News Karnataka Kannada
Monday, May 06 2024
ಹಾಸನ

ಹಾಸನ: ಎನ್‌ಇಪಿ ಶಿಕ್ಷಣ ನೀತಿಯನ್ನು ಗಂಭೀರವಾಗಿ ಪರಿಗಣಿಸಿ- ಬಿ.ಸಿ ನಾಗೇಶ್

Hassan: Take the NEP education policy seriously, says B C Nagesh
Photo Credit : News Kannada

ಹಾಸನ: ಈ ಹಿಂದಿನ ಶಿಕ್ಷಣ ನೀತಿ ಸರ್ಕಾರಕ್ಕೆ ಗುಲಾಮರನ್ನು ಸೃಷ್ಟಿಸಿ ಕೊಡುವುದಕಷ್ಟೇ ಸೀಮಿ ತವಾಗಿದೆ. ಹೀಗಾಗಿ ಎನ್‌ಇಪಿ ಮೂಲಕ ನಮ್ಮ ಶಿಕ್ಷಣ ವ್ಯವಸ್ಥೆ ಬದಲಾಗಬೇಕು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾ ಖೆ ಸಚಿವ ಡಾ. ಬಿ.ಸಿ.ನಾಗೇಶ್ ಅಭಿಪ್ರಾಯಪಟ್ಟರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಕ್ರೀಡಾಂಗಣ ಹಾಕಿ ಮೈದಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿ ಸಿ ಮಾತನಾಡಿ, ಕಾಲಕ್ಕೆ ತಕ್ಕಂತೆ ನಾವು ತಯಾರಾಗುವ ಅಗತ್ಯತೆ ಹೆಚ್ಚಿದೆ. ಹಿಂದೆ ಇದ್ದ ಸವಾಲು ಗಳಿಂತ ಪ್ರಸ್ತುತ ಹೆಚ್ಚು ಸವಾಲಿದೆ. ಇಂದಿನ ಶಿಕ್ಷಣ ಪದ್ಧತಿ ಸರಿ ತಪ್ಪು ಗಳ ಬಗ್ಗೆ ನಮ್ಮೆಲ್ಲರಿಗೂ ದ್ವಂದ್ವಗಳು ಕಾಡುತ್ತಿದೆ.

ಖುಷಿ ಮುನಿಗಳ ಕಾಲದಿಂ ದಲೇ ಜ್ಞಾನ ಕ್ಕೆ ಆದ್ಯತೆ ಕೊಟ್ಟ ದೇಶ ನಮ್ಮದು , ಜ್ಞಾನ ದ ಆಧಾರದ ಮೇಲೆ ದೇಶ ಕಟ್ಟಲಾಗಿದೆ. ಬ್ರಿಟಿಷ್‌ರು ಮುಚ್ಚಿಟ್ಟ ಅನೇಕ ವಿಷಯಗಳು ಇಂದು ಹೊರಗೆ ಬರುತ್ತಿವೆ. ಹೇಗೆ ಗುರು ಕುಲ ಶಿಕ್ಷಣ ಪದ್ಧತಿ ಭಾರತೀಯ ಎಲ್ಲಾ ವ್ಯವಸ್ಥೆಗಳ ಮೇಲೆ ಪ್ರಭಾವ ಬೀರಿತ್ತು ಎಂದರು.

ಇಂದು ಮೆದುಳಿನ ಸಾಮ ರ್ಥ್ಯದ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ನಮ್ಮ ಪೂರ್ವಜರು ಅಂದೆ ಮೆದುಳಿನ ಸಾಮಾರ್ಥ್ಯ ದ ಬಗ್ಗೆ ತಿಳಿದುಕೊಂಡಿದ್ದರು. ಮಗುವಿನ ಸಾಮಾರ್ಥ್ಯ ಅರ್ಥಮಾಡಿಕೊಂಡು ಶಿಕ್ಷಣ ನೀಡುತ್ತಿದ್ದರು. ನಮ್ಮಭಾರ ತೀಯ ಶಿಕ್ಷಣ ಪದ್ಧತಿ ಹಾಳಾಗಿದ್ದು ಬ್ರಿಟೀಷರ ಆಳ್ವಿಕೆಯ ನಂತರ. ಶಿಕ್ಷಣ ವ್ಯವಸ್ಥೆ ಬದಲಾಯಿಸದಿದ್ದರೆ ನಾವು ಆಳ್ವಿಕೆ ಮಾಡಲು ಸಾಧ್ಯವಿಲ್ಲ ಎಂದು ಬ್ರಿಟೀಷರು ಭಾರತದ ಶಿಕ್ಷಣ ವ್ಯವಸ್ಥೆ ಮೇಲೆ ಕೈಹಾಕಿದರು ಅದರಿಂದ ಪ್ರತಿಗ್ರಾಮದಲ್ಲಿ ನಡು ತೋಪನ್ನು ಮಾಡಲಾಗುತ್ತಿತ್ತು ಆದರೆ ಇದೀಗ ಅರಣ್ಯ ಇಲಾಖೆ ಯಾಗಿ ಬದಲಾಗಿದ್ದು ಕೆರೆಕಟ್ಟೆಗಳನ್ನು ಆಯ ಗ್ರಾಮದ ಸಿರಿವಂತರೂ ಕಟ್ಟಿಸುತ್ತಿದ್ದರು. ಇದೀಗ ನೀರಾವರಿ ಇಲಾಖೆಯಾಗಿ ಪರಿವರ್ತನೆ ಗೊಂ ಡಿದೆ ಇದೆಲ್ಲ ಬ್ರಿಟಿಷರು ಹೇಳಿದ ಆಳ್ವಿಕೆಯ ಉದಾಹರಣೆಗಳಾಗಿವೆ ಎಂದರು

