ಹಾಸನ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಸಿ ಕಛೇರಿ ಮುಂದೆ ಸಿಐಟಿಯು ನೇತೃತ್ವದಲ್ಲಿ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಪರಿಷ್ಕೃತ ಆಯ್ಕೆಯ ಮಾರ್ಗಸೂಚಿ ಆದೇಶದ ತಿದ್ದುಪಡಿಗಾಗಿ ಮತ್ತು ವಯೋಮಿತಿಯ ಆಧಾರದಲ್ಲಿ ಮುಂಬಡ್ತಿ ನೀಡಬೇಕು. ೩-೧೨-೨೦೨೨ ರ ಇಲಾಖೆಯ ನಿರ್ದೇಶನದ ಪ್ರಕಾರ ಪರಿಷ್ಕೃತ ಆಯ್ಕೆ ಮಾರ್ಗ ಸೂಚಿಗಳನ್ನು ಮಾಡಿರುವುದರಿಂದ ಈಗಾಗಲೇ ಇರುವ ಇಲಾಖೆಯ ೨೩-೯-೨೦೧೭ ಮತ್ತು ೧೯-೧-೨೦೧೯ ರ ತಿದ್ದುಪಡಿ ಮಾರ್ಗಸೂಚಿಗಳಲ್ಲಿ ಎಸ್.ಎಸ್.ಎಲ್.ಸಿ. ಪಾಸಾದ ಮತ್ತು ಅನುಭವ ಇರುವ ಅಂಗನವಾಡಿ ಸಹಾಯಕಿ ಮತ್ತು ಮಿನಿ ಅಂಗನವಾಡಿ ಮುಂಬಡ್ತಿಗೆ ಅನ್ವಯವಾಗುತ್ತಿದೆ.
ಪರಿಷ್ಕೃತ ಆದೇಶವನ್ನು ಅನ್ವಯಿಸಬಾರದು ಎಂದು ಇಲಾಖೆಗೆ ೧೪-೧೨- ೨೦೨೨ ರಂದು ಮನವಿ ಕೊಟ್ಟು ವಿನಂತಿಸಿದ್ದರು ಇಲಾಖೆ ಪರಿಗಣಿಸಿಲ್ಲ. ಇದರಿಂದ ಸಾವಿರಾರು ಸಹಾಯಕಿಯರಿಗೆ ಮತ್ತು ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ಅನ್ವಯವಾಗುತ್ತಿದೆ. ಆದ್ದರಿಂದ ಪರಿಷ್ಕೃತ ಆದೇಶವನ್ನು ತಿದ್ದುಪಡಿ ಮಾಡಬೇಕು. ಮತ್ತು ವಯೊಮಿತಿಯ ಆಧಾರದಲ್ಲಿ ಮುಂಬಡ್ತಿ ನೀಡಬೇಕು ಎಂದು ಆಗ್ರಹಿಸಿದರು. ೨೦೨೨-ಆಗಸ್ಟ್-೧ ರ ಕೇಂದ್ರ ಸರ್ಕಾರದ ಸಕ್ಷಮ್ ಅಂಗನವಾಡಿ ಕೇಂದ್ರಗಳ ಮಾರ್ಗಸೂಚಿಯನ್ನು ನೀಡದೆ, ಈ ಮಾರ್ಗ ಸೂಚಿಗಳನ್ನು ಭಾರತದ ಇತರೆ ಯಾವ ರಾಜ್ಯಗಳಲ್ಲಿಯೂ ಹೊಸ ಮಾರ್ಗಸೂಚಿಗಳನ್ನು ಅಳವಡಿಸಿಲ್ಲ ಆದರೆ ನಮ್ಮ ಸರ್ಕಾರ ಇದರ ಸಾಧಕ-ಬಾಧಕಗಳನ್ನು ಪರಿಶೀಲನೆ ಮಾಡದೇ ಕೂಡಲೇ ಬದಲಾಯಿಸಿದೆ. ಮಾತ್ರವಲ್ಲದೆ ಬೆಳಗಾವಿ, ಹಾಸನ, ತುಮಕೂರು, ಕೋಲಾರ ಮತ್ತು ಬಿಜಾಪುರ ಜಿಲ್ಲೆಗಳಲ್ಲಿ ಅರ್ಹತೆಯಿರುವ ಸಹಾಯಕಿಯರಿಗೆ ಮತ್ತು ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮುಂಬಡ್ತಿ ಕೊಟ್ಟಿಲ್ಲ ಆದ್ದರಿಂದ ಈ ಆದೇಶವನ್ನು ಬದಲಾಯಿಸಿ ವಯೋಮಿತಿಯ ಆಧಾರದ ಮೇಲೆ ಮುಂಬಡ್ತಿ ನೀಡಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದರು.
ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಂ.ಬಿ. ಪುಷ್ಪ, ಖಜಾಂಚಿ ಜಿ.ಪಿ. ಶೈಲಜಾ, ಪ್ರಧಾನ ಕಾರ್ಯದರ್ಶಿ ಎಂ. ಮಂಜೂಳಾ, ಸಿಐಟಿಯು ಮುಖಂಡರಾದ ಧರ್ಮೇಶ್, ಅರವಿಂದ್ ಇತರರು ಉಪಸ್ಥಿತರಿದ್ದರು.