ಬೇಲೂರು: ರಾಷ್ಟ್ರ ಮಟ್ಟದ ಮೂರು ದಿನಗಳ ಹೊನಲು ಬೆಳಕಿನ ಕಬ್ಬಡಿ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಬೇಲೂರು ಕಬಡ್ಡಿ ಸ್ಪೋರ್ಟ್ಸ್ ಕ್ಲಬ್ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ಆಯೋಜಿಸಿದ್ದ ಹೊನಲು ಬೆಳಕಿನ ರಾಷ್ಟ್ರ ಮಟ್ಟದ ಪುರುಷರ ಹಾಗೂ ಮಹಿಳೆಯರ ಕಬಡ್ಡಿ ಮೊದಲ ದಿನದ ತಾ. ಮಟ್ಟದ ಪಂದ್ಯಾವಳಿ ಯನ್ನು ಹೆಚ್ ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗರಾಜ್ , ಇತರರು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾ ಟಿಸಿದರು.
ಕಬಡ್ಡಿ ಪಂದ್ಯಾವಳಿ ಉದ್ಘಾ ಟಿಸಿ ಮಾತನಾಡಿದ ಎಂ.ಎ.ನಾಗರಾಜ್ ಕೇವಲ ಟಿವಿ ಹಾಗೂ ಹೊರ ರಾಜ್ಯದಲ್ಲಿ ಮಾತ್ರ ಒಳಾಂಗಣ ಕ್ರೀಡಾಂಗಣದಲ್ಲಿ ಇಂತಹ ಕ್ರೀಡಾಕೂಟ ನಡೆಯುತ್ತಿತ್ತು ಆದರೆ ಇಂದು ಬೇಲೂರಿನಲ್ಲಿ ಇಂತಹ ಹಬ್ಬದ ವಾತಾವರಣ ನಿರ್ಮಿಸಿ ಹೀಗೂ ಪಂದ್ಯಾವಳಿ ಮಾಡಬಹುದು ಎಂಬುದನ್ನು ಮಾಡಿ ತೋರಿಸಿದ್ದಾರೆ. ಇಲ್ಲಿಯ ಆಯೋಜಕರು ಇಂತಹ ಕ್ರೀಡಾ ಕೂಟಗಳು ಇನ್ನೂ ಹೆಚ್ಚಿನದಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಬೇಲೂರಿನ ಕ್ರೀಡಾಪಟು ಗಳು ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀ ಯ ಪಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ಕೀರ್ತಿ ಪತಾಕೆಯನ್ನು ಹಾರಿಸುವ ಕೆಲಸವನ್ನು ಮಾಡಲಿ. ರಾಷ್ಟ್ರೀಯ ಕ್ರೀಡಾ ಪಟುಗಳೊಂ ದಿಗೆ ಸ್ಥಳೀಯ ತಂಡದ ಆಟ ಗಾರರು ಭಾಗವಹಿಸಿ ಹೆಚ್ವಿನ ಅನು ಭವ ಪಡೆದು ಅವರಂತೆ ರಾಷ್ಟ್ರ, ಅಂತ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಬೇಕು ಎಂದರು.
ಹಿರಿಯ ಕ್ರೀಡಾಪಟು ಸೌಮ್ಯ ಆನಂದ್ ಮಾತನಾಡಿ, ಕಬಡ್ಡಿ ಪಂದ್ಯದಲ್ಲೂ ಯಾರಿಗೂ ಕಮ್ಮಿ ಇಲ್ಲದಂತೆ ಕ್ರೀಡೆಯಲ್ಲಿ ಭಾಗ ವಹಿಸಿ ಮಹಿಳೆಯರು ಸಾಧನೆ ಮಾಡುತಿದ್ದಾರೆ.ಅದರಲ್ಲೂ ಬೇಲೂರಿನಲ್ಲಿ ಇಂತಹ ಕಬಡ್ಡಿ ಪಂದ್ಯಾವಳಿಯನ್ನು ಬೇಲೂರು ಕಬಡ್ಡಿ ಸ್ಪೋರ್ಟ್ಸ್ ಕ್ಲಬ್ ಪದಾದಿ ಕಾರಿಗಳು ಪಂದ್ಯಾವಳಿ ಆಯೋ ಜಿಸಿ ಪ್ರೋತ್ಸಾಹಿಸು ತ್ತಿರುವುದು ಶ್ಲಾಘನೀಯವಾಗಿದೆ ಎಂದರು.