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಶಿಕ್ಷಕರು ಗಂಭೀ ರವಾಗಿ ಪರಿಗಣಿಸಬೇಕು. ಎನ್‌ಇ ಪಿ ಶಿಕ್ಷಣ ನೀತಿಯಿಂದ ಭಾರತದ ಶಿಕ್ಷಣ ವ್ಯವಸ್ಥೆ ಗಟ್ಟಿಗೊಳ್ಳಲಿದ್ದು ಮುಂದಿನ ೧೦ ವರ್ಷದಲ್ಲಿ ದೇಶ ಶಿಕ್ಷಣ ಕ್ಷೇತ್ರದಲ್ಲಿ ನಂಬರ್ ಒನ್ ಸ್ಥಾನ ತಲುಪಲು ಪ್ರಮುಖ ಪಾತ್ರ ವಹಿಸಲಿದೆ ಆದ ರಿಂದ ಈ ಬಗ್ಗೆ ಶಿಕ್ಷಕರು ಗಂಭೀರ ವಾದ ಚಿಂತನೆ ಅಗತ್ಯವಿದೆ ಎಂದರು.

ಶಾಸಕ ಪ್ರೀತಂಗೌಡ ಮಾತನಾಡಿ,ಕಾರ್ಯಗಾರಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ವೃತ್ತಿಯನ್ನು ಉನ್ನತಿ ಕರಣ ಗೊಳಿಸುವಂತೆ ತಿಳಿಸಿದರು. ಶಿಕ್ಷಕರ ವೇತನ ಪರಿಷ್ಕರಣಿಯನ್ನು ಐದು ವರ್ಷದ ಒಳಗೆ ಮಾಡುವ ಮೂಲ ಕ ಬಿಜೆಪಿ ಸರ್ಕಾರ ಶಿಕ್ಷಕ ವೃತ್ತಿ ಬಾಂಧವರಿಗೆ ಅಭಯಹಸ್ತ ಚಾಚಿ ತು ಎರಡು ವರ್ಷ ಬೋನಸ್ ನೀಡಿದ ಸರ್ಕಾರ ನಮ್ಮದಾಗಿದ್ದು ೫೮ ವರ್ಷ ನಿವೃತ್ತಿ ವಯೋಮಿತಿ ಯನ್ನು ೬೦ ವರ್ಷಕ್ಕೆ ಏರಿಸಿದ ಕೀರ್ತಿ ಬಿಎಸ್ ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ಸಲ್ಲುತ್ತದೆ ಎಂದರು.

ಇಂದಿನ ಶಿಕ್ಷಣ ಪದ್ಧತಿಯು ಪ್ರತಿದಿನ ಅಪ್ಗ್ರೇಡ್ ಆಗುತ್ತಿದ್ದು ಇದಕ್ಕೆ ಸರಿಸಮವಾಗಿ ಶಿಕ್ಷಕರು ಕೂಡ ಉತ್ತಮ ವಿಚಾರಗಳನ್ನು ತಿಳಿಯುತ್ತಾ ವಿವಿಧ ವಿಷಯಗಳಲ್ಲಿ ಪರಿಣಿತಿ ಹೊಂದುವುದು ಅತ್ಯವಶ್ಯಕವಾಗಿದೆ. ಆದ್ದರಿಂದ ಕಾರ್ಯಗಾರಗಳಲ್ಲಿ ಶಿಕ್ಷಕರು ಪಾಲ್ಗೊಳ್ಳುವ ಮೂಲಕ ಅಪ್ ಗ್ರೇಡ್ ಆಗಬೇಕು ಎಂದು ಸಲಹೆ ನೀಡಿದರು.

ದೇಶ ಕಟ್ಟುವ ಕೆಲಸವನ್ನು ಮಾಡುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಶಿಕ್ಷಕ ಸಮುದಾಯ ಮಾನವ ಸಂಪನ್ಮೂಲ ವಿಭಾಗದಲ್ಲಿ ಬರುತ್ತದೆ ಸಮಾಜ ಸುಧಾರಣೆ ಮಾಡುವ ಪ್ರಮುಖ ಹುದ್ದೆಯಲ್ಲಿ ಶಿಕ್ಷಕರಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ ಎಸ್ ಷಡಕ್ಷರಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ ಎಸ್ ಪ್ರಕಾಶ್, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪನಿರ್ದೇಶಕಿ ಪುಷ್ಪಲತಾ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಈ. ಕೃಷ್ಣೇಗೌಡ , ಬಿ ಎನ್ ರಾಜಶೇಖರಪ್ಪ, ಕೆ.ಎಂ ಶ್ರೀನಿವಾಸ್, ಹಿರಿಯ ಉಪನ್ಯಾಸಕಿ ಬಿ ಎಂ ಗೀತಾ, ಇತರರೂ ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು