ಹಾಸನ: ಯಾವ ಪರವಾನಿಗೆ ಪಡೆಯದೇ ಅಕ್ರಮವಾಗಿ ದನದ ಮಾಂಸವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ಪೊಲೀಸರು ಹಾಗೂ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಗೋ ಮಾಂಸವನ್ನು ವಶಪಡಿಸಿಕೊಂಡು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿದ ಘಟನೆ ಭಾನುವಾರ ನಡೆದಿದೆ.
ಸಂತೇಪೇಟೆ ಸರ್ಕಲ್ನಲ್ಲಿ, ಟೌನ್ ರೌಂಡ್ ನಲಿರುವಾಗ ಬಂದ ಮಾಹಿತಿ ಆದಾರಿಸಿ ನಗರ ಪೊಲೀಸ್ ಠಾಣೆ ಪಿಐ ರೇವಣ್ಣ ನೇತೃತ್ವದ ಪೊಲೀಸ್ ಸಿಬ್ಬಂದಿಯವರು ಸ್ಥಳಕ್ಕೆ ಹೋದಾಗ ನಗರದ ಚಿಪ್ಪಿನಕಟ್ಟೆ ವಾಸಿ ಸಮಿಹುಲಾ ಮತ್ತು ಪೆನ್ಷನ್ ಮೊಹಲಾ, ವಾಸಿ ಜಾಫರ್ ಷರೀಪ್ ರವರು ಶ್ರೀನಗರದ ತಮ್ಮ ಶೆಡ್ಡಿನಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ದನದ ಮಾಂಸ, ದನದ ತಲೆಯ ಕೊಂಬು ಮತ್ತು ಮೂಳೆಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದು ತಿಳಿದು ಬಂದಿತು. ಈ ವೇಳೆ ಕೆಲ ಸಮಯ ವಿಚಾರಣೆ ನಡೆಸಿ ಅವರ ವಿರುದ್ಧ ಪ್ರಕರಣ ದಾಖಲಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಆರೋಗ್ಯ ನಿರೀಕ್ಷಕರಾದ ಮಂಜುನಾಥ್, ಪ್ರಸಾದ್ ಸ್ಥಳದಲ್ಲಿದ್ದು, ಗೋವು ಮಾಂಸ ಮಾರಾಟ ಮಾಡದಂತೆ ನಿಷೇಧ ಇದ್ದರೂ ಕೂಡ ಯಾವ ಪರವಾನಿಗೆ ಇಲ್ಲದೇ ಮಾರಾಟ ಮಾಡುತ್ತಿರುವುದು ಅಪರಾಧ ಎಂದು ಪರಿಗಣಿಸಿ ಅವರ ವಿರುದ್ಧ ಕ್ರಮಕೈಗೊಂಡಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಯ ಮಾತುಗಳು ಕೇಳಿ ಬಂದಿದೆ.