News Karnataka Kannada
Friday, May 03 2024
ಹಾಸನ

ಬೇಲೂರು: ಸರ್ಕಾರಿ ನೌಕರರೇ ಸರ್ಕಾರದ ಜೀವಾಳ- ಕೆ.ಎಸ್ ಲಿಂಗೇಶ್

Beluru
Photo Credit : News Kannada

ಬೇಲೂರು: ಸರ್ಕಾರಿ ನೌಕರರೇ ಸರ್ಕಾರದ ಜೀವಾಳ, ನೌಕರರ ಉತ್ತಮ ಕೆಲಸದಿಂದ ಸುಭದ್ರ ಸರ್ಕಾರ ನೀಡಲು ಸಾಧ್ಯವೆಂದು ಶಾಸಕ ಕೆ ಎಸ್ ಲಿಂಗೇಶ್ ಹೇಳಿದರು.

ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ರಾಜ್ಯ ಸರ್ಕಾರಿ ನೌಕರರ ಸಮಾವೇಶ ಮತ್ತು ಕಾರ್ಯಾಗಾರ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅಂಬೇಡ್ಕರ್ ನೀಡಿರುವ ಕಾರ್ಯಂಗ, ನ್ಯಾಯಂಗ, ಶಾಸ ಕಾಂಗದ ಅಡಿಯಲ್ಲಿ ಪ್ರಾಮಾಣಿಕ ವಾಗಿ ಕೆಲಸ ಮಾಡಿದರೆ ಮಾತ್ರ ಸುಭದ್ರ ದೇಶ ಕಟ್ಟಲು ಸಾಧ್ಯ, ಪ್ರಜಾಪ್ರಭುತ್ವದಲ್ಲಿ ಕಲಾಂ ಅವರ ಕನಸನ್ನು ನನಸು ಮಾಡಲು ಪ್ರಾಮಾಣಿಕ ಕೆಲಸ ಮಾಡಬೇಕು ಎಂದು ಕಿವಿ ಮಾತು ಹೇಳಿದರು.

ಸರ್ಕಾರ ಯಾವುದೇ ಇರಲಿ ನೌಕರರು ಉತ್ತಮವಾದ, ಸ್ವಚ್ಛ ವಾದ ಕೆಲಸವನ್ನು ಸರ್ಕಾರಿ ಕೆಲಸ ದೇವರ ಕೆಲಸವೆಂದು ಭಾವಿಸಿ ಮಾಡಿದರೆ ಉತ್ತಮ ಆಡಳಿತ ಕೊಡಲು ಹಾಗೂ ರಾಜ್ಯದ ಜನತೆ ಯ ಸಮಸ್ಯೆಗಳನ್ನು ಭಗೆಹರಿಸಲು ಸುಲಭ, ನೌಕರರಿ ಲ್ಲದೆ ಸರ್ಕಾರ ನಡೆಸಲು ಸಾಧ್ಯ ವಿಲ್ಲ, ಇಂದು ಭಯೋತ್ಪಾದಕರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಲ ವಾರು ಕೃತ್ಯಗಳನ್ನು ಮಾಡುತ್ತಿದ್ದು ಜನರ ನೆಮ್ಮದಿ ಹಾಳುಮಾಡು ತ್ತಿದ್ದಾರೆ ಎಂದು ಅತಂಕ ವ್ಯಕ್ತ ಪಡಿಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ ಎಸ್ ಷಡಾಕ್ಷರಿ ಮಾತನಾಡಿ ಅಧಿಕಾರ ಸಿಕ್ಕಾಗ ಉತ್ತಮ ಕೆಲಸ ಮಾಡ ಬೇಕು, ಅದೇ ರೀತಿ ಸರ್ಕಾರಿ ನೌಕರಿ ಕೆಲಸ ಸಿಕ್ಕಿದಾಗ ಸ್ವಾರ್ಥತೆ ಬಿಟ್ಟಿ ಜನಸೇವೆ ಮಾಡಬೇಕು, ಸರ್ಕಾರ ನೌಕರರಿಗೆ ವೈದ್ಯಕೀಯ ಸೌಲಭ್ಯ ಒದಗಿಸುವ ಕೆಲಸಕ್ಕೆ ಮುಂದಾಗಿದ್ದು ಆರೋಗ್ಯಕ್ಕೆ ಸಂಬಂಧಿಸಿದಂತೆ ಸ್ಮಾರ್ಟ್ ಕಾರ್ಡ್ ಜಾರಿಗೆ ತಂದು ವಿತರಿಸ ಲು ಮುಂದಾಗಿದೆ ಎಂದರು.

ಆಶಯ ನುಡಿಯನ್ನು ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಸಿ ಎಚ್ ಲೋಕೇಗೌಡ ಆಡಿದರು. ರುದ್ರಪ್ಪ, ಎಚ್ ಎಲ್ ಮಲ್ಲೇಶ ಗೌಡ, ಎಂ ಡಿ ಕಾಂತ ರಾಜ್, ಎಸ್ ರಮೇಶ್, ಶ್ರೀಕಾಂ ತ್, ನಾರಾಯಣ್  ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು