ಹಾಸನ: ನಮ್ಮ ಪಕ್ಷ ತೀರ್ಮಾನಿಸಿದ್ರೆ ಹಾಸನ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಸಿದ್ಧನಿದ್ದೇನೆ. ೫೦ ಸಾವಿರ ಅಂತರದಲ್ಲಿ ಗೆಲುವು ಪಡೆಯುವುದಾಗಿ ಹೇಳಿಕೆ ನೀಡಿರುವ ಶಾಸಕ ಪ್ರೀತಂ ಗೌಡರ ಸವಾಲನ್ನು ಸ್ವೀಕರಿಸುತ್ತೇನೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹೇಳಿಕೆ ನೀಡಿದ್ದಾರೆ.
ನಗರದ ಸಂಸದರ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹಾಸನ ವಿಧಾನಸಭೆ ಕ್ಷೇತ್ರದ ಶಾಸಕರು ನನಗೆ ಚಾಲೆಂಜ್ ಮಾಡಿದ್ದು, ನನ್ನನು ೫೦ ಸಾವಿರ ಮತಗಳ ಅಂತರದಿಂದ ಸೋಲಿಸುತ್ತೆನೆ ಎಂದಿದ್ದಾರೆ. ಪಕ್ಷ ಹೇಳಿದ್ರೆ ನಾನು ಹಾಸನ ಕ್ಷೇತ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೆನೆ ಎಂದರು.
ಪಕ್ಷ ತೀರ್ಮಾನದ ನಂತರ ಅರಕಲಗೂಡು ತಾಲ್ಲೂಕಿನಲ್ಲಿ ಸಭೆ ಮಾಡಿ ತಿರ್ಮಾನದ ಮೂಲಕ ಕ್ರಮ ಕೈಗೊಳ್ಳುತ್ತೇವೆ. ಮಾಜಿ ಸಚಿವ ಎ. ಮಂಜು ಸೇರ್ಪಡೆ ಬಗ್ಗೆ ನನಗೆ ಗೊತ್ತಿಲ್ಲ. ಎ. ಮಂಜು ಸೇರ್ಪಡೆ ಬಗ್ಗೆ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಹೆಚ್.ಡಿ. ದೇವೇಗೌಡರ, ಮಾಜಿ ಸಿಎಂ. ಹೆಚ್.ಡಿ. ಕುಮಾರಸ್ವಾಮಿ ಕುರಿತು ತಿರ್ಮಾನ ಮಾಡುತ್ತಾರೆ ಎಂದರು.
ಡಿ.ಕೆ. ಸುರೇಶ್ ಹೊಳೆನರಸೀ ಪುರ ಪ್ರವಾಸದ ಮಾಡಿದ ಬಗ್ಗೆ ಪ್ರತಿಕ್ರಿಯೆ ಕೊಡುವುದಿಲ್ಲ. ಒಳ್ಳೆಯದಾದರೆ ಪಕ್ಷ ಬಿಡುವರು ಪಕ್ಷ ಬಿಡಲಿ. ಶಿವಲಿಂಗೇಗೌಡ ಕಾಂಗ್ರೆಸ್ ಸೆರ್ಪಡೆ ಬಗ್ಗೆ ನನಗೆ ಗೊತ್ತಿಲ್ಲ. ಎ. ಮಂಜು, ಪಕ್ಷಕ್ಕೆ ಬರುತ್ತಾರೆ ಅಂತ ಮಾತ್ರ ಹೇಳಿದ್ದಾರೆ. ಇವರೆ ಅರಕಲಗೂಡಿಗೆ ಅಭ್ಯರ್ಥಿ ಅಂತ ಹೇಳಿಲ್ಲ. ಈ ಬಾರಿ ೭ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಯನ್ನು ಪಾರ್ಲಿಮೆಂಟ್ ಬೋರ್ಡನಲ್ಲಿ ತೀರ್ಮಾನ ಮಾಡುತ್ತಾರೆ ಎಂದರು.
ಇದೆ ವೇಳೆ ಜೆಡಿಎಸ್ ಮುಖಂಡರಾದ ಭವಾನಿ ರೇವಣ್ಣ ಕೂಡ ಆಗಮಿಸಿ ಕಾರ್ಯಕರ್ತ ರೊಂದಿಗೆ ಚರ್ಚೆ ಮಾಡಿದರು. ಕೊಬ್ಬರಿ ಖರೀದಿ ದರ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಕೊಬ್ಬರಿ ಬೆಂಬಲ ಬೆಲೆ ನಿಗದಿ ಮಾಡಿ, ಕೂಡಲೇ ಕೊಬ್ಬರಿ ಖರೀದಿ ಕೇಂದ್ರ ತೆರೆದು ಕನಿಷ್ಠ ೧೫ ಸಾವಿರ ಬೆಂಬಲ ನೀಡಬೇಕು. ಮಾಜಿ ಪ್ರಧಾನಿ ದೇವೆಗೌಡ ಅವರು ಕೊಬ್ಬರಿ ಖರೀದಿ ಕೇಂದ್ರ ತೆರೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ರಾಗಿ ಭತ್ತ ಖರೀದಿ ಕೇಂದ್ರದಲ್ಲಿ ಕೇವಲ ರಾಗಿ ಖರೀದಿ ಕೇಂದ್ರ ತೆಗೆದಿದ್ದಾರೆ. ಭತ್ತ ಖರೀದಿ ಕೇಂದ್ರ ತೆಗೆಯಬೇಕೆಂದು ಆಗ್ರಹಿಸಿದರು. ಮಳೆಹಾನಿಗೆ ಒಳಗಾಗಿರುವ ಮನೆ, ರಸ್ತೆ ಸರಿಪಡಿಸಿಲ್ಲ. ಒಂದು ಸಾವಿರ ಮನೆಗಳಿಗೆ ಅನುದಾನ ಬಿಡುಗಡೆ ಮಾಡಬೇಕು. ೧೩೦ ಕೋಟಿ ರೂ. ಅನು ದಾನ ತಂದಿದ್ದು, ಇದುವರೆಗೂ ಯಾವುದೇ ಕಾರ್ಯಕ್ರಮ ಆಗಿಲ್ಲ. ಕನಿಷ್ಠ ೫೦೦ ಕೋಟಿ ರೂ. ಬಿಡುಗಡೆ ಮಾಡ ಬೇಕೆಂದು ಮನವಿ ಮಾಡಲಾಗಿದೆ ಎಂದು ತಿಳಿಸಿದರು.