News Karnataka Kannada
Monday, April 29 2024
ಹಾಸನ

ಕೊಣನೂರು: ಹಸು ಕೊಂದ ಚಿರತೆ ಬೋನಿಗೆ!

Konanur: Leopard kills cow
Photo Credit : News Kannada

ಕೊಣನೂರು: ಸಮೀಪದ ಕೆಸವತ್ತೂರು ಸಮೀಪ ಶುಕ್ರವಾರ ರಾತ್ರಿ ಗಂಡು ಚಿರತೆ ಬೋನಿಗೆ ಬಿದ್ದಿದೆ. ಗುರುವಾರ ರಾತ್ರಿ ಕೆಸವತ್ತೂರಿನ ಪುಟ್ಟೇಗೌಡ ರ ಕೊಟ್ಟಿಗೆಗೆ ನುಗ್ಗಿದ ಚಿರತೆಯು ಕಟ್ಟಿದ್ದ ಹಸುವಿನ ಹೊಟ್ಟೆಯ ಭಾಗ ತಿಂದು ಚಿರತೆಯು ಕೊಂದು ಸ್ಥಳಿಯರಲ್ಲಿ ಭಯ ಹುಟ್ಟಿಸಿತ್ತು.

ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಹಿಡಿಯಲು ಕಾರ್ಯೋನ್ಮು ಖಕರಾಗಿ ಶುಕ್ರವಾರ ಮಧ್ಯಾಹ್ನ ಕೆಸವತ್ತೂರು ಮತ್ತು ಪೆಮ್ಮನ ಹಳ್ಳಿಗಳ ನಡುವಿನ ಸ್ಥಳದಲ್ಲಿ ಸತ್ತಿದ್ದ ಹಸುವನ್ನು ಬೋನಿ ನೊಟಗಿಟ್ಟು ಪ್ರಯ್ನತಿಸಿದರು.

ಶುಕ್ರವಾರ ರಾತ್ರಿ ಹಸುವನ್ನು ತಿನ್ನಲು ಬೋನಿನೊಳಗೆ ಪ್ರವೇಶಿ ಸಿದ ಚಿರತೆಯು ಸೆರೆಯಾಗುವ ಮೂಲಕ ಸಿಬ್ಬಂದಿಯ ಕಾರ್ಯಾ ಚರಣೆಯು ಯಶಸ್ವಿಯಾಗಿದೆ. ಅರಣ್ಯ ಇಲಾಖೆಯ ಸಿಬ್ಬಂದಿಯು ಚಿರತೆಯಿದ್ದ ಬೋನನ್ನು ಸಾಗಿಸಲಾಗುತ್ತಿದೆ. ಸತ್ತ ಹಸುವಿನ ಮಾಲೀಕನಿಗೆ ಪರಿಹಾರ ನೀಡಲು ದಾಖಲೆಗಳನ್ನು ಪಡೆದು ಕ್ರಮವಹಿಸಲಾಗಿದೆ.

ಬೋನಿಗೆ ಬಿದ್ದಿರುವ ಚಿರತೆಯು ಸುಮಾರು ೪ ವರ್ಷ ಪ್ರಾಯದ್ದಾಗಿದ್ದು, ಚಿರತೆಯನ್ನು ಮೇಲಧಿಕಾರಿಗಳ ಸೂಚನೆಯಂತೆ ಕಾಡಿಗೆ ಬಿಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಯಶ್ಮ ಮಾಚಮ್ಮ ತಿಳಿಸಿದರು.

ಉಪ ವಲಯಾರಣ್ಯಧಿಕಾರಿ ಗುರುಸ್ವಾಮಿ, ಅರಣ್ಯ ಪಾಲಕ ದೇವೆಂದ್ರ, ರಾಘವೇಂದ್ರ ಮತ್ತಿತರರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು