News Karnataka Kannada
Saturday, May 04 2024
ಹಾಸನ

ಬೇಲೂರು: ಒಕ್ಕಲಿಗ ಸಮುದಾಯದ ಶತಾಯುಷಿಗಳಿಗೆ ಸನ್ಮಾನ

Centenarians of Vokkaliga community felicitated
Photo Credit : By Author

ಬೇಲೂರು: ಸಿನಿಕಾನ್ ಸಿಟಿ ಎಂದೇ  ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಯಲ್ಲಿ ಒಕ್ಕಲಿಗರ ಪಾತ್ರ ಹಿರಿದು ಎಂದು ಅದಿಚುಂಚನಗಿರಿ ಹಾಸನ ಶಾಖಾ ಮಠದ ಪೂಜ್ಯ ಶ್ರೀ ಶಂಭುನಾಥಸ್ವಾಮೀಜಿಗಳು ಹೇಳಿದರು.

ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘ, ಕೆಂಪೇಗೌಡ ಸೇವಾ ಸಮಿತಿ, ಒಕ್ಕಲಿಗರ ಯುವ ವೇದಿಕೆ ವತಿಯಿಂದ ಹಮ್ಮಿಕೊಂಡ ನಾಡಪ್ರಭು ಕೆಂಪೇಗೌಡರ ಜಯಂತಿ ಆಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು 500 ವರ್ಷಗಳ ಹಿಂದೆ ಒಕ್ಕಲಿಗರ ಕುಲ ತಿಲಕ ಕೆಂಪೇಗೌಡರು ಇಂದಿನ ಐಟಿಬಿಟಿ ಬೆಂಗಳೂರು ನಿರ್ಮಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಬಳಿಕ ಕೆಂಗಲ್ ಹನುಮಂತಯ್ಯನವರು ಸೇರಿದಂತೆ ಇತ್ತೀಚಿನ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣರವರು, ಸದಾನಂದಗೌಡರು ಹಾಗೂ ಹೆಚ್.ಡಿ. ಕುಮಾರಸ್ವಾಮಿರವರು ಬೆಂಗಳೂರಿನ ಸರ್ವತೋಮುಖ ಅಭಿವೃದ್ಧಿಗೆ ತಮ್ಮ ಅವಧಿಯಲ್ಲಿ ಮುನ್ನುಡಿ ಬರೆದ ಇಂತಹ ಜನಾಂಗ ಇತ್ತೀಚಿನ ದಿನದಲ್ಲಿ ಸಂಘಟನೆ ಕೊರತೆ ಎದ್ದು ಕಾಣುತ್ತಿದೆ ಎಂದ ಅವರು ಬೆಂಗಳೂರು ನಿರ್ಮಾಣಕ್ಕೆ ಕೆಂಪೇಗೌಡರ ಕುಟುಂಬದ ಹೆಣ್ಣು ಬಲಿಯಾದ ಘಟನೆಯನ್ನು ಎಂದಿಗೂ ಮರೆಯಬಾರದು. ಅವರ ಆದರ್ಶ, ರಾಜಾಡಳಿತ ಮತ್ತು ಪ್ರಜೆಗಳ ಮೇಲಿನ ಪ್ರೀತಿ ಅಭಿಮಾನಕ್ಕೆ ಮತ್ತು ಕೃಷಿಕರಾಗಿ ಅವರು 300 ಕೆರೆಗಳನ್ನು ನಿರ್ಮಿಸಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಕನ್ನಡ ನಾಡಿಗೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದ ರಾಷ್ಟಕವಿ ಕುವೆಂಪುರ ಅವರ ಜಯಂತಿ ಕೂಡ ಅದ್ದೂರಿಯಾಗಿ ನಡೆಸಬೇಕಿದೆ. ಸದ್ಯ ಹೊಯ್ಸಳ ನಾಡಿನಲ್ಲಿ ಇಲ್ಲಿನ ಯುವಶಕ್ತಿ ಕೆಂಪೇಗೌಡ ಜಯಂತಿಯನ್ನು ಅತ್ಯಂತ ಅರ್ಥಪೂರ್ಣವಾಗಿ ನಡೆಸಿದ್ದು ನಮಗೆ ಅತೀವ ಸಂತಸ ಉಂಟು ಮಾಡಿದೆ ಎಂದರು.

