News Karnataka Kannada
Monday, April 29 2024
ಹಾಸನ

ಬೇಲೂರು: ಲಂಚ ಮುಕ್ತ ಆಡಳಿತ ಕೊಡುವುದೇ ಕೆಆರ್‌ಎಸ್ ಪಕ್ಷ

Belur: KRS party to provide bribe-free governance
Photo Credit : News Kannada

ಬೇಲೂರು: ಮುಂದಿನ ಸಾರ್ವತ್ರಿಕಾ ಚುನಾವಣೆಯಲ್ಲಿ ಕೆ ಆರ್.ಎಸ್ ಪಕ್ಷದಿಂದ ಸ್ಪರ್ದಿ ಸಲು ತಾಲ್ಲೂಕಿನಲ್ಲಿ ಸೂಕ್ತ ಅಭ್ಯರ್ಥಿಗೆ ಮುಕ್ತ ಅವಕಾಶವನ್ನು ನೀಡಲಾಗುವುದು ಎಂದೂ ಕೆ ಆರ್ ಎಸ್ ಪಕ್ಷದ ತಾಲ್ಲೂಕು ಅಧ್ಯಕ್ಷ ಹರ್ಷವರ್ಧನ್ ಕರೆ ನೀಡಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಕರುನಾಡು ಕಟ್ಟುವ ಸಲುವಾಗಿ ಲಂಚಮುಕ್ತ ಆಡಳಿತ ಕೊಡುವುದೇ ಪಕ್ಷದ ದೈಯ, ಕನ್ನಡ ನಾಡಿಗೆ ಪ್ರಣಾಳಿಕೆ ಕುರಿತು ಸ್ವಾಭಿಮಾನಿ ಕನ್ನಡಿಗರ ಜೊತೆ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಜ್ಞಾನಸಿಂದು ಸ್ವಾಮಿ ರವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದು ಈ ವರಗೆ ೨೪ ಜಿಲ್ಲೆಯ ಎಲ್ಲಾ ತಾಲ್ಲೂಕ್ಕು ಗಳಲ್ಲೂ ಯಾತ್ರೆ ನಡೆಸಿ ಯಶಸ್ವಿ ಯಾಗಿದ್ದೇವೆ ಎಂದರು.

ರಾಜ್ಯದ ೨೨೪ ಕ್ಷೇತ್ರಗಳಲ್ಲಿ ಈಗಾಗಲೇ ೭೨ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು. ಜನರ ಸಮಸ್ಯೆ, ಅವರಿಗೆ ಬೇಕಾದ ಯೋಜನೆ, ನೆಮ್ಮದಿ ಬದುಕು ಕಟ್ಟಲು ಬೇಕಾದ ವಿಷಯಗಳ ಬಗ್ಗೆ ಚರ್ಚಿಸಲಾಗುತ್ತಿದೆ, ಬೇಲೂರು ತಾಲ್ಲೂಕಿನಲ್ಲಿ ಈಗಾ ಗಲೇ ಅಭ್ಯರ್ಥಿಯನ್ನು ಸೂಚಿಸಿ ದ್ದು, ಬೇರೆ ಯಾರೇ ಬಂದು ಸ್ಪರ್ದಿಸಲು ಇಚ್ಛೆಸಿದರೆ ಚರ್ಚಿಸಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಿ ತಾಲೂಕಿನಲ್ಲಿ ಕೆ ಆರ್ ಎಸ್ ಪಕ್ಷದ ಬಾವುಟ ಹಾರಿಸಲು ಕಠಿಣ ಶ್ರಮ ಪಡಲಿದ್ದೇವೆ ಎಂದೂ ಹೇಳಿದರು,

ಸುನಿಲ್ ಬೆಳ್ಳೋಟ್ಟೆ  ನಾಡಿ ಪಕ್ಷವು ರೈತ ಪ್ರಣಾಳಿಕೆ, ಯುವ ಜನ ಪ್ರಣಾಳಿಕೆ, ಮಹಿಳಾ ಪ್ರಣಾಳಿಕೆ, ಹಾಗೂ ಪರಿಸರ ಪ್ರಣಾಳಿಕೆಗಳನ್ನು ಸಿದ್ದಪಡಿಸಿದ್ದು, ನಮ್ಮ ಪಕ್ಷವು ಲಂಚ ಮುಕ್ತ ರಾಜ್ಯವನ್ನಾಗಿ ಮಾಡಲು ಒಗ್ಗಟ್ಟಿನಿಂದ ಹೋರಾಡಲಿದ್ದೇವೆ. ಕಚೇರಿಗಳಲ್ಲಿ ಜನರ ಸಮಸ್ಯೆಗೆ ತಕ್ಷಣ ಸ್ಪಂದಿಸುವ ಹಾಗೂ ಅಧಿಕಾರಿಗಳು ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಕಚೇರಿಗಳಿಗೆ ತಂಡ ಭೇಟಿ ನೀಡುತ್ತಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗಿರೀಶ್, ಸಂಘಟನಾ ಕಾರ್ಯ ದರ್ಶಿ ಆದೇಶ್, ಸಿ ಎಲ್, ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು