News Karnataka Kannada
Wednesday, May 01 2024
ಹಾಸನ

ಹಾಸನ: ಪಕ್ಷ ಅಧಿಕೃತವಾಗಿ ಟಿಕೆಟ್ ಘೋಷಿಸುವವರೆಗೂ ಯಾವುದೂ ಗ್ಯಾರಂಟಿಯಲ್ಲ- ಪ್ರೀತಂ ಗೌಡ

Nothing is guaranteed till the party officially announces the ticket: Preetham Gowda
Photo Credit : News Kannada

ಹಾಸನ: ಪಕ್ಷ ಅಧಿಕೃತವಾಗಿ ಟಿಕೆಟ್ ಘೋಷಿಸುವವರೆಗೂ ಯಾವುದೂ ಗ್ಯಾರಂಟಿಯಲ್ಲ ಎಂಬ ಶಾಸಕ ಪ್ರೀತಂ ಜೆ ಗೌಡರ ಮಾತು ಸಾರ್ವಜನಿಕ ವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ.

ಪಕ್ಷ ಅಧಿಕೃತವಾಗಿ ಚುನಾವಣೆ ಅಭ್ಯರ್ಥಿ ಘೋಷಿಸಬೇಕಿದೆ. ಪಕ್ಷದ ಹಿರಿಯ ನಾಯಕರೇನಾದ್ರೂ ಚನ್ನರಾಯ ಪಟ್ಟಣ ಅಥವಾ ಹೊಳೆನರಸೀಪರ ಕ್ಷೇತ್ರದಿಂದ ಸ್ಫರ್ದಿಸಲು ಹೇಳಿದ್ರೆ ನಾನು ಹಾಗೆಯೇ ಮಾಡಬೇಕಾಗುತ್ತದೆ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಹಾಸನದಲ್ಲಿ ಬೇರೆವ್ರಿಗೆ ಟಿಕೇಟ್ ನೀಡಿ ನನ್ನನ್ನು ಮತ್ತೊಂದು ಕ್ಷೇತ್ರದ ಅಭ್ಯರ್ಥಿಯನ್ನಾಗಿಸಿದ್ರೂ ಪಕ್ಷದ ಆದೇಶವನ್ನ ನಾನು ಪಾಲಿಸಬೇ ಕಾಗುತ್ತದೆ. ಮತ್ತೊಮ್ಮೆ ಟಿಕೆಟ್ ಸಿಗುವ ನಂಬಿಕೆಯಿದೆಯಾದ್ರೂ ಟಿಕೆಟ್ ಘೋಷಣೆಯಾಗೋವರೆಗೂ ಕಾದ ನೋಡಬೇಕಿದೆ.

ಹಾಸನದ ೭ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ೪ಕ್ಷೇತ್ರಗಳನ್ನು ಗೆಲ್ಲುವಂತೆ ಹಿರಿಯ ರಾಷ್ಟ್ರೀಯ ನಾಯಕರ ಸೂಚನೆಯಿದೆ ಅಂತೆಯೇ ಸ್ಥಳೀಯ ನಾಯಕರನ್ನೆಲ್ಲ ಒಟ್ಟು ಸೇರಿಸಿ ಪಕ್ಷದ ಗೆಲುವಿಗಾಗಿ ಶ್ರಮಿಸಲಾಗುವುದು. ಚುನಾವಣೆವರೆಗೂ ಬೇರೆವ್ರು ಗೆಲ್ಲುವ ಲೆಕ್ಕಾಚಾರ ಇರತ್ತೆ ಆದ್ರೆ ನಾನು ಚುನಾವಣಾ ಮತ ಎಣಿಕೆ ದಿನ ಗೆಲ್ಲುವ ನಾಯಕನಾಗಲು ಬಯಸುತ್ತೇನೆ. ನನಗೆ ಜನರ ತೀರ್ಮಾನದ ಮೇಲೆ ನಂಬಿಕೆಯಿದೆ. ಹಾಸನ ಜಿಲ್ಲೆಯಲ್ಲಿ ೪ಕ್ಷೇತ್ರಗಳನ್ನಂತೂ ಈ ಬಾರಿ ಬಿಜೆಪಿ ಗೆಲ್ಲುವುದು ನೂರಕ್ಕೇ ನೂರರಷ್ಟು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು