ಹಾಸನ: ೨೦೨೩-೨೦೨೮ ೫ ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಹಾಸನ ಪ್ರಾಥಮಿಕ ಶಾಲಾಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ರಮೇಶ್ ಡಿ ಹಾಗೂ ಉಪಾಧ್ಯಕ್ಷರಾಗಿ ಚನ್ನರಾಯಪಟ್ಟಣ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಹಿರಿಯಣ್ಣ ಬಿ.ಎಲ್ ಅವಿರೋಧವಾಗಿ ಆಯ್ಕೆಯಾದರು.
ನಿರ್ದೇಶಕರುಗಳಾಗಿ ಪೂರ್ಣೇಶ್ ಬೇಲೂರು, ತಮ್ಮಣ್ಣಶೆಟ್ಟಿ ಸಕಲೇಶಪುರ, ಶ್ರೀನಿವಾಸ್ ಅಲೂರು, ಸತೀಶ್,ಅರಕಲಗೂಡು, ಯತೀಶ್ ಹೋಳೆನರಸಿಪುರ, ದಿನೇಶ್ ಚನ್ನರಾಯಪಟ್ಟಣ, ಲೋಹಿತ್ಗೌಡ ಹಾಸನ, ರಾಜು ಹಾಸನ, ರೇವಣ್ಣ ಹಾಸನ, ರಾಘವೇಂದ್ರ ಬೇಲೂರು ಧರ್ಮಪ್ಪನಾಯಕ ಹಾಸನ, ಶ್ರೀಮತಿ ಶುಭಮಂಗಳ ಹಾಸನ, ಮೀನಾಕ್ಷಿ ಹಾಸನ ಇವರುಗಳು ನಿರ್ದೇಶಕರುಗಲಕಾಗಿ ಆಯ್ಕೆಯಾದರು.
ಸೊಸೈಟಿಯು ಈಗಾಗಲೇ ೧೬ಲಕ್ಷ ಠೇವಣಿ ಸಂಗ್ರಹಿಸಿದ್ದು ೭೬೦ ಷೇರುದಾರರನ್ನು ಒಳಗೊಂಡಿದ್ದು ಜಿಲ್ಲೆಯ ಶಿಕ್ಷಕರ ಒಳಿತಿಗಾಗಿ ಸೊಸೈಟಿ ಸ್ಥಾಪಿಸಿದ್ದು ಇದರ ಸೌಲಭ್ಯಗಳನ್ನು ಜಿಲ್ಲೆಯ ಶಿಕ್ಷಕರುಗಳು ಪಡೆದುಕೊಳ್ಳಬೇಕೆಂದು ಸೊಸೈಟಿ ವಿನಂತಿಸಿದೆ.