್ಲೂಕಿನ ವರ್ತಿಕೆರೆ ಗ್ರಾಮದ ವೆಂಕಟೇಶ್ ಬಿನ್ ಲೇಟ್ ಜವರೇಗೌಡ ಎಂಬುವರು ಹಾಸನ ನಗರ ಪೊಲೀಸ್ ಠಾಣೆಗೆ ಹಾಜರಾಗಿ ನನಗೆ ಹಾಸನ ನಗರದ ಸಂತೆಪೇಟೆ ಬಳಿ ಇರುವ ಕೃಷಿ ಇಲಾಖೆ ಜಂಟಿ ನಿರ್ದೇಶಕರ ಕಛೇರಿ ಬಳಿ ಆಲೂರು ತಾಲ್ಲೂಕಿನ ಪಾಳ್ಯ ಹೋಬಳಿಯ ಸಿಂಧುವಳ್ಳಿ ಗ್ರಾಮದ ಹೇಮಂತ್ ಎಂಬುವರು ಪರಿಚಯವಾಗಿ ನಾನು ಆಲೂರು ತಾಲ್ಲೂಕಿನ ಕೃಷಿ ಇಲಾಖೆ ಅಧಿಕಾರಿಯಾಗಿದ್ದು, ರೈತರಿಗೆ ಕೃಷಿ ಇಲಾಖೆಯಿಂದ ಸಬ್ಸಿಡಿ ದರದಲ್ಲಿ ವಿತರಣೆ ಮಾಡುವ ಟಾರ್ಪಲ್, ಪೈಫುಗಳು, ಜಟ್ಟು ಮುಂತಾದ ಸಲಕರಣೆ ಕಡಿಮೆ ಹಣದಲ್ಲಿ ಕೊಡಿಸುವುದಾಗಿ ತಮ್ಮ ಮೊಬೈಲ್ ಫೋನ್ ಪೋನ್ ಪೇ ನಂಬರ್ ಗೆ ಸುಮಾರು ೨೦ ಸಾವಿರ ರುಪಾಯಿ ಹಣ ವರ್ಗಾವಣೆ ಮಾಡಿಸಿಕೊಂಡಿದ್ದು, ನಂತರ ಇನ್ನೂ ಹಲವು ಕೃಷಿ ಉಪಕರಣಗಳು ನನ್ನ ಬಳಿ ನಿಮ್ಮ ಪರಿಚಯದವರಿಗೆ ತಿಳಿಸಿ ಎಂದು ಹೇಳಲಾಗಿತ್ತು ಎಂದರು.

ಸ್ನೇಹಿತರೆಲ್ಲರೂ ಸೇರಿ ಆತನಿಗೆ ಪೋನ್ ಪೆ ಮುಖಾಂತರ ಹಣ ವರ್ಗಾವಣೆ ಮಾಡಲಾಗಿದ್ದು, ಹಣ ಪಡೆದು ೫ -೬ ತಿಂಗಳಾದರು ಕೃಷಿ ಸಲಕರಣೆಗಳನ್ನು ನೀಡದ ಬಗ್ಗೆ ಗ್ರಾಮಕ್ಕೆ ಹೋಗಿ ಆ ವ್ಯಕ್ತಿ ಬಗ್ಗೆ ವಿಚಾರ ಮಾಡಲಾಗಿ ಈ ತರಹದ ವ್ಯಕ್ತಿ ಗ್ರಾಮದಲ್ಲಿ ಇರುವುದಿಲ್ಲ ಎಂದು ತಿಳಿಸಲಾಯಿತು.

ಈ ಸಂಬಂಧ ಸುಮಾರು ೬ ಜನ ರೈತರು ಆತನಿಗೆ ಸುಮಾರು ೧ ಲಕ್ಷದ ೨೮ ಸಾವಿರ ರುಪಾಯಿ ಹಣ ನೀಡಿದ್ದು, ನಮಗೆ ಕೃಷಿ ಸಲಕರಣೆಗಳನ್ನು ವಿತರಣೆ ಮಾಡಿರುವುದಿಲ್ಲ ಮತ್ತು ಹಣವನ್ನು ಹಿಂತಿರುಗಿಸರುವುದಿಲ್ಲ. ರೈತರಾದ ತಮಗೆ ವಂಚನೆ ಮಾಡಿದ್ದಾರೆ ಎಂದು ನಗರ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಹೇಮಂತ್ ಮತ್ತು ಆತನ ಸಹಚರ ಸೇರಿ ಇಬ್ಬರನ್ನೂ ಬಂದಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು