ಬೇಲೂರು: ೨೦೨೩ರ ಸಾರ್ವತ್ರಿಕಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 7 ಕ್ಷೇತ್ರಗಳನ್ನು ನಮ್ಮ ಪಕ್ಷದ ಅಭ್ಯರ್ಥಿಗಳು ಜಯಗಳಿಸಲಿದ್ದು ಅದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲವೆಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಹೇಳಿದರು.
ಶ್ರೀ ಚೆನ್ನಕೇಶವ ದೇವಸ್ಥಾನದ ಬಳಿ ಇರುವ ಬಯಲು ರಂಗಮಂದಿರದಲ್ಲಿ ಜೆ ಡಿ ಎಸ್ ಪಕ್ಷದವತಿಯಿಂದ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಿಂದೆ ಕಾಂಗ್ರೇಸ್ ಪಕ್ಷ ಅಧಿಕಾರದಲ್ಲಿದ್ದಾಗ ಯವ ಕೆಲಸವನ್ನು ಮಾಡಿದೆ ಎಂದು ಪಟ್ಟಿ ಬಿಡುಗಡೆ ಮಾಡಲಿ, ಇಲ್ಲಿಯ ತನಕ ಯಾವುದೇ ಒಂದು ಕಾಲೇಜನ್ನು ತರಲು ಅವರಿಂದ ಸಾಧ್ಯವಿಲ್ಲ, ಅಲ್ಪಸಂಖ್ಯಾತರ ಪರ ನಮ್ಮ ಪಕ್ಷ ಅಂತ ಹೇಳಿಕೊಳ್ಳುವ ಕಾಂಗ್ರೇಸ್ ಅಲ್ಪಸಂಖ್ಯಾತರ ಮೇಲೆ ಹಲ್ಲೆ ನಡೆಸಿದ್ದಾರೆ, ಅಲ್ಲದೆ ಪಕ್ಷಕ್ಕಾಗಿ ಹಲವಾರು ವರ್ಷಗಳಿಂದ ದುಡಿದ ಹಿರಿಯರ ಮೇಲೆ ಹಲ್ಲೆ ನಡೆಸಿ ರೌಡಿ ತನವನ್ನು ಮೆರೆದಿದ್ದಾರೆ, ನಮ್ಮ ಪಕ್ಷ ಹಿರಿಯರ ಮೇಲೆ ಅಪಾರವಾದ ಗೌರವ ಹೊಂದಿದ್ದು ಮುಂದೆ ನಡೆಯುವ ಚುನಾವಣೆಯಲ್ಲಿ ನಮ್ಮ ಪಕ್ಷ ಜೆಲ್ಲೆಯ ಎಲ್ಲಾ ತಾಲ್ಲೂಕ್ಕುಗಳಲ್ಲೂ ನಮ್ಮ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ,೫೦ ವರ್ಷದಿಂದ ಇಲ್ಲದ ಧ್ವನಿ ಇಂದು ಪ್ರಜಾ ಧ್ವನಿ ಎಂದು ಹೇಳುತ್ತಿದ್ದಾರೆ, ಲೋಕಸಭೆಯಲ್ಲಿ ಬಡವರ ಪರ, ರೈತ ಪರ ಧ್ವನಿ ಎತ್ತದ ಕಾಂಗ್ರೇಸ್ ಇಂದು ಪ್ರಜಾ ಧ್ವನಿ ಅನ್ನೋ ಯಾತ್ರೆ ಆರಂಭಿಸಿದ್ದಾರೆ, ಉಚಿತ ೨೦೦ ಯೂನಿಟ್ ವಿದ್ಯುತ್ ನೀಡಲಿದ್ದೇವೆ ಎಂದು ಚುನಾವಣಾ ಗಿಮಿಕ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ ಮಲೆನಾಡು ಭಾಗಕ್ಕೆ ಯಾವುದೇ ಕೆಲಸ ಮಾಡುತ್ತಿಲ್ಲ, ಕೇವಲ ಬಯಲು ಸೀಮೆಗೆ ಸೀಮಿತರಾಗಿದ್ದಾರೆ ಎಂದು ಕಾಂಗ್ರೇಸ್, ಬಿಜೆಪಿ ಪಕ್ಷ ಅಪ ಪ್ರಚಾರ ಮಾಡುತ್ತಿದ್ದಾರೆ, ಮಲೆನಾಡು ಭಾಗಕ್ಕೆ ಸುಮಾರು ೧೫೦ ಕೋಟಿ ಅನುದಾನ ನೀಡಿದ್ದೇವೆ, ಸೀರೆ, ಕುಕ್ಕರು, ಬಿರಿಯಾನಿ ಹಂಚಿ ಜನರನ್ನು ತಮ್ಮತ್ತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ, ನಮ್ಮ ಪಕ್ಷ ಯಾವುದೇ ಆಮಿಷ ತೋರಿಸುತ್ತಿಲ್ಲ ಯಾಕೆಂದರೆ ನಮಗೆ ಕಾರ್ಯಕರ್ತರೇ ನಮ್ಮ ಪಕ್ಷದ ಜೀವಾಳ, ಅನ್ಯ ಪಕ್ಷದವರಿಗೆ ಕಾರ್ಯಕರ್ತರಿಲ್ಲದೆ ಈ ರೀತಿಯ ಆಮಿಷದ ಕೆಲಸ ಮಾಡುತ್ತಿದ್ದಾರೆ, ಪ್ರತಿ ಮನೆಯಲ್ಲೂ ಜೆ ಡಿ ಎಸ್ ಕಾರ್ಯಕರ್ತರಿದ್ದಾರೆ, ಅವರನ್ನು ತಲುಪುವ ಕೆಲಸವನ್ನು ಮುಖಂಡರು ಮಾಡಬೇಕು, ಕಾರ್ಯಕರ್ತರೇ ಪಕ್ಷದ ಜೀವಾಳ,ಈ ಹಿಂದೆ ಬೇಲೂರು ಕ್ಷೇತ್ರ ಹಿಂದುಳಿದ ಕ್ಷೇತ್ರವೆಂದು ದಾಖಲಾಗಿತ್ತು, ಆದರೆ ನಮ್ಮ ಪಕ್ಷ ಅಧಿಕಾರದಲ್ಲಿ ಇಲ್ಲದೆ ಇದ್ದರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು,ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ರೇವಣ್ಣನವರ ಶ್ರಮದಿಂದ ಅನುದಾನವನ್ನು ಬೇಲೂರು ತಾಲ್ಲೂಕನ್ನು ಅಭಿರ್ವದ್ದಿ ಪಡಿಸಿ ಹಿಂದುಳಿದ ಹಣೆ ಪಟ್ಟಿಯನ್ನು ಅಳಿಸಿದ್ದಾರೆ, ಎಲ್ಲರೂ ಒಗ್ಗಟ್ಟಿನಿಂದ ಹೋರಾಡಿದರೆ ನಮ್ಮ ಪಕ್ಷ ಅಧಿಕಾರಕ್ಕೆ ಬರುಹುದನ್ನು ತಡೆಯಲು ಸಾಧ್ಯವಿಲ್ಲವೆಂದು ಹೇಳಿದರು.