ಬೇಲೂರು ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ನಾಡಪ್ರಭು ಕೆಂಪೇಗೌಡರ ಆಡಳಿತ ಕನ್ನಡ ನಾಡಿನ ಬಹುತೇಕ ಕಡೆಯಲ್ಲಿ ವಿಸ್ತರಿಸಿತ್ತು. ಸಣ್ಣ-ಪುಟ್ಟ ಸಮುದಾಯಗಳನ್ನು ಗುರುತಿಸಿ ಅವರಿಗೆ ಗುಡಿಕೈಗಾರಿಕೆ ಮತ್ತು ಬೇಸಾಯಕ್ಕೆ ಅನುಕೂಲವಾದ ನೀರಾವರಿ ಕಲ್ಪಿಸಿದ ಕೀರ್ತಿ ಕೆಂಪೇಗೌಡರಿಗೆ ಸಲ್ಲುತ್ತದೆ. ಅವರು ನಾಡಿಗೆ ನೀಡಿದ ಹತ್ತಾರು ಜನಪರ ಕಾರ್ಯಕ್ರಮಗಳು ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ ಎಂದು ಅಭಿಪ್ರಾಯ ಪಟ್ಟರು.ಇದೇ ಸಂದರ್ಭದಲ್ಲಿ ಒಕ್ಕಲಿಗ ಜನಾಂಗದಲ್ಲಿ ಶತಯುಷಿಗಳಾದ ಗೋವಿನಹಳ್ಳಿ ಗಂಗಮ್ಮ ಅಣ್ಣೇಗೌಡ, ಸೋಂಪುರ ಗ್ರಾಮದ ನಂಜುಂಡೇಗೌಡ, ಅಗ್ಗಂಡಲು ನಿಂಗಮ್ಮ ಮತ್ತು ನಿಂಗೇಗೌಡ, ಇಬ್ಬೀಡು ಗ್ರಾಮದ ಪುಟ್ಟೇಗೌಡ ಮತ್ತು ಗೌರಮ್ಮ ಅವರನ್ನು ಪೂಜ್ಯ ಶ್ರೀಗಳು ಮತ್ತು ಗಣ್ಯರು ವಿಶೇಷವಾಗಿ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ಕೆ.ಪಿ. ಶೈಲೇಶ್, ಕೆಂಪೇಗೌಡ ಸೇವಾ ಸಮಿತಿ ಅಧ್ಯಕ್ಷ ಎಂ.ಎ.ನಾಗರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಡಿ.ಚಂದ್ರೇಗೌಡ, ಕಾಫಿ ಬೆಳೆಗಾರ ವೈ.ಎನ್.ಕೃಷ್ಣೇಗೌಡ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲ್ಲಹಳ್ಳಿ ಸುರೇಶ್, ರಾಜ್ಯ ಒಕ್ಕಲಿಗ ನಿಗಮ ಮಂಡಳಿ ನಿರ್ದೇಶಕಿ ಸುರಭಿರಘು, ಕಾಂಗ್ರೆಸ್ ಮುಖಂಡ ವೈ.ಟಿ.ದಾಮೋಧರ್, ಜಿ.ಕೆ.ಕುಮಾರ್,ಪುನೀತ್‌ಗೌಡ, ಯುವ ಘಟಕದ ಅಧ್ಯಕ್ಷರಾದ ಪೃಥ್ವಿ ಹಾಗೂ ಮಾಳೆಗೆರೆ ಬಸವರಾಜ್, ಪುರಸಭಾ ಸದಸ್ಯ ಆಶೋಕ್ ಹಾಗೂ ಜಗದೀಶ್, ರವಿಕುಮಾರ್, ಗಣೇಶ್, ಪೈಂಟ್ ರವಿ, ವಿ.ಎಸ್.ಬೋಜೇಗೌಡ, ಬಿ.ಸಿ.ಉಮೇಶ್, ಬಾಳೆಹಣ್ಣು ರಮೇಶ್, ಲತಾದಿಲೀಪ್, ವಕೀಲ ಪುಟ್ಟಸ್ವಾಮಿಗೌಡ, ಸಿ.ಎಸ್.ಪ್ರಕಾಶ್ ಸೇರಿದಂತೆ ಹಲವರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು