ಹಾಸನ: ನಗರಕ್ಕೆ ಹೊಂದಿ ಕೊಂಡಂತಿರುವ ಚಿಕ್ಕಹೊನ್ನೆಹಳ್ಳಿ ಕೆರೆಯಲ್ಲಿ ಮೀನುಗಳ ಮಾರಣ ಹೋಮ ನಡೆದಿದ್ದು, ಯಾರೋ ದುಷ್ಕರ್ಮಿಗಳು ನೀರಿಗೆ ವಿಷ ಚೆಲ್ಲಿರುವುದಾಗಿ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
ನಗರದ ರಿಂಗ್ ರಸ್ತೆ, ಪಶುವೈದ್ಯಕೀಯ ಕಾಲೇಜು ಹತ್ತಿರ ಇರುವ ಮೂರು ಕೆರೆಗಳಿಗೆ 5 ವರ್ಷದ ಗುತ್ತಿಗೆ ಆಧಾರದ ಮೇಲೆ ಗ್ರಾಮದ ನಾಲ್ಕೈದು ಜನರು ಪಡೆದು ಒಂದು ಲಕ್ಷಕ್ಕೂ ಹೆಚ್ಚಿನ ಮೀನಿನ ಮರಿಗಳನ್ನುಕಳೆದ ವರ್ಷ ಆಗಷ್ಟಗ ತಿಂಗಳಲ್ಲೆ ಬಿಟ್ಟಿದ್ದು, ಕಳೆದ ಎರಡು ದಿನಗಳಿಂದ ಮೀನುಗಳು ಸತ್ತು ಮೇಲೆ ತೇಲುತ್ತಿರುವುದು ಕಂಡು ಬಂದಿದೆ. ಈ ಕೆರೆಯನ್ನು ಹಸಿರು ಭೂಮಿ ಪ್ರತಿಷ್ಠಾನದವತಿಯಿಂದ ಸ್ವಚ್ಛಗೊಳಿಸಿ ಕೆರೆ ಅಭಿವೃದ್ಧಿ ಮಾಡಲಾಗಿತ್ತು. ನಂತರದಲ್ಲಿ ಈ ಕೆರೆಗೆ ಮೀನು ಬಿಡಲು ಚಿಕ್ಕಹೊನ್ನೆನಹಳ್ಳಿ ಗ್ರಾಮದ ಕೆಲವರು ಮುಂದೆ ಬಂದು ಗ್ರಾಮಕ್ಕೆ ಹಣ ಕೊಟ್ಟು ಮರಿ ಬಿಡಲಾಗಿತ್ತು.
ಆದರೆ ಈಗ ಮೀನುಗಳು ಸಾವನಪ್ಪುತ್ತಿರುವುದು ಆತಂಕಸೃಷ್ಠಿ ಮಾಡಿದೆ. ಏನಾದರೂ ಗೋವುಗಳು ಈ ಕೆರೆ ನೀರನ್ನು ಕುಡಿದರೇ ಏನಾ ದರೂ ಅನಾಹುತ ಆಗಬಹುದು ಎಂಬುದು ಗ್ರಾಮಸ್ಥರ ಆತಂಕವಾಗಿದೆ. ಈ ಕೆರೆಗೆ ವಿಷ ಬೆರೆಸಿದವರನು ಪತ್ತೆ ಹಚ್ಚಿ ಅವರಿಗೆ ಶಿಕ್ಷೆ ನೀಡಬೇಕೆನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.ಗ್ರಾಮದ ನಾಗೇಶ್, ರಮೇಶ್ ಮತ್ತು ಶಿವಕುಮಾರು ಮಾಧ್ಯಮದೊಂದಿಗೆ ಮಾತನಾಡಿ, ಚಿಕ್ಕಹೊನ್ನೆನಹಳ್ಳಿ ಕೆರೆಗೆ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಮೀನಿನ ಮರಿಗಳನ ಈ ಕೆರೆಗೆ ಬಿಡಲಾಗಿದ್ದು, ನಮಗೆ ಈ ಕೆರೆಯನ್ನು 5 ವರ್ಷಕ್ಕೆ ಗುತ್ತಿಗೆ ನೀಡಿದ್ದು, ಈಗ ಕಳೆದ ಎರಡು ದಿನಗಳಿಂದ ಮೀನುಗಳು ನೀರಿನಲ್ಲೆ ಸತ್ತು ಮೇಲೆ ತೇಲಿ ಬರುತ್ತಿದೆ.
ಈ ಕೆರೆಗೆ ಯಾರೋ ಕಿರಾತಕರು ವಿಷವನ್ನು ಹಾಕಿರುವ ಅನುಮಾನವಿದ್ದು. ಈಗಾಗಲೇ ಸಾವನಪ್ಪಿರುವ ಮೀನಿನ ಮರಿಗಳನ್ನು ಲ್ಯಾಬ್ ಗೆ ಕಳುಹಿಸಲಾಗಿದೆ ಎಂದರು. ಯಾರು ವಿಷ ಪಾಶಣ ಹಾಕಿದ್ದಾರೆ ಎಂಬುದು ತಿಳಿಯುತ್ತಿಲ್ಲ.
ಯಾರೋ ಧ್ವೇಷದ ಹಿನ್ನಲೆಯಲ್ಲಿ ಈ ರೀತಿ ಕೆರೆಗೆ ವಿಷವನ್ನು ಹಾಕಿರುವ ಸಂಶಯವಿದೆ ಎಂದು ಅನುಮಾನ ವ್ಯಕ್ತಪಡಿಸಿದರು.