ಕುಂದಾಪುರ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮುದೂರು ಗ್ರಾಮದ ಜನರಿಗೆ ಸಂಕಷ್ಟ ಸಮಯದಲ್ಲಿ ಅನುಕೂಲವಾಗುವ ದೃಷ್ಟಿಯಿಂದ ಮುದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ಸಂಚಾರಿ ಶವ ದಹನ ಯಂತ್ರವನ್ನು ಕೊಡುಗೆ ಆಗಿ ನೀಡಿದರು.
ಕೇರಳ ರಾಜ್ಯದಲ್ಲಿ ಚಾಲ್ತಿಯಲ್ಲಿರುವ ಸಂಚಾರಿ ಶವ ದಹನ ಯಂತ್ರವನ್ನು ಕರ್ನಾಟಕದಲ್ಲಿ ಇದೆ ಮೊದಲ ಬಾರಿ ಎನ್ನುವಂತೆ ಮುದೂರು ಗ್ರಾಮದಲ್ಲಿ ಬಳಸಿಕೊಳ್ಳಲಾಗಿದೆ.ವಿದ್ಯುತ್ ಮತ್ತು ಗ್ಯಾಸ್ ಸಿಲಿಂಡರ್ ಮೂಲಕ ಯಂತ್ರ ಚಲನೆ ಗೊಳ್ಳುತ್ತದೆ.
ಸಾರ್ವಜನಿಕರಿಗೆ ಸಂಪೂರ್ಣ ಉಚಿತವಾಗಿ ದೊರಕಬಲ್ಲ ಯೋಜನೆಯನ್ನು ಗ್ರಾಮಕ್ಕೆ ಕೊಡುಗೆ ಆಗಿ ನೀಡಿದ ಮುದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಸಮಾಜಮುಖಿ ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ.