News Karnataka Kannada
Monday, May 06 2024
ಮಂಗಳೂರು

ಬಂಟ್ವಾಳ: ವಿದ್ಯುತ್ ಕೂಡ ಪ್ರಗತಿಯ ಸಂಕೇತ ಎಂದ ಶಾಸಕ ರಾಜೇಶ್ ನಾಯ್ಕ್

Mla Rajesh Naik said that electricity is also a sign of progress.
Photo Credit : By Author
ಬಂಟ್ವಾಳ: ವಿದ್ಯುತ್ ಕೂಡ ಪ್ರಗತಿಯ ಸಂಕೇತವಾಗಿದ್ದು, ಬಂಟ್ವಾಳ‌ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ  ಮೆಸ್ಕಾಂನಿಂದ ಹಲವು ಯೋಜನೆಗಳು ಜಾರಿಯಾಗಿ ಜನೋಪಯೋಗಿಯಾಗುತ್ತಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದ್ದಾರೆ.
ಮೆಸ್ಕಾಂ ನ ಬಂಟ್ವಾಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಜಾಮೀ ಕಿ ಅಮೃತ್ ಮಹೋತ್ಸವ ಹಿನ್ನೆಲೆಯಲ್ಲಿ ವಿದ್ಯುತ್‌ ಕ್ಷೇತ್ರದಲ್ಲಾದ ಸಾಧನೆಗಳನ್ನು ಪರಿಚಯಿಸುವ ಉಜ್ವಲ‌           ಭಾರತ-ಉಜ್ವಲ‌ಭವಿಷ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು‌ ಮಾತನಾಡಿದರು.
ಕಳೆದ ನಾಲ್ಕು ವರ್ಷದಲ್ಲಿ 12 ಕೋಟಿ ವೆಚ್ಚದಲ್ಲಿ ಗ್ಯಾಸ್ ಇನ್ಸುಲೇಟೆಡ್ ಸ್ಟೇಷನ್, ದೀನ್ ದಯಾಳ್ ಉಪಾಧ್ಯಾಯ ಅಂತ್ಯೋದಯ ಕಾರ್ಯಕ್ರಮಕ್ಕೆ 873 ಮಂದಿಗೆ ಸಂಪರ್ಕ, ಬೆಳಕು ಯೋಜನೆಯಡಿ ಹಲವು ಮನೆಗಳಿಗೆ ವಿದ್ಯುತ್‌ ಸಂಪರ್ಕ ಯೋಜನೆ ಮಾಡಲಾಗಿದೆ ಎಂದವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಮಾತನಾಡಿ, ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು. ಗ್ರಾಮದೊಳಗೆ ಕತ್ತಲಲ್ಲಿ ಇರುವ ವಿದ್ಯಾರ್ಥಿಗಳು ಇಲ್ಲದಂತೆ ನೋಡಬೇಕು. ನೀವು ಮಾಡುವ ಕೆಲಸ ಮಹತ್ವದ್ದು ಎಂದರು. ಆಜಾದಿ ಕಾ ಅಮೃತ್ ಮಹೋತ್ಸವ ದ ಅರ್ಥಪೂರ್ಣ ಆಚರಣೆ ಆಗಲು ಪ್ರತಿಯೊಂದು ಮನೆಗೆ ವಿದ್ಯುದ್ದೀಕರಣ ಆಗಬೇಕು ಎಂದರು.
ಮೆಸ್ಕಾಂ ವ್ಯವಸ್ಥಾಪಕ ಪ್ರಶಾಂತ್ ಕುಮಾರ್ ಮಿಶ್ರಾ, ದ.ಕ. ಜಿಪಂ ಸಿಇಒ ಕುಮಾರ್, ಮೆಸ್ಕಾಂ ತಾಂತ್ರಿಕ ನಿರ್ದೇಶಕಿ ಪದ್ಮಾವತಿ ಡಿ, ನೋಡಲ್ ಆಫೀಸರ್ ಚಿತ್ತರಂಜನ್ ಕುಮಾರ್, ಬಂಟ್ವಾಳ ತಹಸೀಲ್ದಾರ್ ಡಾ.ಸ್ಮಿತಾ ರಾಮು ಉಪಸ್ಥಿತರಿದ್ದರು, ಅಧೀಕ್ಷಕ ಇಂಜಿನಿಯರ್ ಕೃಷ್ಣರಾಜ್‌ ಸ್ವಾಗತಿಸಿದರು.
ಮೂಡನಡುಗೋಡು ಗ್ರಾಮದ ಪಾಸ್ಕಲ್ ಡಿಸೋಜ, ವಿಠಲ ಬಾಳ್ತಿಲ, ಮಾಣಿಲ ಗ್ರಾಮದ ಕೃಷ್ಣ, ಅನಂತಾಡಿ ಗ್ರಾಮದ ಗಣೇಶ್, ಕನ್ಯಾನ ಗ್ರಾಮದ ಹರೀಶ್ ಅನಿಸಿಕೆ ವ್ಯಕ್ತಪಡಿಸಿದರು. ಬಿ. ರಾಮಚಂದ್ರ ರಾವ್ ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
153
Mounesh V

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು