News Karnataka Kannada
Friday, May 17 2024
ಹಾಸನ

ಬೇಲೂರು: ಹಲ್ಮಿಡಿ ಹಾಲಿನ ಡೈರಿ ಸಂಘಕ್ಕೆ ನೂತನ ಆಡಳಿತ ಮಂಡಳಿ ರಚನೆ

Belur: Halmidi Milk Dairy Association forms new governing body
Photo Credit : News Kannada

ಬೇಲೂರು: ತಾಲ್ಲೂಕಿನ ಹಲ್ಮಿಡಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ೧೩ ಸ್ಥಾನಗಳ ಪೈಕಿ ೧೧ ಸ್ಥಾನ ಅವಿರೋಧವಾಗಿ ಆಯ್ಕೆಯಾಗಿದ್ದು, ಅಧ್ಯಕ್ಷರಾಗಿ ಹೆಚ್.ಎಂ.ಪಾಲಾಕ್ಷ, ಉಪಾಧ್ಯಕ್ಷರಾಗಿ ಹೆಚ್.ಪಿ.ಮಂಜೇಗೌಡ ಹಾಗೂ ನಿರ್ದೇಶಕರಾಗಿ ಸರ್ವಶ್ರೀಆನಂದೇಗೌಡ, ಹೆಚ್.ಕೆ.ಶೇಷೇಗೌಡ, ಹೆಚ್.ಎಂಬಸವರಾಜು, ಹೆಚ್.ಪಿ.ಮಂಜೇಗೌಡ, ಹೆಚ್.ಕೆ.ಕುಮಾರ್, ಹೆಚ್.ಎಲ್.ಗುರುಮಲ್ಲೇಶ್, ಹೆಚ್.ವಿ.ರುದ್ರೇಗೌಡ, ಪಾಲಾಕ್ಷ, ಮಮತಾ, ಚಂದ್ರಕಲಾ, ಗೌರಮ್ಮ ಅಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಜೆ.ಸಿ.ಸಾವಿತ್ರಮ್ಮ ಅಧಿಕೃತವಾಗಿ ಘೋಷಣೆ ಮಾಡಿದರು.

 ಆರು ತಿಂಗಳ ಹಿಂದೆ ಸಂಘದ ವಾರ್ಷಿಕ ಸಭೆಯಲ್ಲಿ ಸಂಘದ ಕಾರ್ಯದರ್ಶಿ ವಾರ್ಷಿಕ ವರದಿಯನ್ನು ಮಂಡಿಸಿದ್ದು,  ಪ್ರಸಕ್ತ ೨೦೨೨ ನೇ ಸಾಲಿನಲ್ಲಿ ರೂ ೪.೫೦ ಲಕ್ಷ ಲಾಭ ಗಳಿಸಿದ ಬಗ್ಗೆ ಸಭೆಗೆ ವರದಿ ಮಂಡಿಸಲಾಗಿತ್ತು.

ಈ ಲಾಭವನ್ನು ಗಮನಿಸಿದ ಅಂದಿನ ಅಧ್ಯಕ್ಷ ಹೆಚ್.ಎಂ. ಗಂಗೇಗೌಡ ತಮ್ಮ ಸಂಬಂಧಿಗಳ ಮೂಲಕ ದುರುದ್ದೇಶದಿಂದ ಕಾರ್ಯದರ್ಶಿಯ ಮೇಲೆ ವಿನಾಕಾರಣ ವೃಥಾ ಆರೋಪ ಮಾಡಿ ಸುಮಾರು ಒಂದು ತಿಂಗಳ ಕಾಲ ಅಧ್ಯಕ್ಷರ ಸಂಬಂಧಿ  ಡೈರಿಯಿಂದ ಕಾರ್ಯ ದರ್ಶಿಯನ್ನು ವಜಾಗೊಳಿಸಬೇಕು ಎಂದು ಹಾಲು ಸ್ವೀಕರಣೆ ವೇಳೆ ಗಲಾಟೆ ಮಾಡುತ್ತಿದ್ದರು. ಹಾಗೆಯೇ ಹಾಲಿ ಕಾರ್ಯದರ್ಶಿಯನ್ನು ಪದಚ್ಯುತಿಗೊಳಿಸಿ ಅಧ್ಯಕ್ಷರ ಮಗನನ್ನು ಕಾರ್ಯದರ್ಶಿಯನ್ನಾಗಿ ನೇಮಕ ಮಾಡುವ ಹುನ್ನಾರ ನಡೆಸಿದ್ದರು.

ಈ ಎಲ್ಲಾ ಅನಗತ್ಯ ಬೆಳವಣಿಗೆಯನ್ನು ಗಮನಿಸಿದ ೧೦ ಮಂದಿ ನಿರ್ದೇಶಕರ ಪೈಕಿ ಏಳು ಮಂದಿ ನಿರ್ದೇಶಕರು ಅಧ್ಯಕ್ಷರ ವರ್ತನೆ ಖಂಡಿಸಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು, ಬಳಿಕ ಸಕಲೇಶಪುರ ಉಪ ವಿಭಾಗ ಸಹಕಾರ ಸಂಘಗಳ ಕಾಯಿದೆದಡಿಯಲ್ಲಿ ಸದಸ್ಯರ ರಾಜೀನಾಮೆ ಅಂಗೀಕರಿಸಿ ಸೂಪರ್‌ಸೀಡ್ ಮಾಡಿ ಆದೇಶ ಹೊರಡಿಸಿದ್ದರು. ಬಳಿಕ ಆರು ತಿಂಗಳ ನಂತರದಲ್ಲಿ ನೂತನ ಆಡಳಿತ ಮಂಡಳಿ ರಚನೆಗೆ ಅನುವು ಮಾಡಿತ್ತು, ಅಂತಯೇ ನೂತನ ಆಡಳಿತ ಮಂಡಳಿ ಅವಿರೋಧವಾಗಿ ಅಯ್ಕೆ ಯಾಗಿದ್ದು, ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಬಗ್ಗೆ  ಮಾತನಾಡಿದ ನೂತನ ಅಧ್ಯಕ್ಷ ಹೆಚ್.ಎಂ.ಪಾಲಾಕ್ಷ, ನಮ್ಮ ಸಂಘದ ಕಾರ್ಯದರ್ಶಿ ಹೆಚ್.ಪಿ.ಚನ್ನೇಗೌಡ ಯಾವುದೇ ಅವ್ಯವಹಾರ ನಡೆದಿಲ್ಲ, ಹಲ್ಮಿಡಿ ಸಂಘ ಉತ್ತಮವಾಗಿ ನಡೆಯುತ್ತಿದೆ. ಇದೇ ಸಂಘದಿಂದ ನೂರಾರು ಕುಟುಂಬಗಳು ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡಿದೆ. ಇಂತಹ ಸಂಘಕ್ಕೆ ನಾನು ಅಧ್ಯಕ್ಷನಾಗಿದ್ದು ನನ್ನ ಭಾಗ್ಯವೇ ಸರಿ ಎಂದು ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಹೆಚ್.ಪಿ.ಚನ್ನೇಗೌಡ, ಗ್ರಾಮಸ್ಥರಾದ ಪಮೇಶ್ವರಪ್ಪ, ಶಿವಣ್ಣ, ಕೆಂಪೇಗೌಡ, ಗಂಗೇಗೌಡ, ಗೋವಿಂದೇಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ವಿನೂದ ಸತೀಶ್, ವಸಂತದೇವರಾಜ್ ಇನ್ನು ಮುಂತಾದವರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು