News Karnataka Kannada
Friday, May 03 2024
ಹಾಸನ

ಬೇಲೂರು: ಜೆಪಿ ನಗರದಲ್ಲಿ ನಗರೋತ್ಥಾನ ಕಾಮಗಾರಿ ಅವೈಜ್ಞಾನಿಕ – ನಿವಾಸಿಗಳ ಆಕ್ರೋಶ

Nagarothana work in JP Nagar is unscientific
Photo Credit : News Kannada

ಬೇಲೂರು: ಬೇಲೂರು ಪುರಸಭಾ ವತಿಯಿಂದ ನಗರೋತ್ಥಾನ ಯೋಜನೆ ಅಡಿ ನಡೆಯುತ್ತಿರುವ ರಸ್ತೆ ಕಾಮಗಾರಿಗಳು ಕಳಪೆ ಮತ್ತು ಅವೈಜ್ಞಾನಿಕತೆಯಿಂದ ಕೂಡಿದೆ ಈ ಬಗ್ಗೆ ಸಂಬಂಧ ಪಟ್ಟವರು ಗಮನ ಹರಿಸ ಬೇಕು ಎಂದು ಸ್ಥಳಿಯ ನಿವಾಸಿಗಳು ಆಗ್ರಹಿಸಿದ್ದಾರೆ.

ಈಗಾಗಲೇ ಬೇಲೂರು ಶಾಸಕ ಹೆಚ್.ಕೆ.ಸುರೇಶ್ ಅವರು ಕ್ಷೇತ್ರದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕಿದೆ. ವಿಶೇಷವಾಗಿ ಬೇಲೂರು ಪುರಸಭಾ ೨೩ ವಾರ್ಡ್ ಗಳಲ್ಲಿ ನಗರೋತ್ಥಾನ ಮತ್ತು ವಿಶೇಷ ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿಗಳು ಗುಣಮಟ್ಟದಲ್ಲಿ ವೈಫಲ್ಯ ಹೊಂದಿದೆ ಎಂಬ ಬಗ್ಗೆ ಸ್ವತಃ ಶಾಸಕರೇ ಪರಿಶೀಲನೆ ನಡೆಸಿದ್ದು, ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಕಠಿಣ ಎಚ್ಚರಿಕೆ ನೀಡಿದ್ದರು ನಗರೋತ್ಥಾನ ಅಡಿಯಲ್ಲಿನ ಕೆಲಸಗಳು ಕಳಪೆ ಮತ್ತು ಅವೈಜ್ಞಾನಿಕತೆಯಿಂದ ಕೂಡಿದೆ ಎಂದು ಶಾಲಾ ಪೋಷಕರು ದೂರಿದ್ದಾರೆ.

ಈ ಬಗ್ಗೆ ಮಾತನಾಡಿದ ಪುರಸಭಾ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್, ಪಟ್ಟಣದ ೨೩ ವಾರ್ಡ್‌ಗಳಲ್ಲಿ ರೂ ೮.೫ ಕೋಟಿ ನಗರೋತ್ಥನ ಮತ್ತು ರೂ ೫ ಕೋಟಿ ವಿಶೇಷ ಅನದಾನದ ಕೆಲಸಗಳು ನಡೆಯುತ್ತಿವೆ. ಪೂರ್ಣಪ್ರಜ್ಞ ಶಾಲೆ ಪಕ್ಕದ ಕೆಲಸದ ಬಗ್ಗೆ ನಮಗೆ ಮೊದಲನಿಂದಲೂ ಅಸಮಾದಾನವಿತ್ತು ಅಧಿಕಾರಿ ಮತ್ತು ಗುತ್ತಿಗೆದಾರರನ್ನು ಕರೆದು ಗುಣಮಟ್ಟದ ಕಾಮಗಾರಿಗಳನ್ನು ನಡೆಸುವಂತೆ ತಿಳಿಸಿದರೂ ಯಾವ ಗುಣಮಟ್ಟದ ಕೆಲಸ ನಡೆಸಿಲ್ಲ, ಕಾಮಗಾರಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು ಕಾಮಗಾರಿಯ ಹಣವನ್ನು ತಡೆಯಲಾಗುತ್ತದೆ. ಈ ಬಗ್ಗೆ ಎಲ್ಲಾ ಸದಸ್ಯರು ಕೂಡ ಗುಣಮಟ್ಟದ ಕಾಮಗಾರಿ ನಡೆಸಲು ಬೆಂಬಲ ನೀಡಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು