ಹಾಸನ: ಹಾಸನ ಸರ್ಕಾರಿ ಆಸ್ಪತ್ರೆಯ ನವಜಾತ ಶಿಶುಗಳ ಐಸಿಯು ಘಟಕದಲ್ಲಿ ವಿದ್ಯುತ್ ಅವಘಡ ಸಂಭವಿಸಿದೆ. ಸಿಬ್ಬಂದಿಗಳು ಕಿಟಕಿ ಗಾಜುಗಳನ್ನು ಹೊಡೆದು ಮಕ್ಕಳ ರಕ್ಷಣೆ ಮಾಡಿದ್ದಾರೆ. ವೈದ್ಯರು ಹಾಗೂ ನರ್ಸ್ ಗಳ ಸಮಯ ಪ್ರಜ್ಞೆಗೆ ಸಾರ್ವಜನಿಕರಿಂದ ಶ್ಲಾಘನೆ ದೊರಕಿದೆ.
ಈ ಸಂದರ್ಭದಲ್ಲಿ ಡಾ. ಮನುಪ್ರಕಾಶ್ , ಡಾ.ದೀಪ್ತಿ, ಡಾ.ಅರ್ಚನಾ, ಡಾ.ಶಶಿಧರ್ ಹಾಗೂ ನರ್ಸ್ ಗಳಾದ ಹರಿಣಾಕ್ಷಿ ವೈ.ಆರ್, ಪ್ರಮೀಳ, ರೂಪ ಪುಷ್ಪ, ಪಾರ್ವತಮ್ಮ, ಭವನಿ, ಪೂಜಾ, ರೇಬಾಕಾ, ಚನ್ನಮ್ಮ, ಮೊಹನ್ ಕುಮಾರಿ ಮುಂತಾದವರು ಇದ್ದರು.