ಶಾಸಕ ಲಿಂಗೇಶ್ ಮಾತನಾಡಿ ಕ್ಷೇತ್ರಕ್ಕೆ ನೀರಾವರಿ ಯೋಜನೆಗಳಲ್ಲಿ ರಣಗಟ್ಟ, ಎತ್ತಿನಹೊಳೆ ಯೋಜನೆ ನೆನೆಗುದಿಗೆ ಬಿದ್ದಿದ್ದನು ಪುನಃ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ೧೦೦ ಕೋಟಿ ರೂ ಗಳನ್ನು ಇಟ್ಟಿದ್ದರು, ಅದನ್ನು ಅನುಷ್ಠಾನಕ್ಕೆ ತರಲು ದೇವೇಗೌಡ್ರು, ರೇವಣ್ಣ ಅವರ ಶ್ರಮದಿಂದ ನನ್ನ ಹೋರಾಟದಿಂದ ಇಂದು ಹಳೇಬೀಡು, ಮಾದಿಹಳ್ಳಿ, ಆಡಗೂರು ಹಾಗೂ ಸುತ್ತಮುತ್ತಲ ಸುಮಾರು ೬೯ ಕೆರೆಗಳನ್ನು ತುಂಬಿಸುವ ಕೆಲಸ ಮಾಡಿ ರೈತರ ಬದುಕು ಆಸನಾಗಲು ಹೋರಾಡಿದ್ದೇವೆ, ತಾಲ್ಲೂಕಿನಲ್ಲಿ ಯಾವುದೇ ಅಭಿರ್ವದ್ದಿ ಆಗಿಲ್ಲ ಅಂತ ಇತರೆ ಪಕ್ಷಗಳು ಹೇಳುತ್ತಿವೆ ಕ್ಷೇತ್ರಕ್ಕೆ ೧೮೦೦ ಕೋಟಿ ಹಣವನ್ನು ತಂದು ಶಾಲೆ, ಕೆರೆ, ಸಮುದಾಯ ಭವನಗಳು, ಅಂಬೇಡ್ಕರ್ ಭವನ, ರಸ್ತೆ, ಚರಂಡಿ, ಇನ್ನೂ ಮುಂತಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಪ್ರಾಮಾಣಿಕ ಕೆಲಸ ಮಾಡಿದ್ದೇನೆ, ಅಲ್ಲದೆ ಸುಮಾರು ಕೆಲಸಗಳನ್ನು ಮಾಡಿದ್ದು ಒಂದು ನಯಾ ಪೈಸೆ ಲಂಚವನ್ನು ಪಡೆದಿಲ್ಲ, ಸಾಕ್ಷಿ ಇದ್ದರೆ ರಾಜಕೀಯದಿಂದ ನಿವೃತ್ತಿ ಹೊಂದುತ್ತೆನೆ ಎಂದು ಹೇಳಿದರು.
ಪ್ರಾಸ್ತವಿಕವಾಗಿ ತಾಲ್ಲೂಕು ಜೆ ಡಿ ಎಸ್ ಅಧ್ಯಕ್ಷ ತೋಚ ಅನಂತ ಸುಬ್ಬರಾವ್ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಜಿಲ್ಲಾಧ್ಯಕ್ಷ ಬಿ ಡಿ ಚಂದ್ರೆಗೌಡ, ಹಾಸನ ಸಹಕಾರ ಬ್ಯಾಂಕ್ ನ ಮಾಜಿ ಉಪಾಧ್ಯಕ್ಷ ಎಂ ಎ ನಾಗರಾಜ್, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರಾದ ಲತಾಮಂಜೇಶ್ವರಿ, ಲತಾಧೀಲಿಪ್, ಮಾಜಿ ತಾಲ್ಲೂಕ್ ಪಂಚಾಯತಿ ಅಧ್ಯಕ್ಷ ಅಬ್ದುಲ್ ಶುಭಾನ್, ತಾಲ್ಲೂಕು ಜೆ ಡಿ ಎಸ್ ಪ್ರಧಾನ ಕಾರ್ಯದರ್ಶಿ ಸಿ ಎಚ್ ಮಹೇಶ್,ತಾಲ್ಲೂಕು ಯುವ ಜೆ ಡಿ ಎಸ್ ಅಧ್ಯಕ್ಷ ಉಮೇಶ್, ಮುಖಂಡರಾದ ಮಲ್ಲೇಗೌಡ, ಬಲ್ಲೇನಹಳ್ಳಿ ರವಿ, ಸೌಮ್ಯ ಆನಂದ್,ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿಧಿ, ಭಾರತಿ ಅರುಣಕುಮಾರ್ ,ಸದಸ್ಯರು ಇತರರು ಇದ್ದರು