ಹಾಸನ: ಹಾಸನಾಂಬ ದೇವಾಲಯದ 14 ದಿನಗಳ ಜಾತ್ರಾ ಮಹೋತ್ಸವ ಅ.27ರ ಗುರುವಾರ ಸಮಾಪ್ತಿಗೊಂಡಿತು. ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ನೀಡುವ ಹಾಸನಾಂಬ ದೇವಾಲಯದ ಬಾಗಿಲುಗಳನ್ನು ಅಕ್ಟೋಬರ್ 27ರ ಗುರುವಾರ ಮಧ್ಯಾಹ್ನ 12.47ಕ್ಕೆ ವಿಧ್ಯುಕ್ತವಾಗಿ ಮುಚ್ಚಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಶಾಸಕ ಪ್ರೀತಂ ಗೌಡ, ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಂತರಾಜು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ಉಪಸ್ಥಿತಿಯಲ್ಲಿ ಸಾವಿರಾರು ಭಕ್ತರ ಹರ್ಷೋದ್ಘಾರಗಳ ನಡುವೆ ಹಾಸನಾಂಬ ದೇವಾಲಯದ ಬಾಗಿಲು ಮುಚ್ಚಲಾಯಿತು.
ಈ ವರ್ಷ ಸುಮಾರು ೬ ಲಕ್ಷ ಭಕ್ತರು ಹಾಸನಾಂಬ ದೇವಿಯ ದರ್ಶನ ಪಡೆದಿದ್ದಾರೆ ಎಂದು ಜಿಲ್ಲಾಡಳಿತ ಅಂದಾಜಿಸಿದೆ.
ದೇವಾಲಯದ ಆಡಳಿತಾಧಿಕಾರಿ ಬಿ.ಎ.ಜಗದೀಶ್ ಅವರ ಪ್ರಕಾರ, ಪ್ರತಿದಿನ 20,000 ದಿಂದ 30,000 ಭಕ್ತರು ಬರುತ್ತಿದ್ದು, ರಜಾದಿನಗಳಲ್ಲಿ 30,000 ರಿಂದ 40,000 ಭಕ್ತರು ಭೇಟಿ ನೀಡುತ್ತಾರೆ.